ಬಾಗಲಕೋಟೆ-ಪುಣೆ ನಾನ್ ಎಸಿ ಸ್ಲೀಪರ್ ಬಸ್: ವೇಳಾಪಟ್ಟಿ, ಮಾರ್ಗ
ಹುಬ್ಬಳ್ಳಿ, ಜೂನ್ 15: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಹೊಸ ಮಾರ್ಗವೊಂದನ್ನು ಘೋಷಣೆ ಮಾಡಿದೆ. ಅಂತರರಾಜ್ಯದ ಮಾರ್ಗದಲ್ಲಿ ಸಂಸ್ಥೆ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಓಡಿಸುತ್ತಿದೆ.
ಬಾಗಲಕೋಟೆ-ಪುಣೆ ನಡುವೆ ವಾಕರಸಾಸಂ ನಾನ್ ಎಸಿ ಸ್ಲೀಪರ್ ಬಸ್ ಓಡಿಸುತ್ತಿದೆ. ಪ್ರಯಾಣಿಕರ ಬಸ್ ಸಂಚಾರದ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಬಸ್ ವೇಳಾಪಟ್ಟಿ, ಮಾರ್ಗ: ಬಾಗಲಕೋಟೆ-ಪುಣೆ ನಡುವಿನ ನಾನ್ ಎಸಿ ಸ್ಲೀಪರ್ ಬಸ್ ಬಾಗಲಕೋಟೆಯಿಂದ 19:28ಕ್ಕೆ ಹೊರಡಲಿದೆ. ಪುಣೆಯನ್ನು 06:30ಕ್ಕೆ ತಲುಪಲಿದೆ. ಪುಣೆಯಿಂದ 21:05ಕ್ಕೆ ಹೊರಡುವ ಬಸ್, ಬಾಗಲಕೋಟೆಯನ್ನು 08:04ಕ್ಕೆ ತಲುಪಲಿದೆ.
ಈ ಮಾರ್ಗ ಲೋಕಾಪೂರ, ಮುಧೋಳ, ಜಮಖಂಡಿ, ಬನಹಟ್ಟಿ, ರಬಕವಿ, ಸತಾರ ಮೂಲಕ ಸಂಚಾರ ನಡೆಸುತ್ತಿದೆ. ಬಾಗಲಕೋಟೆ-ಪುಣೆ ನಡುವಿನ ಪ್ರಯಾಣ ದರ 849 ರೂ.ಗಳು ಎಂದು ನಿಗದಿ ಮಾಡಲಾಗಿದೆ.
ಪ್ರಯಾಣಿಕರ ಮುಂಗಡ ಟಿಕೆಟ್ ಬುಕ್ ಮಾಡಲು www.ksrtc. in ವೆಬ್ಸೈಟ್ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760993878.
ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ :
— North Western Karnataka Road Transport Corporation (@nw_krtc) June 12, 2024
ಬಾಗಲಕೋಟೆ 🔁 ಪುಣೆ
ಆನ್ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ https://t.co/P8O6ADKul2 ಗೆ ಭೇಟಿ ನೀಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 77609 93878#NWKRTC #bagalkot #NonAc #Pune #Bus #BusStand #BookTicket #PublicTransport #Travel@PriyangaMadhan pic.twitter.com/T5j9lB0oY5
ಹುಬ್ಬಳ್ಳಿ-ಸೋಲಾಪುರ ರಾಜಹಂಸ ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಹುಬ್ಬಳ್ಳಿ-ಸೋಲಾಪುರ ನಡುವೆ ರಾಜಹಂಸ ಬಸ್ ಸೇವೆಯನ್ನು ಆರಂಭಿಸಿದೆ. ಬಸ್ ಮಾರ್ಗ, ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಬಸ್ ಹುಬ್ಬಳ್ಳಿಯಿಂದ 22:15ಕ್ಕೆ ಹೊರಟು ಸೋಲಾಪುರವನ್ನು 06:15ಕ್ಕೆ ತಲುಪುತ್ತದೆ. ಸೋಲಾಪುರವನ್ನು 22:00ಕ್ಕೆ ಬಿಟ್ಟು, ಹುಬ್ಬಳ್ಳಿಯನ್ನು 06:00ಕ್ಕೆ ತಲುಪುತ್ತದೆ. ವಿಜಯಪುರ ಮಾರ್ಗದ ಮೂಲಕ ಬಸ್ ಸಂಚಾರ ನಡೆಸುತ್ತದೆ. ಈ ಮಾರ್ಗದ ಪ್ರಯಾಣ ದರ 480 ರೂ.ಗಳು.
ಅಂತರರಾಜ್ಯ ಪ್ರಯಾಣಿಕರ ಅನುಕೂಲ ಕಲ್ಪಿಸಲು ವೇಗದೂತ ಬಸ್ಗಳನ್ನು ಹುಬ್ಬಳ್ಳಿ-ಹೈದರಾಬಾದ್ ನಡುವೆ ಪರಿಚಯಿಸಿದೆ. ಈ ಮಾರ್ಗದ ಪ್ರಯಾಣ ದರ 700 ರೂ.ಗಳು ಎಂದು ನಿಗದಿ ಮಾಡಲಾಗಿದೆ.
ಈ ಬಸ್ ಹುಬ್ಬಳ್ಳಿಯಿಂದ ಹೊರಟು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್ ನಗರ ತಲುಪಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ಗೆ ವೆಬ್ಸೈಟ್ಗೆ ಭೇಟಿ ನೀಡಬಹುದು. ಈ ಬಸ್ ಬಸ್ ಹುಬ್ಬಳ್ಳಿಯಿಂದ 15:00 ಗಂಟೆಗೆ ಹೊರಡಲಿದೆ. ಹೈದರಾಬಾದ್ ತಲುಪುವ ವೇಳೆ 05:00.
ವಾಕರಸಾಸಂ ಕುಮಟಾ-ತಿರುಪತಿ ನಡುವೆಯೂ ವೇಗದೂತ ಬಸ್ ಸಂಚಾರವನ್ನು ಆರಂಭಿಸಿದೆ. ವೇಗದೂತ ಬಸ್ ಪ್ರಯಾಣ ದರ 855 ರೂ.ಗಳು. ಕುಮಟಾ-ತಿರುಪತಿ ನಡುವಿನ ಬಸ್ ಶಿರಸಿ, ಸಿದ್ಧಾಪುರ, ಶಿವಮೊಗ್ಗ, ಬೆಂಗಳೂರು ಮೂಲಕ ಸಂಚರಿಸಲಿದ್ದು, ಹಲವು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.
ಬಸ್ ಕುಮಟಾದಿಂದ 16:00ಕ್ಕೆ ಹೊರಟು, ತಿರುಪತಿಯನ್ನು 09:30ಕ್ಕೆ ತಲುಪಲಿದೆ. ಹಾಗೆಯೇ ತಿರುಪತಿಯಿಂದ 16:00 ಗಂಟೆಗೆ ಹೊರಟು, ಕುಮಟಾವನ್ನು 10.30ಕ್ಕೆ ತಲುಪಲಿದೆ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications