ನೇಪಾಳದಲ್ಲಿ ನೋಡಿದ್ದು, ಕೇಳಿದ್ದು, ಅನಿಸಿದ್ದು

ಕೆಲವು ದೇವಸ್ಥಾನಗಳಲ್ಲಿ ಪ್ರಾಣಿಗಳ ಬಲಿ ಕೊಡುತ್ತಿರುವುದು ದುಃಖ ತರುತ್ತದೆ. ಹಲವಾರು ಐತಿಹಾಸಿಕ ಸ್ಥಳಗಳು ಈಗ ಶಾಲೆ ಅಥವಾ ಉಪಾಹಾರ ಮಂದಿರಗಳಾಗಿ ಮಾರ್ಪಟ್ಟು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ. ರುದ್ರಾಕ್ಷಿ ಹಾಗೂ ಸಾಲಿಗ್ರಾಮದ ಕಲ್ಲಿಗೆ ಪ್ರಖ್ಯಾತಿಯಿರುವ ನೇಪಾಳದಲ್ಲಿ 100ರಿಂದ 1000 ನೇಪಾಳೀ ರೂಪಾಯಿಗಳ ವ್ಯಾಪ್ತಿಯಲ್ಲಿ ರುದ್ರಾಕ್ಷಿ ಹಾಗೂ 100ರಿಂದ 12,000 ನೇಪಾಳೀ ರೂಪಾಯಿಗಳ ವ್ಯಾಪ್ತಿಯಲ್ಲಿ ಸಾಲಿಗ್ರಾಮದ ಶಿಲೆಗಳು ಸಿಗುತ್ತವೆ. ಅಲ್ಲದೇ ವಿವಿಧ ರೀತಿಯ ಕೃತಕ ಮತ್ತು ನಕಲಿ ಮಣಿ-ಆಭರಣಗಳು ಇಲ್ಲಿ ದೊರಕುತ್ತವೆ. ಬೆಟ್ಟಗುಡ್ಡಗಳಿಂದ ತುಂಬಿರುವ ಇಲ್ಲಿ ರಸ್ತೆಗಳು ಚಿಕ್ಕದಾಗಿದ್ದು, ಸುಸ್ಥಿತಿಯಲ್ಲಿಲ್ಲ.
ಕಾಠ್ಮಂಡುವಿನಲ್ಲಿ ವಿದ್ಯುತ್ ಕಡಿತ ಸಾಮಾನ್ಯ. ಆದ್ದರಿಂದಲೋ ಏನೋ - ಬೆಳಿಗ್ಗೆ 4 ಘಂಟೆಗೆ ಏಳುವುದು, ಸಂಜೆ 8 ಘಂಟೆಗೆ ಮಲಗುವುದು ಇಲ್ಲಿನವರಿಗೆ ಅಭ್ಯಾಸವಾಗಿದೆ. ಶಿವನ ದೇವಸ್ಥಾನವಾದ ಪಶುಪತಿನಾಥ ಮಂದಿರದಲ್ಲಿ ವೈಷ್ಣವ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸುವುದು ನಿಜಕ್ಕೂ ಉತ್ತಮ ಮಾದರಿ. ದೇವರ ಸನ್ನಿಧಿಯಲ್ಲಿ ತಮ್ಮ ಕೊನೆಗಾಲ ಕಳೆದು ಮುಕ್ತಿ ಕಾಣುವವರು ಹಲವಾರು. ಕೊಳಚೆಯಾಗಿರುವ ಬಾಗಮತಿ ನದಿಯ ತಟದಲ್ಲಿ ಸಮೂಹರೂಪದಲ್ಲಿ ಶವಸಂಸ್ಕಾರ ಅತೀಸಾಮಾನ್ಯ ದೃಶ್ಯ.
ಪರದೇಶದ ಸಂಸ್ಕೃತಿಯ ಧಾಳಿಗೆ ಸಿಕ್ಕಿದ ನೇಪಾಳದಲ್ಲಿ ಹದಿಹರೆಯದಲ್ಲಿ ಮನೆ ಬಿಟ್ಟು ಓಡಿಬಂದು ಹುಡುಗರ ಜೊತೆ ಸುತ್ತಾಡುವುದನ್ನು "ಭಾಗೇರಜಾನಿ" ಅನ್ನುತ್ತಾರೆ. ಹಿಂದೂ ರಾಷ್ಟ್ರವಾದ ನೇಪಾಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪರಧರ್ಮೀಯರು ಮತ್ತು ಧರ್ಮಪರಿವರ್ತನೆ ಹೆಚ್ಚುತ್ತಿದೆಯೆಂದು ಕೇಳಿದ್ದೇನೆ. ಏಪ್ರಿಲ್ 2006ರಲ್ಲಿ ಚಕ್ರಾಧಿಪತ್ಯದಿಂದ ಪ್ರಜಾಸತ್ತೆಗೆ ಮರಳಿದ ನೇಪಾಳದಲ್ಲಿ ರಾಜ್ಯಾಂಗ ವ್ಯವಸ್ಥೆ ಇನ್ನೂ ಪರಿಪಕ್ವವಾಗಿಲ್ಲದೇ ನ್ಯಾಯಾಧೀಶರಿಂದ ಆಳ್ವಿಕೆ ನಡೆಯುತ್ತಿದೆ. ಎಲ್ಲಾ ದೇಶಗಳಲ್ಲೂ ಅದರದೇ ಆದ ವಿಶಿಷ್ಟತೆ, ಕಪ್ಪುಚುಕ್ಕೆಗಳಿದ್ದೇ ಇರುತ್ತವೆ. ಸಮಯ ಸಿಕ್ಕಿದಾಗ ನೋಡುವ ದೇಶಗಳ ಪಟ್ಟಿಯಲ್ಲಿ ನೇಪಾಳವನ್ನು ಸೇರಿಸಲೇನೂ ಆಡ್ಡಿಯಿಲ್ಲ!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications