ಮಕರ ರಾಶಿಗೆ ತಿರುಗಿ ಬಿದ್ದ ಗುರು! ಧನಸ್ಸಿಗೆ ಹೆಂಗೆ ಗುರೂ?
ಈಗಾಗಲೇ ಶನಿಬಲದ ಜೊತೆಗೆ ಗುರುಬಲವೂ ಇದ್ದುದ್ದರಿಂದ ಸ್ವಲ್ಪ ಬೀಗುತ್ತಿದ್ದ ಮಕರ ರಾಶಿಯವರಿನ್ನು ಎಚ್ಚರ ವಹಿಸಿಕೊಳ್ಳಬೇಕು. ಏಕೆಂದರೆ ಇಷ್ಟು ದಿನ ಅಂದರೆ ಕಳೆದ ಒಂದು ವರ್ಷದಿಂದ ಗೋಚಾರದಿಂದ ಏಳರಲ್ಲಿದ್ದು ಸಾಕಷ್ಟು ಪ್ರಮಾಣದಲ್ಲಿ ಶುಭಾಶುಭಗಳನ್ನು ಕೊಟ್ಟಿದ್ದಾನೆ ಗುರು. ಇಲ್ಲವೆಂದವರೂ ಆಗಿರುವ ತೊಂದರೆಗಳನ್ನು ತಿಳಿಸಬಹುದು. ಇನ್ನು ಧನಸ್ಸು ರಾಶಿಯವರು ಗುರುಬಲದಿಂದ ಜೀವನದಲ್ಲಿ ಸಂತೋಷದ ಸೆಲೆ ಕಾಣುತ್ತಾರೆ.
ಧನಸ್ಸು : ಕಳೆದ ವರ್ಷದಿಂದ ಗುರುಬಲವಿಲ್ಲದೇ ಜೀವನವನ್ನೇ ಗೊಂದಲವಾಗಿಸಿಕೊಂಡಿದ್ದ ಇವರಿಗೆ ಎಲ್ಲದಕ್ಕೂ ಕಾಲ ಕೂಡಿ ಬಂದಿದೆ ಎಂಬುದನ್ನು ಅರಿತುಕೊಳ್ಳುವ ಸಮಯ. ಏಕೆಂದರೆ ಈ ಹಿಂದೆ ಗೋಚಾರದಿಂದ ಅಷ್ಟಮನಾಗಿದ್ದ ಗುರುವು ಸಾಕಷ್ಟು ಅನಾನುಕೂಲತೆಗಳನ್ನು ನೀಡಿದ್ದಾನೆ. ಇದೂ ಸಾಲದೆಂಬಂತೆ ಸಾಡೇಸಾತಿ ಶನಿಕಾಟ ಬೇರೆ ಶುರುವಾಗಿದೆ. ಹೀಗಾಗಿ ಬೇಸರದ ದಿನಗಳನ್ನು ಕಳೆದಿದ್ದ ಇವರು ಇನ್ಮುಂದೆ ಗುರುಬಲದಲ್ಲಿ ಅಂದುಕೊಂಡ ಯೋಜನೆಗಳನ್ನು ಪೂರೈಸಿಕೊಳ್ಳಬಹುದು.
ಈಗಾಗಲೇ ನವಮ ಸ್ಥಾನದಲ್ಲಿದ್ದು ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿದ್ದ ಗುರು ಈಗ ಧನಸ್ಸು ರಾಶಿಯವರಿಗೆ 9ನೇ ಸ್ಥಾನಕ್ಕೆ ಬಂದು ಶುಭಫಲ ನೀಡಲಿದ್ದಾನೆ. [ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]

ಗುರುವಿನ ಈ ಗೋಚಾರದಿಂದ ಕೆಲಸದಲ್ಲಿದ್ದವರಿಗೆ ಉತ್ತಮ ಸಮಯವಾದರೆ, ಕೆಲಸ ಹುಡುಕುವವರಿಗೆ ಹೊಸ ಇಚ್ಛಿತ ಕೆಲಸ ಸಿಕ್ಕು ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳುವ ಯೋಗ ಆರಂಭವಾಗುತ್ತದೆ. ಕುಟುಂಬದವರೂ ಕೂಡ ಸಾಕಷ್ಟು ರೀತಿಯಲ್ಲಿ ಸಹಾಯ, ಸಹಕಾರ ನೀಡುತ್ತ ಬೆಂಬಲಕ್ಕೆ ನಿಲ್ಲುತ್ತಾರೆ. ಕಂಕಣಾಕಾಂಕ್ಷಿಗಳು ಹಸೆಮಣೆ ಏರುವ ಶುಭಯೋಗ ಹೊಂದುವರು. ಅದೃಷ್ಟವೆಂದರೆ ಇದೇ ಎನ್ನುವ ಅನುಭವ ಕೂಡ ಇವರಿಗಾಗುತ್ತದೆ. ಜೊತೆಗೆ ವಂಶವೃಕ್ಷಕ್ಕಾಗಿ ಪರಿತಪಿಸುತ್ತಿರುವವರಿಗೆ ಶುಭಕರ ಸುದ್ದಿ ಸಂತಸ ತರುತ್ತದೆ. ಹಣಕಾಸಿನ ವಿಷಯದಲ್ಲಂತೂ ಮತ್ತೊಬ್ಬರೂ ಕೂಡ ಕೈಚಾಚಿ ನಿಲ್ಲುವ ಪರಿಸ್ಥಿತಿ ನೋಡುವುದರಿಂದ ಮನಸ್ಸಿಗೆ ಖುಷಿ ತರುತ್ತದೆ.
ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದರೆ, ಅವು ಯಶಸ್ಸಾಗುವುದು ನಿಶ್ಚಿತವೇ. ಸ್ವಂತಕ್ಕೆಂದು ಏನಾದರೂ ಮಾಡಿಕೊಳ್ಳಬೇಕು ಎಂದು ಬಹಳಷ್ಟು ದಿನಗಳಿಂದ ಹಾತೊರೆಯುತ್ತಿರುವವರಿಗೆ ಈಗ ಶುಭ ಸಮಯ. ರಾಜಕೀಯವಾಗಿ ಮತ್ತು ಇತರ ಕ್ಷೇತ್ರಗಳಲ್ಲಿ ಯಶಸ್ಸು ಕಾಣುವ ಸುಯೋಗದ ದಿನಗಳ ಆರಂಭ. ಇವರ ಏಳ್ಗೆಯನ್ನು ನೋಡಿದ ಕುಟುಂಬಸ್ಥರು ತುಂಬಾ ಸಂತಸ ವ್ಯಕ್ತಪಡಿಸಿ ಹುರಿದುಂಬಿಸುತ್ತಾರೆ.
ಆದರೆ, ಗುರುಬಲವಿದ್ದರೂ ಶನಿಬಲವಿಲ್ಲ. ಸಾಡೇಸಾತಿಯ ಶನಿಕಾಟ ಕೆಲವೊಮ್ಮೆ ಗುರುವಿನಿಂದಾದ ಅನುಕೂಲಗಳನ್ನು ತಪ್ಪಿಸಲಾರಂಭಿಸುತ್ತದೆ. ಆದ್ದರಿಂದ ಕೂಡಲೇ ಗುರುಬಲದ ಪ್ರಮಾಣವೆಷ್ಟು ಎಂಬುದನ್ನು ಜಾತಕದಿಂದ ತಿಳಿದುಕೊಂಡು ಮುನ್ನಡಿ ಇಡುವುದು ಧನಸ್ಸು ರಾಶಿಯವರಿಗೆ ಕಿವಿಮಾತು. [ಧನಸ್ಸು ರಾಶಿ ವರ್ಷ ಭವಿಷ್ಯ 2015]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications