ಕಾಡು ಹಂದಿ ಹಾವಳಿ: ಸಂಸತ್‌ನಲ್ಲಿ ಮಾತನಾಡಿದ ಡಿಕೆ ಸುರೇಶ್

ನವದೆಹಲಿ. ಜುಲೈ 20 : ಕಾಡು ಹಂದಿಗಳ ಹಾವಳಿಯಿಂದ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕು ಎಂಬ ಅಂಶವನ್ನು ಸಂಸದ ಡಿ.ಕೆ ಸುರೇಶ ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ.

ಸಂಸತ್ ಕಲಾಪದ ವೇಳೆ ಮಾತನಾಡಿದ ಸುರೇಶ್, ಕರ್ನಾಟಕ ರಾಜ್ಯದಿಂದ ಕಾಡು ಹಂದಿಗಳ ಹಾವಳಿ ತಡೆ ಕೋರಿ ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆಯೇ? ಈ ಕುರಿತು ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಏನು? ಎಂದು ಪ್ರಶ್ನೆ ಮಾಡಿದರು.[ಸಂಸದ, ಶಾಸಕರನ್ನು ಹುಡುಕಿಕೊಟ್ಟವರಿಗೆ ಬಹುಮಾನ!]

MP D K Suresh Urges wild boar menace control

ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 22 ಜನರನ್ನು ಆನೆಗಳು ಬಲಿ ತೆಗೆದುಕೊಂಡಿವೆ. ಪ್ರತಿವರ್ಷ 6000 ದಿಂದ 7000 ರೈತರು ಕಾಡು ಪ್ರಾಣಿಗಳಿಂದ ಬೆಳೆ ನಾಶ ಸಮಸ್ಯೆ ಎದುರಿಸುತ್ತಿದ್ದು ಪರಿಹಾರ ಕೋರುತ್ತಿದ್ದಾರೆ ಎಂದು ಹೇಳಿದರು.[ಅತಿ ಹೆಚ್ಚು,ಅತಿ ಕಡಿಮೆ ಅಂತರದಿಂದ ಗೆದ್ದ ಎಂಪಿಗಳು]

ಕಳೆದ 3 ವರ್ಷಗಳಲ್ಲಿ 250 ಜಾನುವಾರುಗಳು ಮೃತಪಟ್ಟಿವೆ. ಆದರೆ ಕಡಿಮೆ ಮೊತ್ತದ ಪರಿಹಾರ ರೈತರಿಗೆ ನೀಡಲಾಗಿದೆ ಎಂಬ ಅಂಶವನ್ನು ಗಮನಕ್ಕೆ ತಂದರು. ಈ ಎಲ್ಲ ಸಮಸ್ಯೆಗಳನ್ನು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಪರಿಹರಿಸಬೇಕು ಎಂದು ಸುರೇಶ್ ಒತ್ತಾಯ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+