ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆ
ಚಿಕ್ಕಮಗಳೂರು, ಜ.5 : ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮ ಅವರು ಶೃಂಗೇರಿ ಶ್ರೀ ಶಾರದಾ ಪೀಠದ 37ನೇ ಪೀಠಾಧಿಪತಿಯಾಗಲಿದ್ದಾರೆ. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಭಾನುವಾರ ಉತ್ತರಾಧಿಕಾರಿ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ಭಾನುವಾರ
ಜಗದ್ಗುರುಗಳ
ಪೀಠಾರೋಹಣದ
ರಜತ
ಮಹೋತ್ಸವ
ಆಚರಣೆಯ
ಶುಭ
ಸನ್ನಿವೇಶಕ್ಕಾಗಿ
ಮಠದಲ್ಲಿ
ಶಿಷ್ಯರು
ಆಯೋಜಿಸಿದ್ದ
ಗುರುವಂದನಾ
ಸಮಾರಂಭದಲ್ಲಿ
ಮಾತನಾಡಿದ
ಶ್ರೀ
ಭಾರತೀತೀರ್ಥ
ಸ್ವಾಮೀಜಿ
ಅವರು
ಕುಪ್ಪೂರು
ವೆಂಕಟೇಶ್ವರಪ್ರಸಾದ
ಶರ್ಮ
ಮುಂದಿನ
ಉತ್ತರಾಧಿಕಾರಿ
ಎಂದು
ಘೋಷಿಸಿದರು.
[ಶೃಂಗೇರಿ
:
ರಾಜಗೋಪುರದ
ವಿಶೇಷತೆಗಳು]
ಶಾರದಾ
ಪೀಠದ
37ನೇ
ಪೀಠಾಧಿಪತಿಯನ್ನಾಗಿ
ಕುಪ್ಪೂರು
ವೆಂಕಟೇಶ್ವರಪ್ರಸಾದ
ಶರ್ಮ
(25)
ಅವರನ್ನು
ಆಯ್ಕೆ
ಮಾಡಿದ್ದು
ಅವರಿಗೆ
ಶಿಷ್ಯ
ಸ್ವೀಕರವನ್ನು
ಜ.22
ಮತ್ತು
23ರಂದು
ನೀಡುವುದಾಗಿ
ಜಗದ್ಗುರು
ಭಾರತೀತೀರ್ಥ
ಸ್ವಾಮೀಜಿ
ಹೇಳಿದರು.
ರಜತ
ಮಹೋತ್ಸವಕ್ಕೆ
ಆಗಮಿಸಿದ
ಶಿಷ್ಯರೆಲ್ಲರೂ
ಪರಿಗ್ರಹ
ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಬೇಕೆಂಬ
ಉದ್ದೇಶದಿಂದ
ಈ
ಪ್ರಕಟಣೆಯನ್ನು
ಮಾಡುತ್ತಿರುವುದಾಗಿ
ತಿಳಿಸಿದ
ಶ್ರೀಗಳು,
ತಮಗೆ
64
ವರ್ಷ
ವಯಸ್ಸಾಗಿದ್ದು
ಉತ್ತರಾಧಿಕಾರಿ
ನೇಮಕದ
ಬಗ್ಗೆ
ತಾಯಿ
ಶಾರದೆ
ನೆನಪಿಸಿದ್ದಾಳೆ
ಎಂದರು.
ಶ್ರೀಮಠದಲ್ಲಿ ಗುರು-ಶಿಷ್ಯ ಪರಂಪರೆಗೆ ಅತ್ಯಂತ ಉನ್ನತ ಸ್ಥಾನವಿದ್ದು, 40 ವರ್ಷಗಳ ಹಿಂದೆ ನಾವು ಪಡೆದಿದ್ದ ಶಿಷ್ಯತ್ವ ಸ್ವೀಕಾರದಂತೆ ಇದೀಗ ನಮಗೆ ಶಿಷ್ಯ ಪರಿಗ್ರಹ ನೀಡುವ ಅವಕಾಶ ಒದಗಿ ಬಂದಿದೆ. ಸಕಲ ಸದ್ಗುಣಗಳನ್ನು ಹೊಂದಿರುವ ಶಿಷ್ಯನನ್ನು ನಾವು ಆಯ್ಕೆ ಮಾಡಿದ್ದು, 5-6 ವರ್ಷಗಳಿಂದ ಅವರಿಗೆ ಶಾಸ್ತ್ರಾಭ್ಯಾಸ ಪಾಠ ಕಲಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.