ಜ್ಯೋತಿಷ್ಯ: ಮರುವಿವಾಹ ದೋಷಕ್ಕೆ ಹೀಗಿದೆ ಪರಿಹಾರ
ಜಾತಕದಲ್ಲಿ ಮರುಮದುವೆ ದೋಷವಿದ್ದರೆ ಪರಿಹಾರ ಏನು ಮಾಡಬೇಕು ಎಂಬುದನ್ನು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ವಿವರಿಸಿದ್ದಾರೆ.
ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ಒಮ್ಮೆ ವಿದುರತ್ವ, ವೈಧವ್ಯ ಅಥವಾ ವಿಚ್ಛೇದನ ಪಡೆದ ಸ್ತ್ರೀ ಅಥವಾ ಪುರುಷ ಮರುಮದುವೆ ಆಗ ಬಯಸಿದಲ್ಲಿ ಜಾತಕಗಳನ್ನು ಸರಿ ಮಾಡಿ, ಪರಿಶೀಲಿಸಿ ಮದುವೆ ಆಗಬೇಕು. ಏಕೆಂದರೆ ಜಾತಕದಲ್ಲಿ ಯಾವುದೇ ದೋಷ ಸ್ತ್ರೀಗೆ ಇಲ್ಲದೆ ಗಂಡನ ಜಾತಕದ ದೋಷದಿಂದಾಗಿ ವಿಚ್ಛೇದನ ಆಗಿದ್ದರೆ ಹಾಗೂ ಅಂತಹ ಸ್ತ್ರೀ ಜಾತಕದಲ್ಲಿ ದ್ವಿತೀಯ, ಅಷ್ಟಮದಲ್ಲಿ ಶುಭ ಗ್ರಹಗಳಿದ್ದರೆ ಸೌಮಂಗಲ್ಯ ಯೋಗ ಇರುತ್ತದೆ.
ಆದುದರಿಂದ ಮರು ಮದುವೆ ಆಗುವಾಗ ಉತ್ತಮ ಜಾತಕದ ಪುರುಷನನ್ನು ಆರಿಸಿಕೊಳ್ಳಬೇಕು. ಇನ್ನು ಪರಿಹಾರಗಳ ವಿಷಯಕ್ಕೆ ಬಂದಾಗ ಮರುಮದುವೆ ಆಗಲು ಬಯಸುವವರು ಕೇವಲ ಹೆಸರು ಬಲ ಅಥವಾ ಜನ್ಮ ನಕ್ಷತ್ರದ ಆಧಾರದ ಮೇಲೆ ಗುಣ- ಕೂಟ ಅಷ್ಟೇ ನೋಡದೆ ಗಂಡು- ಹೆಣ್ಣಿನ ಜಾತಕ ಪರಿಶೀಲಿಸ ಬೇಕು.[ಜ್ಯೋತಿಷ್ಯ: ಮರುವಿವಾಹ ಯಾರಿಗೆ, ಯಾಕೆ ಆಗುತ್ತದೆ?]

ಅಲ್ಲಿ ಸಪ್ತಮ ಹಾಗೂ ಅಷ್ಟಮ ಭಾವದಲ್ಲಿ ಇರುವ ಪಾಪ ಗ್ರಹಗಳ ಮಾಹಿತಿ ತಿಳಿದು, ಆ ಗ್ರಹಗಳಿಗೆ ಶಾಂತಿ ಹವನವನ್ನು ಆಚರಿಸಬೇಕು, ಹಾಗೂ ಮೂರುಸಲ ವಿವಾಹ ಯೋಗ ಇರುವವರು ತಪ್ಪದೇ ಕದಳಿ ವಿವಾಹ ಅಥವಾ ಕುಂಭ ವಿವಾಹ ಮಾಡಿಸಿಕೊಳ್ಳ ಬೇಕು. ಯಾವುದೇ ದೇವತಾರಾಧನೆ ಪರಿಹಾರಗಳನ್ನು ಆಚರಿಸದೆ ಮರುಮದುವೆಯ ಬಗ್ಗೆ ಚಿಂತನೆ ಸಹ ಮಾಡದಿರಿ![ಜ್ಯೋತಿಷ್ಯ: ಎಲ್ಲ ವಿಧದ ಭಯ ನಿವಾರಣೆಗಾಗಿ ದೈವಿಕ ಉಪಾಯ]
ಮರುಮದುವೆಯ ಇನ್ನೊಂದು ಮೂಲ ಉದ್ದೇಶ ಮನಶ್ಶಾಂತಿ. ಆದುದರಿಂದ ನೀವು ವೃಶ್ಚಿಕ ರಾಶಿಯವರಲ್ಲದಿದ್ದರೆ, ಶುಕ್ಲ ಪಕ್ಷದಲ್ಲಿ ಹುಟ್ಟಿದವರು ಹಾಗೂ ಜಾತಕದಲ್ಲಿ ಚಂದ್ರ ಜನ್ಮ ಲಗ್ನದಿಂದ 3, 5, 9 ಅಥವಾ 11ನೆಯ ಮನೆಯಲ್ಲಿ ಇದ್ದು, ಆರನೇ, ಎಂಟನೇ ಅಥವಾ ಹನ್ನೆರಡನೇ ಮನೆಯ ಅಧಿಪತಿ ಅಲ್ಲದಿದ್ದರೆ ಉತ್ತಮ ಗುಣಮಟ್ಟದ ಮುತ್ತನ್ನು ಶನಿವಾರ ಹಾಗೂ ಭಾನುವಾರ ಪೂಜೆ ಮಾಡಿ ಸೋಮವಾರ ಮುಂಜಾನೆ ಉಂಗುರದ ಬೆರಳಿಗೆ ಧರಿಸುವುದರಿಂದ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು.[ಜ್ಯೋತಿಷ್ಯ: ನನಗೆ ಆಗಿಬರುವುದು ಉದ್ಯೋಗವೋ ವ್ಯಾಪಾರವೋ?]
ಇನ್ನು ಮರುಮದುವೆಯ ಚಿಂತನೆಗಳನ್ನು ಮಾಡುತ್ತಿರುವವರು ಜಾತಕ ಪರಿಶೀಲನೆ ಅಷ್ಟೇ ಅಲ್ಲದೆ ಪ್ರಶ್ನ ಶಾಸ್ತ್ರದ ಮುಖಾಂತರ ಅಗೋಚರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ನಂತರ ವಿವಾಹ ಆಗುವುದು ಉತ್ತಮ. ಪ್ರಶ್ನ ಶಾಸ್ತ್ರದ ಮುಖಾಂತರವೇ ಗಂಡು- ಹೆಣ್ಣಿನ ನಡುವೆ ಆ ಋಣಾನುಬಂಧ ಎಷ್ಟರ ಮಟ್ಟಿಗೆ ಇದೆಯೆಂದು ತಿಳಿಯುವುದು. ಹೆಚ್ಚಿನ ಮಾಹಿತಿಗಾಗಿ ಮೊ 9845682380 ಸಂಪರ್ಕಿಸಬಹುದು.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications