Zero ಬಜೆಟ್ನಲ್ಲಿ ಒಬ್ಬಂಟಿಯಾಗಿ ಭಾರತ ಸುತ್ತಿದ ಯುವತಿ: ಹೇಗೆ ಸಾಧ್ಯ?
ಈಗಿನ ಯುವ ಜನತೆಗೆ ಪ್ರವಾಸ ಎಂದರೆ ಖಂಡಿತಾ ಇಷ್ಟ ಇದ್ದೇ ಇರುತ್ತದೆ. ಕೆಲವರು ಕೆಲಸದ ಒತ್ತಡದಿಂದ ರಿಲ್ಯಾಕ್ಸ್ಗಾಗಿ ಪ್ರವಾಸದ ಮೊರೆ ಹೋದರೆ ಇನ್ನೂ ಕೆಲವರು ಪ್ರವಾಸವನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ವೀಕೆಂಡ್ ಬಂದರೆ ಸಾಕು ಈ ವಾರಾಂತ್ಯದ ಪಯಣ ಎಲ್ಲಿಗೆ ಎನ್ನುವ ಲೆಕ್ಕಾಚಾರ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ಲಾನ್ ಮಾಡಿದಷ್ಟು ಸುಲಭವಾಗಿ ಪ್ರವಾಸ ಮುಗಿಯುವುದು ತುಂಬಾ ಕಷ್ಟ. ಕೆಲವರ ಟ್ರಿಪ್ಗಳಂತೂ ಪ್ಲಾನ್ನಲ್ಲೇ ಆರಂಭವಾಗಿ ಪ್ಲಾನ್ನಲ್ಲೇ ಮುಗಿಯುತ್ತದೆ. ಇದಕ್ಕೆ ಮುಖ್ಯಕಾರಣ ಬಜೆಟ್. ಅಂದರೆ ಹಣಕಾಸಿನ ಸಮಸ್ಯೆ.
ಒಂದು ಪ್ರವಾಸ ಯಶಸ್ವಿಯಾಗಬೇಕು ಎಂದರೆ ಅಚಲ ಮನಸ್ಥಿತಿಯಷ್ಟೇ ಹಣಕಾಸಿನ ಸ್ಥಿತಿ ಕೂಡ ಮುಖ್ಯವಾಗಿರುತ್ತದೆ. ಜೊತೆಗೆ ಸಮಯ ಹಾಗೂ ಧೈರ್ಯ ಕೂಡ ಮುಖ್ಯ. ಈಗೀಗ ಗುಂಪಿನಲ್ಲಿ ಪ್ರವಾಸ ಹೋಗುವವರಿಗಿಂತ ಸೋಲೋ ಟ್ರಿಪ್ ಅಂದರೆ ಒಬ್ಬಂಟಿಯಾಗಿ ಸಂಚಾರ ನಡೆಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸೋಲೋ ಟ್ರಿಪ್ನಿಂದ ನಿಮಗಾಗಿ ನೀವು ಸಮಯ ಕೊಡಬಹುದು. ಈ ಹಿನ್ನೆಲೆಯಲ್ಲಿ ಅನೇಕರು ಸೋಲೋ ಟ್ರಿಪ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸೋಲೋ ಟ್ರಿಪ್ ಹೋಗಲು ಧೈರ್ಯ ಇರಬೇಕು ಅದರಲ್ಲೂ ಹೆಣ್ಣ ಮಕ್ಕಳಿಗಂತೂ ಎಷ್ಟು ಸುರಕ್ಷತೆ ಇದ್ದರೂ ಸಾಲದು.

