AI ನೀಡುವ ಮಾಹಿತಿ ನಿಖರವಾಗಿರುತ್ತಾ? ಸಮೀಕ್ಷೆಯಲ್ಲಿ ಅಸಲಿ ವಿಚಾರ ಬಹಿರಂಗ!
ಕೃತಕ ಬುದ್ಧಿಮತ್ತೆ (ಎಐ) ಎಲ್ಲ ರಂಗಕ್ಕೆ ಕಾಲಿಟ್ಟು ಕ್ರಾಂತಿ ಮಾಡುತ್ತಿರುವ ಜೊತೆಗೆ, ಉದ್ಯೋಗ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಡೆವಲಪರ್ಗಳಲ್ಲಿ ಎಐ ಅಳವಡಿಕೆ ಹೆಚ್ಚುತ್ತಲೇ ಇದೆ. ಆದರೆ ಎಐ ನೀಡುವ ಔಟ್ಪುಟ್ನ ವಿಶ್ವಾಸಾರ್ಹತೆ ಬಗ್ಗೆ ಈಗಲೂ ಆತಂಕವಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಸ್ಟಾಕ್ ಓವರ್ಫ್ಲೋ ನಡೆಸಿದ ಇತ್ತೀಚಿನ ಸಮಗ್ರ ಸಮೀಕ್ಷೆಯ ಪ್ರಕಾರ ಶೇ 84ರಷ್ಟು ಸಾಫ್ಟ್ವೇರ್ ಡೆವಲಪರ್ಗಳು ಈಗಾಗಲೇ AI ಟೂಲ್ಗಳನ್ನು ತಮ್ಮ ಕೆಲಸದಲ್ಲಿ ಸಂಯೋಜಿಸುತ್ತಿದ್ದಾರೆ. ಆದರೂ ಫಲಿತಾಂಶದ ಬಗ್ಗೆ ವಿಶ್ವಾಸ ಸಮಾಧಾನಕರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದಿನ ವರ್ಷ ಈ ಪ್ರಮಾಣವು ಶೇ 76ರಷ್ಟಿತ್ತು. ಈ ಬೆಳೆಯುತ್ತಿರುವ ಎಐ ಬಳಕೆಯ ಹೊರತಾಗಿಯೂ, ಕೇವಲ ಶೇ 33ರಷ್ಟು ಡೆವಲಪರ್ಗಳು ಎಐ ಪರಿಕರಗಳ ನಿಖರತೆಯ ಬಗ್ಗೆ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ 2024ರಲ್ಲಿ ಇದು ಗಮನಾರ್ಹ ಕುಸಿತ ಕಂಡಿದೆ. ಎಐ ಸಾಧನಗಳ ನಂಬಿಕೆಯ ಮೇಲೆ ಅನುಮಾನ ಹೆಚ್ಚುತ್ತಿದೆ. ಹೀಗಾಗಿ ಆಸಕ್ತಿಯಲ್ಲಿ ಸ್ಥಿರವಾದ ಕುಸಿತ ಕೂಡ ಕಂಡುಬಂದಿದೆ.

ಸ್ಟಾಕ್ ಓವರ್ಫ್ಲೋ 2025 ಡೆವಲಪರ್ ಸಮೀಕ್ಷೆಯು 177 ದೇಶಗಳ 49,000ಕ್ಕೂ ಹೆಚ್ಚು ಡೆವಲಪರ್ಗಳ ಅಭಿಪ್ರಾಯವನ್ನು ಸಂಗ್ರಹಿಸಿದೆ. ಎಐ ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಹೆಚ್ಚಿಸುವುದಕ್ಕಾಗಿ ಮೌಲ್ಯಯುತವಾಗಿದೆ. ಆದರೆ ಅದರ ಬಳಕೆಯು ಕಾರ್ಯಗಳನ್ನು ಬೇಗ ಮುಗಿಸುವುದು ಮತ್ತು ಉತ್ಪಾದಕತೆ ಹೆಚ್ಚಿಸುವುದಾಗಿ ಬಹುಮತ ವ್ಯಕ್ತವಾಗಿದೆ. ಆದರೂ ತಪ್ಪು ಮಾಹಿತಿ, ಸಂಕೀರ್ಣತೆ ಇಲ್ಲದಿರುವುದು ಮತ್ತು ಮಾಹಿತಿ ಕೊರತೆ ಬಗ್ಗೆ ಆತಂಕಗಳು ಇವೆ. ಹಾಗಾಗಿ ಎಐ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ, ಕೇವಲ ಕೆಲವೇ ಟೂಲ್ಗಳನ್ನ ಬಳಸುತ್ತಿದ್ದಾರೆ ಎಂದು ಹೇಳಿದೆ.
ಕೇವಲ 38ರಷ್ಟು ಬಳಕೆದಾರರು ಎಐ ಸಾಧನಗಳ ಬಳಕೆಯಿಂದ ಅವರ ಕೋಡ್ ಗುಣಮಟ್ಟ ಸುಧಾರಿತವಾಗಿದೆ ಎಂದು ಹೇಳಿದ್ದಾರೆ. ಇತ್ತೀಚಿನ ಸಂಶೋಧನೆಗಳು ಎಐ ಬಗ್ಗೆ ವಿಶ್ವಾಸ ಮತ್ತು ಸಕಾರಾತ್ಮಕ ಭಾವನೆ ಎರಡರಲ್ಲೂ ಕುಸಿತವನ್ನು ಬಹಿರಂಗಪಡಿಸಿವೆ. ಎಐಗೆ ರೇಟಿಂಗ್ ಕೂಡ ಕಡಿಮೆಯಾಗಿದೆ. ಇದು ಡೆವಲಪರ್ಗಳಲ್ಲಿ ಉತ್ಸಾಹದ ಕುಸಿತವನ್ನು ಸಹ ಸೂಚಿಸುತ್ತದೆ.

ಈ ವರ್ಷದ ಸಮೀಕ್ಷೆಯಲ್ಲಿ ಎಐ ಪರಿಕರಗಳ ಮೇಲಿನ ಹೆಚ್ಚುತ್ತಿರುವ ನಂಬಿಕೆಯ ಕೊರತೆ ಮುಖ್ಯವಾಗಿ ಎದ್ದು ಕಾಣುತ್ತಿದೆ. ವಿಶೇಷವಾಗಿ ಬೆಳವಣಿಗೆಯ ವೇಗ, ಈ ಎಐ ಟೂಲ್ಗಳ ಅಳವಡಿಕೆಯನ್ನು ನೀಡಲಾಗಿದೆ. ಎಐ ಒಂದು ಪ್ರಬಲ ಸಾಧನವಾಗಿದೆ. ಆದರೆ ಇದು ತಪ್ಪು ಮಾಹಿತಿಯ ಗಮನಾರ್ಹ ಅಪಾಯಗಳನ್ನು ಹೊಂದಿದೆ. ಅಲ್ಲದೆ ಸಂಕೀರ್ಣತೆ, ಲೇಟೆಸ್ಟ್ ಮಾಹಿತಿಯ ಕೊರತೆಯನ್ನು ಹೊಂದಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications