ಕೈಕೆಸರಾದರೆ ಬಾಯಿಮೊಸರು : ಇನ್ಫಿ ಮೂರ್ತಿ

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನವನ್ನು ಶುಕ್ರವಾರ ಸಂಜೆ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಎನ್ಆರ್ ನಾರಾಯಣ ಮೂರ್ತಿ ಈ ಮೇಲಿನಂತೆ ಕನ್ನಡ ನಾಡಿನ ಯುವಕ, ಯುವತಿಯರಿಗೆ ಸಂದೇಶ ರವಾನಿಸಿದರು.
"ನೀವೇ ಸ್ವತಃ ಉದ್ದಿಮೆದಾರರಾದರೆ ಅನೇಕ ಹೊಸ ಕೆಲಸದ ಅವಕಾಶಗಳು ತಾನಾಗಿಯೇ ಬಾಯಿ ತೆರೆಯುತ್ತವೆ. ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದರಿಂದ ನಾವು ಬಡತನವನ್ನು ಹೊಡೆದೋಡಿಸಬಹುದು. ಹೊಸಹೊಸ ಸವಾಲುಗಳಿಗೆ ಆಹ್ವಾನ ನೀಡಬೇಕು. ಮುಗ್ಗಟ್ಟುಗಳನ್ನು ಎದುರಿಸಿ ನಿಂತುಕೊಳ್ಳಬೇಕು. ಆದರೆ, ನೀವು ಕನ್ನಡಿಗರಾಗಿಯೇ ಇರಬೇಕು. ಉನ್ನತ ಧ್ಯೆಯೋಧ್ಯೇಶಗಳನ್ನು ಇರಿಸಿಕೊಂಡು, ಉದಾರ ದೃಷ್ಟಿಯುಳ್ಳವರಾಗಿ, ನಿಸ್ವಾರ್ಥ ಮತ್ತು ತ್ಯಾಗ ಗುಣಗಳಿಂದ ದುಡಿದರೆ ಅಭಿವೃದ್ಧಿ ಖಂಡಿತ ಸಾಧ್ಯ. ಇದನ್ನು ನನ್ನ ಬಾಳಿನ ಅನುಭವದಲ್ಲಿ ಕಲಿತಿದ್ದೇನೆ" ಎಂದು ಮೂರ್ತಿ ಹೇಳಿದರು.
ನಾಲ್ಕು ಪುಟಗಳ ಮುದ್ರಿತ ಕನ್ನಡ ಭಾಷಣವನ್ನು ಅವರು ಒಪ್ಪವಾಗಿ, ಸ್ಪಷ್ಟವಾಗಿ ಓದಿದರು. ಮಾತಿನ ಮಧ್ಯೆ ನಾನೊಬ್ಬ ಕನ್ನಡಿಗ ಎನ್ನುವುದನ್ನು ಸ್ಪಷ್ಟಪಡಿಸುವ ನಾಕಾರು ಉದಾಹರಣೆಗಳನ್ನು ಕೊಟ್ಟರು.
1. ಪ್ರಪಂಚವೆಲ್ಲ ಸುತ್ತಿ ಅದ್ಭುತವಾದ ಆದರಾತಿಥ್ಯಗಳನ್ನು ಸ್ವೀಕರಿಸಿದರೂ ನನಗೆ ನನ್ನ ಬೆಂಗಳೂರಿನ ಮನೆಯ ಕಾಫಿ ಕುಡಿದಾಗಲೇ ಸಮಾಧಾನ.
2. ನನಗೆ ಬೆಳಗಾವಿ ಚಿರಪರಿಚಿತ. ನಾನು ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿ ಬೆಳೆದವನಾದರೂ ಉತ್ತರ ಕರ್ನಾಟಕದ ಅಳಿಯ. (ಸುಧಾ ಮೂರ್ತಿ ಅವರ ತವರು ಹುಬ್ಬಳ್ಳಿ.)
3. ಇಂಗ್ಲಿಷ್ ನನ್ನ ವ್ಯವಹಾರಿಕ ಭಾಷೆ. ಆದರೆ, ಕನ್ನಡ ನನ್ನ ಮನೆ ಮತ್ತು ಹೃದಯದ ಭಾಷೆ.
4. ನನಗೆ ಕಾಲವೇನಾದರೂ ಎದುರಿಗೆ ನಿಂತು ಮತ್ತೆ ಏನು ಬೇಕು ಅಂದರೆ, "ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುಪುದು ಕರ್ನಾಟ ದೇಶದೊಳ್" ಎನ್ನುತ್ತೇನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications