ಪೆಟ್ರೋಲ್ ಬೆಲೆ ಏರಿಕೆಯ ಪರಿಣಾಮ!

ವಾರ್ಷಿಕ ವಿತ್ತೀಯ ಕೊರತೆಯನ್ನು ಶೇ.6.8ರಿಂದ ಶೇ.5.5ಕ್ಕೆ ಇಳಿಸಿದ್ದು ಆರ್ಥಿಕ ಹೊಡೆತದಿಂದ ಜರ್ಜರಿತವಾದ ಭಾರತ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಇನ್ಫೋಸಿಸ್ ನ ಸಿಇಓ ಗೋಪಾಲಕೃಷ್ಣನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆರೆ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡದ ಬಗ್ಗೆ ಮುಖ್ಯಮಂತ್ರಿ ಬಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರಗಾಮಿ ಪರಿಣಾಮಗಳನ್ನು ಬದಿಗಿಟ್ಟು, ಕೇವಲ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕರ್ನಾಟಕ ರಾಜ್ಯದ ಮೇಲಾಗುವ ಪರಿಣಾಮಗಳೇನೆಂಬದನ್ನು ಗಮನಿಸೋಣ.
* ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 2.67 ರು. ಹಾಗೂ ಡಿಸೇಲ್ ಗೆ 2.58 ರು. ಏರಿರುವುದರಿಂದ ರಾಜ್ಯದಲ್ಲಿ ಕನಿಷ್ಠ 4ರಿಂದ 5 ರು. ಬೆಲೆ ಏರಿಕೆ ಕಂಡುಬರಲಿದೆ.
* ಈ ಏರಿಕೆ ಫೆ.26ರ ಮಧ್ಯರಾತ್ರಿಯಿಂದಲೇ ಜಾರಿ ಬರುವ ಸಾಧ್ಯತೆಯಿದೆ.
* ದರ ಏರಿಕೆಯಾಗುವವರೆಗೆ ಬಂಕ್ ಗಳಲ್ಲಿ 'ನೋ ಸ್ಟಾಕ್'.
* ಸಾರಿಗೆ ಇಲಾಖೆ ಈಗಾಗಲೆ ಪ್ರಯಾಣ ದರವನ್ನು ಏರಿಸುವ ಸೂಚನೆ ನೀಡಿದೆ.
* ಸರಕು ಸಾಗಣೆ ಮತ್ತಷ್ಟು ತುಟ್ಟಿಯಾಗಲಿದೆ.
* ಮೊದಲೇ ಏರುಮುಖವಾಗಿರುವ ಹಣ್ಣು, ತರಕಾರಿ ಬೆಲೆ ಆಕಾಶ ಮುಟ್ಟಲಿದೆ.
* ಆಹಾರ ಧಾನ್ಯಗಳ ಬೆಲೆ ಕೂಡ ಹೆಚ್ಚಳವಾಗಲಿದೆ.
* ಹಾಲಿನ ದರ ಏರಿಸುವುದು ಅನಿವಾರ್ಯ.
* ಬೆಲೆ ಏರಿಕೆಯಿಂದ ಜರ್ಜರಿತವಾಗಿರುವ ಗ್ರಾಹಕನಿಗೆ ಮತ್ತಷ್ಟು ಬರೆ.
ಈ ಬೆಲೆ ಏರಿಕೆ ಬಿಸಿಯಿಂದ ಶ್ರೀಸಾಮಾನ್ಯರು ತಪ್ಪಿಸಿಕೊಳ್ಳುವ ಬಗೆಯಾದರೂ ಹೇಗೆ? ನಮಗೆ ಬರೆದು ತಿಳಿಸಿ.
2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು












Click it and Unblock the Notifications