ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿ

ಯಾವುದೇ ರಾಶಿಯಲ್ಲಿ ಅದರ ಪ್ರಧಾನ ತಾರಾಪುಂಜದ ತಾರೆಗಳಲ್ಲದೆ ಇನ್ನೂ ಅನೇಕ ತಾರೆಗಳು ಇರುತ್ತವೆ. ಇವು ಪ್ರಧಾನ ತಾರಾಪುಂಜದ ಆಕೃತಿಯ ಒಳಗೂ ಇರಬಹುದು ಹೊರಗೂ ಇರಬಹುದು. ಒಂದು ರಾಶಿಯ ತಾರೆಗಳೇ ಆಗಲಿ ರಾಶಿಯ ಪ್ರಧಾನ ತಾರಾಪುಂಜದ ತಾರೆಗಳೇ ಆಗಲಿ ಭೂಮಿಯಿಂದ ಸಮ ದೂರಗಳಲ್ಲಿ ಇಲ್ಲ, ಎಂದೇ, ಈ ತಾರೆಗಳಿಂದ ಏಕಕಾಲದಲ್ಲಿ ಹೊಮ್ಮುವ ಯಾವ ಕಿರಣಗಳೂ ಏಕಕಾಲದಲ್ಲಿ ನಮ್ಮನ್ನು ತಲಪುವುದಿಲ್ಲ. ಇಂದು ನಾವು ನೋಡುತ್ತಿರುವ ತಾರೆಗಳು ವಾಸ್ತವವಾಗಿ ಇಂದಿನವು ಅಲ್ಲ! ಇಂದು ನಾವು ನೋಡುತ್ತಿರುವ ಎಲ್ಲ ತಾರೆಗಳು ವಿಶ್ವದ ಇತಿಹಾಸದ ಒಂದು ಕಾಲಘಟ್ಟದವೂ ಅಲ್ಲ!
ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿಗಳ ಹೆಸರುಗಳು ಮಾತ್ರ ಹೆಚ್ಚುಕಮ್ಮಿ ಎಲ್ಲ ದೇಶಗಳಲ್ಲಿ ಒಂದೇ ಆಗಿರುವುದು ಏಕೆ? ಈ ಕುರಿತು ಸಂಶೋಧಕರ ಅಂಬೋಣ ಇಂತಿದೆ: ಈ ದ್ವಾದಶ ರಾಶಿಗಳನ್ನು ಮೊದಲು ಗುರುತಿಸಿ ನಾಮಕರಣ ಮಾಡಿದವರು ಈಜಿಪ್ಟಿನವರು. ಅದನ್ನು ಗ್ರೀಕರು ಎರವಲು ಪಡೆದು ತಮ್ಮ ಭಾಷೆಗೆ ಹೆಸರುಗಳನ್ನು ಭಾಷಾಂತರ ಮಾಡಿಕೊಂಡರು. ಅಷ್ಟೇ ಅಲ್ಲದೆ ತಮ್ಮ ಸಂಸ್ಕೃತಿಯ ಪುರಾಣದ ಕಥೆಗಳನ್ನು ಜೋಡಿಸಿದರು.
ಗ್ರೀಕರಿಂದ ಭಾರತೀಯರು ಇದನ್ನು ಎರವಲು ಪಡೆದು ಗ್ರೀಕರು ಬಳಸುತ್ತಿದ್ದ ಹೆಸರುಗಳ ಪೈಕಿ ಒಂಭತ್ತನ್ನು ಯಥಾವತ್ತಾಗಿ ಸಂಸ್ಕೃತಕ್ಕೆ ಭಾಷಾಂತರಿಸಿಕೊಂಡರು(ಏರೀಸ್-ಮೇಷ, ಟಾರಸ್-ವೃಷಭ, ಜೆಮಿನಿ-ಮಿಥುನ, ಕ್ಯಾನ್ಸರ್-ಕರ್ಕಾಟಕ, ಲಿಯೋ-ಸಿಂಹ, ವರ್ಗೋ-ಕನ್ಯಾ, ಲೀಬ್ರಾ-ತುಲಾ, ಸ್ಕಾರ್ಪಿಯನ್-ವೃಶ್ಚಿಕ, ಪೀಸಸ್-ಮೀನ). ಮೂರರ ಹೆಸರುಗಳನ್ನು ಮೂಲ ಹೆಸರುಗಳ ಧ್ವನಿತಾರ್ಥ ಕೊಡುವ ಹಾಗೂ ತಮ್ಮ ಸಂಸ್ಕೃತಿಗೆ ವಿಹಿತವಾದ ಸಂಸ್ಕೃತ ಹೆಸರುಗಳಾಗಿ ಬದಲಿಸಿಕೊಂಡರು (ಸಜಿಟೆರಿಅಸ್ -ಧನು – ಗ್ರೀಕರ ಪ್ರಕಾರ: ಅರ್ಧಮನುಷ್ಯ ಅರ್ಧ ಕುದುರೆ ಆಕೃತಿ. ಕ್ಯಾಪ್ರಿಕಾರ್ನ್ – ಮಕರ, ಗ್ರೀಕರ ಪ್ರಕಾರ: ಮೀನಿನಂಥ ಬಾಲ ಇರುವ ಆಡಿನ ಆಕೃತಿ. ಅಕ್ವೇರಿಅಸ್-ಕುಂಭ, ಗ್ರೀಕರ ಪ್ರಕಾರ: ಬಿಂದಿಗೆಧಾರಿ ವ್ಯಕ್ತಿಯ ಆಕೃತಿ).
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications