ಸಾಲ ಮರುಪಾತಿ ನೋಟೀಸ್‌ಗೆ ಭಯ ಪಡಬೇಡಿ: ರೈತರಿಗೆ ಸಿಎಂ ಅಭಯ

ಬೆಂಗಳೂರು, ಆಗಸ್ಟ್‌ 06: ಸಾಲ ಮರುಪಾವತಿ ಬಗ್ಗೆ ಬ್ಯಾಂಕ್‌ಗಳು ನೀಡುವ ನೊಟೀಸ್‌ ಬಗ್ಗೆ ರೈತರು ಭಯ ಪಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಲ ಮನ್ನಾ ಮಾಡಿದೆ, ಋಣಮುಕ್ತ ಪತ್ರಗಳನ್ನು ನೀಡುವ ಕಾರ್ಯ ನಡೆಯುತ್ತಿದೆ, ಸರ್ಕಾರ ರೈತರ ಪರ ಇದೆ ಎಂದು ಅವರು ಮಾಹಿತಿ ನೀಡಿದರು.

ಸಾಲಮನ್ನಾದ ಘೋಷಣೆ ಆಗಿದ್ದರೂ ಸಹಿತ ಕೆಲವು ಬ್ಯಾಂಕ್‌ಗಳು ರೈತರಿಗೆ ನೊಟೀಸ್ ನೀಡಿದ್ದರ ಬಗ್ಗೆ ಹಲವು ಕಡೆ ವರದಿಯಾಗಿತ್ತು. ಅಲ್ಲದೆ ಕೆಲವು ಬ್ಯಾಂಕ್‌ಗಳು ಗ್ಯಾಸ್ ಸಬ್ಸಿಡಿ ಸೇರಿ ರೈತರ ಖಾತೆಗೆ ಜಮಾ ಆಗುವ ಹಣವನ್ನು ಸಾಲಕ್ಕೆ ಚುಕ್ತಾ ಮಾಡಿಕೊಂಡ ಬಗ್ಗೆಯೂ ವರದಿಯಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ದೂರು ಸಹ ನೀಡಲಾಗಿತ್ತು.

farmers should not worry about bank notice: Kumaraswamy

ಹಾಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಸರ್ಕಾರವು ಬ್ಯಾಂಕುಗಳೊಂದಿಗೆ ಈಗಾಗಲೇ ಮಾತನಾಡಿದ್ದು, ರೈತರಿಗೆ ಯಾವುದೇ ನೊಟೀಸ್‌ದಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರೈತರ ಸಾಲಮನ್ನಾದ ಹಣವನ್ನು ಸರ್ಕಾರವು ಬ್ಯಾಂಕುಗಳಿಗೆ ಕಂತುಗಳಲ್ಲಿ ಪಾವತಿಸುವ ಸರ್ಕಾರದ ನಿರ್ಣಯಕ್ಕೆ ಕೆಲವು ಬ್ಯಾಂಕುಗಳು ಒಪ್ಪಿಲ್ಲ ಹಾಗಾಗಿ ಹೀಗೆ ನೊಟೀಸ್‌ಗಳನ್ನು ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+