ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸಮ್ಮೇಳನದ ಅಧ್ಯಕ್ಷನಾಗಬೇಕಿತ್ತು: ವಾಟಾಳ್

By Mahesh
|
Google Oneindia Kannada News

Vatal Nagaraj
ಬೆಂಗಳೂರು, ಫೆ. 7: ಕನ್ನಡ ಸಾಹಿತ್ಯ ಪರಿಷತ್ ಪೂರ್ವಗ್ರಹ ಪೀಡಿತವಾಗಿದೆ. ಅಲ್ಲಿ ಮಡಿವಂತಿಕೆ ಜಾಸ್ತಿಯಾಗಿದೆ. ಹುಟ್ಟು ಕನ್ನಡ ಹೋರಾಟಗಾರನಾದ ನನ್ನನ್ನು ಸಾಹಿತಿ ಸಮ್ಮೇಳನಕ್ಕೆ ಕರೆಯುವ ಕನಿಷ್ಠ ಸೌಜನ್ಯ ಪರಿಷತ್ ತೋರಲಿಲ್ಲ. ಗಂಡು ದಾಳಿಗೆ ಹೆದರದ ನಾನು ಇದಕ್ಕೆಲ್ಲ ಹೆದರುವವನಲ್ಲ. ನಿಜ ಹೇಳ ಬೇಕೆಂದರೆ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಬೇಕಿತ್ತು ಎಂದು ವಾಟಾಳ್ ನಾಗರಾಜ್ ಸುದ್ದಿವಾಹಿನಿಯೊಡನೆ ತಮ್ಮ ದುಃಖ ತೋಡಿಕೊಂಡರು.

ಕನ್ನಡವೇ ನನ್ನ ಉಸಿರು. ಕನ್ನಡಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ದ. ಈ ವಾಟಾಳ್ ಕಾಡಿನಲ್ಲಿ ಮದಗಜ ಇದ್ದ ಹಾಗೆ. ಏಕಾಂಗಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ ಮುಂದೆ ಕೂಡಾ ಹೋರಾಟ ಮಾಡುತ್ತೇನೆ. ಬೆಳಗಾವಿಯಿಂದ ಹಿಡಿದು ಚಾಮರಾಜನಗರದವರೆಗೆ ಹೋರಾಟ ಮಾಡಿದ್ದೇನೆ. ಇತರ ಕನ್ನಡಪರ ಸಂಘಟನೆಗಳ ಹಾಗೆ ನಾನು ತೋರಿಕೆಯ ಹೋರಾಟ ಮಾಡುವವನಲ್ಲ. ಹಾರ ಹಾಕಿಕೊಂಡು ಮಾಧ್ಯಮಗಳ ಮುಂದೆ ಫೋಸ್ ನೀಡುವ ದುರ್ಗತಿ ಈ ವಾಟಾಳ್ ಗೆ ಬಂದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಾಟಾಳ್ ಬೆಂಕಿ ಇದ್ದ ಹಾಗೆ. ನನ್ನನ್ನು ಮುಟ್ಟಲು ಬಂದರೆ ಸುಟ್ಟು ಹೋಗುತ್ತಾರೆ. ನನ್ನ ಹೋರಾಟ ಬರೀ ಬೆಂಗಳೂರು ನಗರಕ್ಕೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ಬರೀ ಮೈಸೂರು ಬ್ಯಾಂಕ್ ವೃತ್ತದ ಬಳಿ ವಾಟಾಳ್ ಪ್ರತಿಭಟನೆ ನಡೆಸುತ್ತಾರೆನ್ನುವ ಆರೋಪ ನನ್ನ ಮೇಲಿದೆ. ವಿಧಾನಸೌಧಕ್ಕೆ ಬರಬೇಡಿ, ರಾಜಭವನಕ್ಕೆ ಹೋಗಬೇಡಿ, ಅಲ್ಲಿ ಮೆಟ್ರೋ ಕೆಲಸ ನಡೆಯುತ್ತಿದೆ ಇಲ್ಲಿ ಬೇರೆ ಕಾಮಗಾರಿ ನಡೆಯುತ್ತಿದೆ ಎಂದು ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ಇನ್ನೇನು ಚಂದ್ರಲೋಕದಲ್ಲಿ ಪ್ರತಿಭಟನೆ ನಡೆಸಲಾ ಎಂದು ವಾಟಾಳ್ ಆಕ್ರೋಶದಿಂದ ನುಡಿದರು.

ಚಾಮರಾಜನಗರದ ಜನ ನಾನು ಮಾಡಿದ ಅಭಿವೃದ್ದಿ ಕೆಲಸವನ್ನು ಈಗಲೂ ನೆನೆಸುತ್ತಿದ್ದಾರೆ. ಆದರೂ ನಾನು ಚುನಾವಣೆಯಲ್ಲಿ ಸೋತೆ. ನನ್ನ ಜೇಬಿನಲ್ಲಿ ದುಡ್ಡಿಲ್ಲ. ಮದ್ಯಮಾಂಸ ವಿತರಿಸಲು ನನ್ನಿಂದಾಗುವುದಿಲ್ಲ. ಅಲ್ಲಿನ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ವಾಟಾಳ್ ಹೇಳಿದರು.

English summary
Kannada activist, Kannada Chalavali Vatal Party President Vatal Nagar claims that Kannada Sahitya Parishat has neglected him in 77th Kannada Sahitya Sammelana and govt also restricts him to protest in near Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X