ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ : ಮೋದಿ

|
Google Oneindia Kannada News

Recommended Video

ಕರ್ನಾಟಕದಲ್ಲಿ ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ | Oneindia Kannada

ನವದೆಹಲಿ, ಡಿಸೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಅವರು ರೈತರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದನಿಯೆತ್ತಿರುವ ಸಂದರ್ಭದಲ್ಲೇ ಮೋದಿ ಅವರು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್- ಜೆಡಿಎಸ್ ಸರ್ಕಾರವು, ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ ಮಾಡುತ್ತಿದೆ. 6 ತಿಂಗಳ ಅಧಿಕಾರ ಅವಧಿಯಲಿ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರೈತರಿಗೆ ಭಾರಿ ಕೊಡುಗೆ: ಜ.5ರೊಳಗೆ ಕೇಂದ್ರದ ಘೋಷಣೆ?ರೈತರಿಗೆ ಭಾರಿ ಕೊಡುಗೆ: ಜ.5ರೊಳಗೆ ಕೇಂದ್ರದ ಘೋಷಣೆ?

'ಮೇರಾ ಬೂತ್ ಸಬ್ಸೆ ಮಜಬೂತ್' ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ಸಂಸದರಿರುವ ಬೆಳಗಾವಿ, ಬೀದರ್, ಧಾರವಾಡ, ದಾವಣಗೆರೆ ಹಾಗೂ ಹಾವೇರಿಯ ಬೂತ್ ಮಟ್ಟದ ಕಾರ್ಯಕರ್ತರ ಜತೆ ಏಕಕಾಲಕ್ಕೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

Karnatakas loan waiver Cruel Joke on farmers : PM Modi

ರಾಜ್ಯ ಸರ್ಕಾರ ಕೇವಲ ಅಧಿಕಾರಕ್ಕೆ ಹಂಬಲಿಸುತ್ತಿದೆ. ರೈತರು, ದಲಿತರು ಸಂಕಷ್ಟದಲ್ಲಿರುವಾಗ ನಾವೇನು ಮಾಡಬೇಕು ಎಂದು ಬೆಳಗಾವಿ ವಿಭಾಗದ ಅಧ್ಯಕ್ಶ ಶ್ರೀನಿವಾಸ್ ಪ್ರಶ್ನೆ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಕರ್ನಾಟಕದ ಜನರ ನೋವು ನನಗೆ ಅರ್ಥವಾಗುತ್ತದೆ. ಯಾರು ಸಂತುಷ್ಟರಾಗಿದ್ದಾರೆ, ಯಾರಿಗೆ ಅಸಮಾಧಾನ ಎಂಬುದೇ ಪ್ರತಿದಿನ ಕರ್ನಾಟಕದಲ್ಲಿ ಸುದ್ದಿ. ಅದೂ ಕೇವಲ ಮಂತ್ರಿಗಿರಿಗಾಗಿ ಅಧಿಕಾರದಲ್ಲಿರುವವರು ಮ್ಯೂಸಿಕಲ್ ಚೇರ್ ಆಡುತ್ತಿದ್ದಾರೆ.

ರೈತರಿಗೆ ಸುಳ್ಳು ಹೇಳಬೇಡಿ: ರಾಹುಲ್ ಗಾಂಧಿಗೆ ಮೋದಿ ಸಲಹೆ ರೈತರಿಗೆ ಸುಳ್ಳು ಹೇಳಬೇಡಿ: ರಾಹುಲ್ ಗಾಂಧಿಗೆ ಮೋದಿ ಸಲಹೆ

ಜನರ ಆಶೋತ್ತರ ಅವರಿಗೆ ಬೇಕಿಲ್ಲ. ಸಂಪುಟ ದರ್ಜೆ ಸ್ಥಾನವಷ್ಟೇ ಅವರ ಚಿಂತೆ. ಸಾಮಾನ್ಯ ಜನರಿಗೆ ಅಭಿವೃದ್ಧಿ ಬೇಕು. ಆದರೆ ರಾಜ್ಯ ಸರ್ಕಾರದಲ್ಲಿರುವವರಿಗೆ ಕುಟುಂಬ ರಾಜಕಾರಣವೇ ಮುಖ್ಯ. ಜನರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಬೇಕಿದ್ದರೆ, ಅಲ್ಲಿ ನಡೆಯುತ್ತಿರುವುದು ಮುಕ್ತ ಭ್ರಷ್ಟಾಚಾರ.

ಕರ್ನಾಟಕದ ರೈತರ ಆತ್ಮಹತ್ಯೆ ಹೊಣೆಯನ್ನೂ ಅವರು ಹೊರುತ್ತಾರೆಯೇ? ಬೆಳಗಾವಿ ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರ ಕಾರಣ. ಹಾಸನದಲ್ಲಾದ ದಲಿತರ ಮೇಲಿನ ದೌರ್ಜನ್ಯ ರಾಜ್ಯ ಸರ್ಕಾರದ ಹೊಣೆಗೇಡಿತನಕ್ಕೆ ಸಾಕ್ಷಿ. ಹೇಗಾದರೂ ಮಾಡಿ ಸರ್ಕಾರದಲ್ಲಿರಬೇಕು ಎಂಬುದಷ್ಟೇ ಇವರ ಆಸೆ. ಸದ್ಯದಲ್ಲೇ ಜನ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

English summary
PM Narendra Modi tore into the Congress-JD(S) alliance government in Karnataka and dubbed the loan waiver in the state as the 'most cruel joke on farmers'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X