ಹೀಗಾಗಿ ಒಂದು ಪ್ರವಾಸ ಅದರಲ್ಲೂ ಒಬ್ಬೊಂಟಿಯಾಗಿ ಪ್ರವಾಸ ಮಾಡಲು ಒಂದು ಹಣಕಾಸಿನ ಸ್ಥಿತಿ, ಮತ್ತೊಂದು ಮನಸ್ಥತಿ ಅಂದರೆ ಧೈರ್ಯ ಎರಡು ಕೂಡ ಮುಖ್ಯವಾಗಿರುತ್ತದೆ. ಇದೇ ಕಾರಣಕ್ಕೆ ಅನೇಕರ ಸೋಲೋ ಟ್ರಿಪ್ ಕಾರ್ಯ ರೂಪಕ್ಕೆ ಬರದೇ ಬರೀ ಪ್ಲಾನ್ನಲ್ಲೇ ಮುಕ್ತಾಯಗೊಳ್ಳುತ್ತದೆ. ಆದರೆ ಇಲ್ಲೊಬ್ಬ ಯುವತಿ ಒಂದು ರೂಪಾಯಿ ಇಲ್ಲದೇ ತನ್ನ ಒಬ್ಬೊಂಟಿಯಾಗಿ ಪ್ರವಾಸ ಪ್ರಾರಂಭಿಸಿದ್ದು, ಒಬ್ಬಳೇ ಸಂಪೂರ್ಣ ಭಾರತ ಸುತ್ತಬೇಕು ಎನ್ನುವ ಗುರಿಯನ್ನು ಅಚಲ ಮನಸ್ಸಿನಿಂದ ಸಾಧಿಸಿದ್ದಾರೆ.
ಧೈರ್ಯ ಇದ್ದರೆ ಸೋಲೋ ಟ್ರಿಪ್ ಹೇಗೋ ಹೋಗಬಹುದು ಆದರೆ ಒಂದು ರೂಪಾಯಿ ಕೂಡ ಬಜೆಟ್ ಇಲ್ಲದೇ ಭಾರತವನ್ನು ಸುತ್ತುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಸರಸ್ವತಿ ಅಯ್ಯರ್ ಎನ್ನುವ ಮಹಿಳೆ ಸುಮಾರು ಎರಡು ವರ್ಷಗಳ ಹಿಂದೆ ಸಂಪೂರ್ಣ ಭಾರತ ಸುತ್ತಬೇಕು ಎನ್ನುವ ಮಹಾತ್ವಾಕಾಂಕ್ಷೆಯಲ್ಲಿ ಕೆಲಸ ತೊರೆದು ಒಬ್ಬೊಂಟಿಯಾಗಿ ಪ್ರಯಾಣ ಆರಂಭಿಸಿದರು.

ಕೇವಲ ಎರಡು ಸೀರೆ, ಒಂದು ಚಾಪೆ ಹಾಗೂ ಒಂದು ಪವರ್ ಬ್ಯಾಂಕ್ನೊಂದಿಗೆ ಪ್ರಯಾಣ ಆರಂಭಿಸಿದ ಸರಸ್ವತಿ ಅಯ್ಯರ್ ಇಂದಿನವರೆಗೂ ಆಹಾರ, ವಸತಿ ಅಥವಾ ಸಾರಿಗೆಗಾಗಿ ಒಂದೇ ಒಂದು ರೂಪಾಯಿ ಖರ್ಚು ಮಾಡದೇ ಇಡೀ ದೇಶವನ್ನು ಸುತ್ತಿದ್ದಾರೆ. ಲಿಫ್ಟ್ ಪಡೆಯುವ ಮೂಲಕ, ಬೆಟ್ಟ ಹತ್ತುವ ಹಾಗೂ ನಡಿಗೆಯಲ್ಲೇ ಅನೇಕ ದೂರ ಕ್ರಮಿಸಿರುವ ಸರಸ್ವತಿ ಅಯ್ಯರ್, ಉಳಿದಂತೆ ಆಹಾರ, ವಸತಿ ಹಾಗೂ ಸಾರಿಗೆಗಾಗಿ ಅಲ್ಲಲ್ಲಿ ಕೆಲಸ ಮಾಡಿದಲ್ಲದೇ, ಧರ್ಮ ಶಾಲೆಗಳಲ್ಲಿ ಹಾಗೂ ಕೆಲವು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸರಸ್ವತಿ ಅಯ್ಯರ್ ಜನದಟ್ಟಣೆ ಇರುವ ಕಡೆಗಳಲ್ಲಿಯೇ ಹೆಚ್ಚು ತಂಗಿದ್ದಾರೆ. ಈ ಪ್ರವಾಸದಿಂದ ಸರಸ್ವತಿ ಅಯ್ಯರ್ ಹೊಸದಾದ ವಿಭಿನ್ನ ಅನುಭವ ಪಡೆದಿದ್ದು, ಅನೇಕ ಅಪರಿಚಿತರ ಸ್ನೇಹ ಸಂಪಾದಿಸಿದ್ದಾರೆ. ಸರಸ್ವತಿ ಅಯ್ಯರ್ ಅವರ ಈ ಸಾಧನೆ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications