ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ: ಸಚಿವ ನಾರಾಯಣಗೌಡ
ದಾವಣಗೆರೆ, ಮಾರ್ಚ್ 06: ಈ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಆದ್ದರಿಂದ ಸಿಎಂ ಯಡಿಯೂರಪ್ಪನವರು ಅರ್ಧ ಗಂಟೆಯ ಕಾಲ ಹಸಿರು ಶಾಲು ಹಾಕಿಕೊಂಡು ಬಜೆಟ್ ಮಂಡನೆ ಮಾಡಿದರು ಎಂದು ಹೊನ್ನಾಳಿಯಲ್ಲಿ ತೋಟಗಾರಿಕ ಹಾಗೂ ರೇಷ್ಮೆ ಸಚಿವ ಕೆ.ಸಿ ನಾರಾಯಣ ಗೌಡ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಆಗಮಿಸಿ ಮಾತನಾಡಿದ ಅವರು, ಜಿಲ್ಲಾವಾರು ಅನುದಾನ ಘೋಷಣೆ ಮಾಡದೇ, ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಅನುದಾನ ಘೋಷಿಸಿದ್ದಾರೆ ಎಂದರು.
ಯಡಿಯೂರಪ್ಪನವರು ಎಲ್ಲಿಯೂ ಕೂಡ ಅನುದಾನ ವ್ಯರ್ಥವಾಗದ ರೀತಿ ನೋಡಿಕೊಂಡಿದ್ದಾರೆ ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ ಸಚಿವ ನಾರಾಯಣ ಗೌಡ, ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪನವರೇ ಮೂರು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತಾರೆ, ಅವರನ್ನು ಕುರ್ಚಿಯಿಂದ ಕೆಳಗೆ ಇಳಿಸಲು ಯಾರಿಗೂ ಸಾಧ್ಯ ಇಲ್ಲ. ಮಾಜಿ ಮುಖ್ಯಮಂತ್ರಿ ಸಮಯ ಪರಿಪಾಲನೆ ಮಾಡುತ್ತಿರಲಿಲ್ಲ, ಆದರೆ ಯಡಿಯೂರಪ್ಪನವರು ಹೇಳಿದ ಸಮಯಕ್ಕೆ ಬಂದು ಸಮಯ ಪರಿಪಾಲನೆ ಮಾಡುತ್ತಾರೆ ಎಂದರು.












Click it and Unblock the Notifications