ನೇಪಾಳದಲ್ಲಿ ನೋಡಿದ್ದು, ಕೇಳಿದ್ದು, ಅನಿಸಿದ್ದು

ಕೆಲವು ದೇವಸ್ಥಾನಗಳಲ್ಲಿ ಪ್ರಾಣಿಗಳ ಬಲಿ ಕೊಡುತ್ತಿರುವುದು ದುಃಖ ತರುತ್ತದೆ. ಹಲವಾರು ಐತಿಹಾಸಿಕ ಸ್ಥಳಗಳು ಈಗ ಶಾಲೆ ಅಥವಾ ಉಪಾಹಾರ ಮಂದಿರಗಳಾಗಿ ಮಾರ್ಪಟ್ಟು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ. ರುದ್ರಾಕ್ಷಿ ಹಾಗೂ ಸಾಲಿಗ್ರಾಮದ ಕಲ್ಲಿಗೆ ಪ್ರಖ್ಯಾತಿಯಿರುವ ನೇಪಾಳದಲ್ಲಿ 100ರಿಂದ 1000 ನೇಪಾಳೀ ರೂಪಾಯಿಗಳ ವ್ಯಾಪ್ತಿಯಲ್ಲಿ ರುದ್ರಾಕ್ಷಿ ಹಾಗೂ 100ರಿಂದ 12,000 ನೇಪಾಳೀ ರೂಪಾಯಿಗಳ ವ್ಯಾಪ್ತಿಯಲ್ಲಿ ಸಾಲಿಗ್ರಾಮದ ಶಿಲೆಗಳು ಸಿಗುತ್ತವೆ. ಅಲ್ಲದೇ ವಿವಿಧ ರೀತಿಯ ಕೃತಕ ಮತ್ತು ನಕಲಿ ಮಣಿ-ಆಭರಣಗಳು ಇಲ್ಲಿ ದೊರಕುತ್ತವೆ. ಬೆಟ್ಟಗುಡ್ಡಗಳಿಂದ ತುಂಬಿರುವ ಇಲ್ಲಿ ರಸ್ತೆಗಳು ಚಿಕ್ಕದಾಗಿದ್ದು, ಸುಸ್ಥಿತಿಯಲ್ಲಿಲ್ಲ.
ಕಾಠ್ಮಂಡುವಿನಲ್ಲಿ ವಿದ್ಯುತ್ ಕಡಿತ ಸಾಮಾನ್ಯ. ಆದ್ದರಿಂದಲೋ ಏನೋ - ಬೆಳಿಗ್ಗೆ 4 ಘಂಟೆಗೆ ಏಳುವುದು, ಸಂಜೆ 8 ಘಂಟೆಗೆ ಮಲಗುವುದು ಇಲ್ಲಿನವರಿಗೆ ಅಭ್ಯಾಸವಾಗಿದೆ. ಶಿವನ ದೇವಸ್ಥಾನವಾದ ಪಶುಪತಿನಾಥ ಮಂದಿರದಲ್ಲಿ ವೈಷ್ಣವ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸುವುದು ನಿಜಕ್ಕೂ ಉತ್ತಮ ಮಾದರಿ. ದೇವರ ಸನ್ನಿಧಿಯಲ್ಲಿ ತಮ್ಮ ಕೊನೆಗಾಲ ಕಳೆದು ಮುಕ್ತಿ ಕಾಣುವವರು ಹಲವಾರು. ಕೊಳಚೆಯಾಗಿರುವ ಬಾಗಮತಿ ನದಿಯ ತಟದಲ್ಲಿ ಸಮೂಹರೂಪದಲ್ಲಿ ಶವಸಂಸ್ಕಾರ ಅತೀಸಾಮಾನ್ಯ ದೃಶ್ಯ.
ಪರದೇಶದ ಸಂಸ್ಕೃತಿಯ ಧಾಳಿಗೆ ಸಿಕ್ಕಿದ ನೇಪಾಳದಲ್ಲಿ ಹದಿಹರೆಯದಲ್ಲಿ ಮನೆ ಬಿಟ್ಟು ಓಡಿಬಂದು ಹುಡುಗರ ಜೊತೆ ಸುತ್ತಾಡುವುದನ್ನು "ಭಾಗೇರಜಾನಿ" ಅನ್ನುತ್ತಾರೆ. ಹಿಂದೂ ರಾಷ್ಟ್ರವಾದ ನೇಪಾಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪರಧರ್ಮೀಯರು ಮತ್ತು ಧರ್ಮಪರಿವರ್ತನೆ ಹೆಚ್ಚುತ್ತಿದೆಯೆಂದು ಕೇಳಿದ್ದೇನೆ. ಏಪ್ರಿಲ್ 2006ರಲ್ಲಿ ಚಕ್ರಾಧಿಪತ್ಯದಿಂದ ಪ್ರಜಾಸತ್ತೆಗೆ ಮರಳಿದ ನೇಪಾಳದಲ್ಲಿ ರಾಜ್ಯಾಂಗ ವ್ಯವಸ್ಥೆ ಇನ್ನೂ ಪರಿಪಕ್ವವಾಗಿಲ್ಲದೇ ನ್ಯಾಯಾಧೀಶರಿಂದ ಆಳ್ವಿಕೆ ನಡೆಯುತ್ತಿದೆ. ಎಲ್ಲಾ ದೇಶಗಳಲ್ಲೂ ಅದರದೇ ಆದ ವಿಶಿಷ್ಟತೆ, ಕಪ್ಪುಚುಕ್ಕೆಗಳಿದ್ದೇ ಇರುತ್ತವೆ. ಸಮಯ ಸಿಕ್ಕಿದಾಗ ನೋಡುವ ದೇಶಗಳ ಪಟ್ಟಿಯಲ್ಲಿ ನೇಪಾಳವನ್ನು ಸೇರಿಸಲೇನೂ ಆಡ್ಡಿಯಿಲ್ಲ!
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications