ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!
ಚಾಮರಾಜನಗರ, ಜನವರಿ 20 : ನಿಗಿ ನಿಗಿ ಕೆಂಡದ ರಾಶಿ.. ಅದರ ಮೇಲೆ ರೊಟ್ಟಿ ಕಾಯಿಸುವುದರಲ್ಲಿ ನಿರತರಾದ ಜನರು.. ಘಮಘಮಿಸುವ ಅವರೆಕಾಯಿ, ಕುಂಬಳಪಲ್ಯ.. ನೆರೆದವರ ಮುಖದಲ್ಲಿ ಸಡಗರ ಸಂಭ್ರಮ.. ಇದೆಲ್ಲ ಕಂಡು ಬಂದಿದ್ದು ಚಾಮರಾಜನಗರದ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿಯ ರೊಟ್ಟಿಹಬ್ಬದಲ್ಲಿ.
ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ರೊಟ್ಟಿಹಬ್ಬವನ್ನು ಆಧುನಿಕತೆಯ ಕಾಲಘಟ್ಟದಲ್ಲಿಯೂ ಗಿರಿಜನರು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. [ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]

ಹಬ್ಬ ನಡೆಯುವ ವ್ಯಾಪ್ತಿಯ ಗ್ರಾಮದ ಗಿರಿಜನರು ಕೃಷಿಯನ್ನು ನಂಬಿ ಬದುಕುತ್ತಿದ್ದಾರೆ. ಸುಗ್ಗಿಕಾಲ ಆರಂಭವಾಗಿ ಧಾನ್ಯ ಮನೆಗೆ ಬರುತ್ತಿದ್ದಂತೆಯೇ ಅದರಲ್ಲಿ ಒಂದಷ್ಟನ್ನು ಉಪಯೋಗಿಸದೆ ಮಡಿಯಿಂದ ಜೋಪಾನವಾಗಿ ತೆಗೆದಿಡುತ್ತಾರೆ. [ದೀವಿ ಹಲಸು ಬೆಳೆಸಿ.. ತರಕಾರಿ ಸಮಸ್ಯೆ ನೀಗಿಸಿ..]
ಬೀಸುವ ಕಲ್ಲಿನಿಂದ ಹಿಟ್ಟು ತಯಾರಿಸಿ ನಿಗದಿತ ದಿನದಂದು ಊರವರೆಲ್ಲ ಸೇರಿ ರೊಟ್ಟಿ ಮಾಡಿ ಕುಲದೇವರಿಗೆ ನೈವೇದ್ಯ ಅರ್ಪಿಸಿ ಕುಟುಂಬಕ್ಕೂ, ಬೆಳೆಯುವ ಬೆಳೆಗೂ ಯಾವುದೇ ತೊಂದರೆಯಾಗದಿರಲಿ ಎಂದು ಬೇಡಿಕೊಳ್ಳುವುದು ರೊಟ್ಟಿ ಹಬ್ಬದ ವಿಶೇಷ. ಹಿಂದಿನಿಂದಲೂ ನಡೆದುಕೊಂಡು ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. [ಮದುವೆಗೆ ಬಂದವನು ಮುದ್ದೆ ತಿಂದು ಬಹುಮಾನ ಗೆದ್ದ]
ಇದು ಹರಕೆ ತೀರಿಸುವ ಹಬ್ಬ : ಕಾಡಂಚಿನ ಗ್ರಾಮಗಳಲ್ಲಿ ಕೃಷಿ ಮಾಡುವುದು ಸುಲಭವಲ್ಲ. ಫಸಲು ಕೈಗೆ ತಲುಪುವ ವೇಳೆಗೆ ಸಾಕು ಸಾಕಾಗುತ್ತದೆ. ಮಳೆ ಉತ್ತಮವಾಗಿ, ಕಾಡು ಪ್ರಾಣಿಗಳ ಹಾವಳಿಯಿಲ್ಲದೆ ಬೆಳೆ ಮನೆಗೆ ಬರಲಿ ಎಂದು ಜನರು ದೇವರಲ್ಲಿ ಬೇಡಿಕೊಂಡು ಹರಕೆ ಹೊರುತ್ತಾರೆ. ಫಸಲು ಮನೆಗೆ ಬರುತ್ತಿದ್ದಂತೆಯೇ ಹರಕೆ ತೀರಿಸುತ್ತಾರೆ.
ಗ್ರಾಮದ ಜನರು ತಾವು ತೆಗೆದಿಟ್ಟ ಧಾನ್ಯದಿಂದ ಹಿಟ್ಟು ತಯಾರಿಸಿಕೊಂಡು ಹಬ್ಬ ನಡೆಯುವ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯದ ಬಳಿಗೆ ಬರುತ್ತಾರೆ. ಒಂದೆಡೆ ಬೆಳಗ್ಗಿನಿಂದಲೇ ಸೌದೆ ಸಂಗ್ರಹಿಸುವ ಗಂಡಸರು ಎಲ್ಲವನ್ನೂ ರಾಶಿ ಹಾಕಿ ಉರಿಸಿ ಕೆಂಡ ತಯಾರಿಸುತ್ತಾರೆ. ಬಳಿಕ ಹಿಟ್ಟನ್ನು ಮುತ್ತುಗದ ಎಲೆ ಬಳಸಿ ತಟ್ಟಿ ರೊಟ್ಟಿ ಮಾಡಿ ನಂತರ ಕೆಂಡದ ಮೇಲಿಟ್ಟು ಬೇಯಿಸುತ್ತಾರೆ.

ಬೇಯಿಸಿದ ರೊಟ್ಟಿಯನ್ನೆಲ್ಲೇ ಗುಡ್ಡೆ ಹಾಕಿ ಅದರ ಜತೆಗೆ ಅವರೇಕಾಯಿ ಕುಂಬಳಯಿಂದ ತಯಾರಿಸಿದ ಪಲ್ಯ ಮತ್ತು ಅನ್ನ ಸಾರು ತಯಾರಿಸಿ ಕುಲದೇವರಿಗೆ ನೈವೇದ್ಯವನ್ನು ಬಡಿಸಲಾಗುತ್ತದೆ. ದೇವರಿಗೆ ನೈವೇದ್ಯ ನೀಡಿದ ನಂತರ ನೆರೆದವರೆಲ್ಲರೂ ಒಂದೆಡೆ ಕುಳಿತು ಸಾಮೂಹಿಕ ಭೋಜನ ಸವಿಯುತ್ತಾರೆ.
ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬ ಕಳೆದ ಬಳಿಕ ನಡೆಯುವ ಈ ಹಬ್ಬ ಸಂಪ್ರದಾಯ, ಸಹಬಾಳ್ವೆ, ಪ್ರಕೃತಿ ಪೂಜೆ ಹೀಗೆ ಹಲವು ವೈಶಿಷ್ಟ್ಯತೆಯನ್ನು ಸಾರುತ್ತಾ ಬರುತ್ತಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications