Nilakandi Waterfalls: ನೀಲಕಂಡಿ ಜಲಪಾತ ಸೃಷ್ಟಿಯಾಗಿದ್ದೇಗೆ? ಹಾಗೂ ಈ ಅದ್ಭುತ ತಾಣಕ್ಕೆ ತಲುಪುವ ಮಾರ್ಗಗಳ ವಿವರ ತಿಳಿಯಿರಿ
ಮಡಿಕೇರಿ, ಜುಲೈ, 31: ಕೊಡಗಿನಲ್ಲಿರುವ ಕೆಲವೇ ಕೆಲವು ಜಲಪಾತಗಳನ್ನು ಮಾತ್ರ ಪ್ರವಾಸಿಗರು ಸುಲಭವಾಗಿ ತಲುಪಬಹುದು. ಆದರೆ ಉಳಿದಂತೆ ಹೆಚ್ಚಿನ ಜಲಪಾತಗಳನ್ನು ನೋಡಬೇಕೆಂದರೆ ಶ್ರಮಪಡಲೇಬೇಕಾಗುತ್ತದೆ. ಅವುಗಳ ಬಳಿಗೆ ಹೋಗುವುದು ಕೂಡ ಸವಾಲಿನ ಕೆಲಸವಾಗಿದೆ. ಇಂತಹ ಜಲಪಾತಗಳ ಸಾಲಿಗೆ ಪಶ್ಚಿಮಘಟ್ಟದ ತಡಿಯಂಡಮೋಳ್ ಬೆಟ್ಟಶ್ರೇಣಿಯಲ್ಲಿರುವ ನೀಲಕಂಡಿ ಜಲಪಾತವೂ ಸೇರುತ್ತದೆ.
ಈ ಜಲಪಾತವನ್ನು ವೀಕ್ಷಿಸಬೇಕಾದರೆ ಒಂದು ದಿನ ಮೀಸಲಿಡಬೇಕು. ಕಲ್ಲುಮುಳ್ಳಿನ ಏರು ಹಾದಿಯಲ್ಲಿ ಬೆಟ್ಟವನ್ನೇರಬೇಕು, ಜಿಗಣೆಗಳೊಂದಿಗೆ ಹೋರಾಡಬೇಕು, ಇದು ಅಷ್ಟು ಸುಲಭದ ಕೆಲಸವಲ್ಲ. ಹಾಗೆಂದು ಕಷ್ಟವೂ ಅಲ್ಲ. ಎಲ್ಲದಕ್ಕೂ ತಯಾರಿ ಮಾಡಿಕೊಂಡು ಹೊರಟರೆ ಖುಷಿ ಮತ್ತು ಒಂದೊಳ್ಳೆಯ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಏರು ಹಾದಿಯಲ್ಲಿ ಉಸಿರು ಬಿಗಿಹಿಡಿದು ಹತ್ತುವಾಗ, ಬೆಟ್ಟಗುಡ್ಡಗಳ ಕಡಿದಾದ ಕಾಲು ದಾರಿಯಲ್ಲಿ ನಡೆಯುವಾಗ ತಡಿಯಂಡಮೋಳ್ ಬೆಟ್ಟಶ್ರೇಣಿಯ ವಿಹಂಗಮ ನೋಟ ಮೈಮನವನ್ನು ಪುಳಕಗೊಳಿಸುತ್ತದೆ. ಅಷ್ಟೇ ಅಲ್ಲದೆ ಮುಂದೆ ಸಾಗುವ, ಜಲಪಾತವನ್ನು ವೀಕ್ಷಿಸುವುದು ಹುಮ್ಮಸ್ಸು ತುಂಬುತ್ತದೆ.

ಸದಾ ಕೆಲಸಗಳ ಒತ್ತಡದಲ್ಲಿರುವವರು, ಜನಜಂಗುಳಿ, ವಾಹನಗಳ ಆರ್ಭಟ, ಸದ್ದುಗದ್ದಲಗಳಲ್ಲಿ ದಿನ ಕಳೆಯುವವರು ಇಲ್ಲಿಗೆ ಬಂದರೆ ನಿಸರ್ಗದ ಹೊಸ ಪ್ರಪಂಚವೊಂದು ತೆರೆದುಕೊಂಡಂತೆ ಭಾಸವಾಗುತ್ತದೆ. ಪ್ರಕೃತಿಯ ಪ್ರಶಾಂತತೆ, ನೈಸರ್ಗಿಕ ನೋಟಗಳು ಹೊಸಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹೀಗೆ ಹೋಗುವಾಗ ಪ್ರತಿಹೆಜ್ಜೆಗೂ ಪ್ರಕೃತಿ ಮಾತೆ ಮನವೊಲ್ಲಾಸ ನೀಡುತ್ತದೆ. ಸುತ್ತಲ ಹಸಿರು ಗಿರಿ ಕಂದರ, ಬಂಡೆಕಲ್ಲು, ಕಂದಕಗಳ ನಡುವೆ ಚಿಮ್ಮುವ ಜಲ, ಚಿಲಿಪಿಲಿಗುಟ್ಟುವ ಹಕ್ಕಿಗಳು ಹೀಗೆ ಎಲ್ಲವೂ ಖುಷಿಕೊಡುತ್ತವೆ.
ನೀಲಕಂಡಿ ಜಲಪಾತ ಹೆಸರು ಬಂದಿದ್ದೇಗೆ?
ನೀಲಕಂಡಿ ಜಲಪಾತದ ಬಗ್ಗೆ ಹೇಳುವುದಾದರೆ ತಡಿಯಂಡಮೋಳ್ ಬೆಟ್ಟ ಶ್ರೇಣಿಯಲ್ಲಿ ಹುಟ್ಟಿ ಹರಿಯುವ ಪಾತಿ ನದಿಯಿಂದ ಜಲಪಾತ ಸೃಷ್ಟಿಯಾಗಿದೆ. ಆದರೆ ಈ ನದಿ ಕೇರಳದ ಕಡೆಗೆ ಹರಿದು ಹೋಗುತ್ತದೆ. ಬೆಟ್ಟದ ಕಡಿದಾದ ರಸ್ತೆಯಲ್ಲಿ ಸಾಗುತ್ತಿದ್ದಂತೆಯೇ ದೂರದ ಬೆಟ್ಟದಲ್ಲಿ ಕರಿಹೆಬ್ಬಂಡೆಗಳ ಮೇಲೆ ಮಿಂಚು ಹರಿದಂತೆ ಜಲಪಾತ ಕಾಣಿಸುತ್ತದೆ. ಈ ಜಲಪಾತದ ಹತ್ತಿರ ಹೋದಂತೆಲ್ಲ ಭೀಕರತೆ ಗೊತ್ತಾಗುತ್ತದೆಯಾದರೂ, ಕಾನನಗಳ ನಡುವೆ ಇರುವ ಕಾರಣ ಸಂಪೂರ್ಣ ಚೆಲುವು ಕಾಣಿಸುವುದಿಲ್ಲ.
ಹೀಗಾಗಿ ದೂರದಿಂದಲೇ ಜಲಪಾತವನ್ನು ವೀಕ್ಷಿಸುವುದು ಒಳಿತು. ನೀಲಕಂಡಿ ಜಲಪಾತವು ಸುಮಾರು 150 ಅಡಿಗಿಂತಲೂ ಹೆಚ್ಚು ಎತ್ತರದಿಂದ ವಿವಿಧ ಹಂತದಲ್ಲಿ ಧುಮುಕುತ್ತಾ ಕಂದಕವನ್ನು ಸೇರಿ ಹರಿದು ಹೋಗುತ್ತದೆ. ಇನ್ನು ನೀಲಕಂಡಿ ಜಲಪಾತ ಎಂಬ ಹೆಸರು ಹೇಗೆ ಬಂತು ಎಂಬುದನ್ನು ನೋಡುತ್ತಾ ಹೋದರೆ ಬೆಟ್ಟದ ಹೆಸರನ್ನೇ ಜಲಪಾತಕ್ಕೆ ಸ್ಥಳೀಯರು ಇಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ನೀಲಕಂಡಿ ಜಲಪಾತ ಇರುವ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುರುಂಜಿ ಗಿಡಗಳು ಬೆಳೆದಿವೆ. ಈ ಗಿಡಗಳು ಹತ್ತೋ, ಹನ್ನೆರಡೋ ವರ್ಷಗಳಿಗೊಮ್ಮೆ ಹೂ ಬಿಡುತ್ತವೆ. ಹೀಗೆ ಹೂ ಬಿಟ್ಟಾಗ ಇಡೀ ಬೆಟ್ಟ ನೀಲಿಯಾಗಿ ಗೋಚರಿಸುತ್ತದೆ.
ನೀಜಲಪಾತದ ಬಳಿಗೆ ಹೋಗುವುದು ಹೇಗೆ?
ಕುರುಂಜಿ ಹೂ ಬಿಟ್ಟು ಬೆಟ್ಟ ನೀಲಿಯಾಗಿ ಕಾಣುವುದರಿಂದ ಅಲ್ಲದೆ, ಬೆಟ್ಟದ ನಡುವೆ ಕಿಂಡಿಯಂತಹ ಕಂದಕ ಇರುವುದರಿಂದ ನೀಲಕಂಡಿ ಎಂಬ ಹೆಸರು ಬಂದಿರಬಹುದು. ಇನ್ನು ಈ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಾಗ ಬೆಟ್ಟದ ಮೇಲಿಂದ ಹರಿದುಬರುವ ನೀರು ಹೆಬ್ಬಂಡೆಯ ಮೇಲೆ ಧುಮುಕುವಾಗ ಜಲಪಾತ ಸೃಷ್ಟಿಯಾಗುತ್ತದೆ ಅದುವೇ ನೀಲಕಂಡಿ ಜಲಪಾತವಾಗಿದೆ.
ಎತ್ತರ ಪ್ರದೇಶದಿಂದ ಭೋರ್ಗರೆದು ಧುಮ್ಮಿಕ್ಕುವ ಜಲಧಾರೆ ತಳ ಸೇರುವ ವೇಳೆಗೆ ಚಿಕ್ಕಾತಿ ಚಿಕ್ಕ ಜಲಪಾತವನ್ನು ಸೃಷ್ಠಿಮಾಡಿ ಬಳಿಕ ಕಂದಕದೊಳಗೆ ಹೀಗೆ ಹರಿದು ಹೋಗುವ ನದಿಯ ಸದ್ದು ಪ್ರಶಾಂತತೆಯನ್ನು ಸೀಳಿಕೊಂಡು ನಮ್ಮ ಕಿವಿಗೆ ಅಪ್ಪಳಿಸುತ್ತದೆ. ನೀಲಕಂಡಿ ಜಲಪಾತಕ್ಕೆ ತೆರಳುವುದಾದರೆ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ನಾಪೋಕ್ಲಿಗೆ ಹೋಗಬೇಕಾಗುತ್ತದೆ. ನಂತರ ಅಲ್ಲಿಂದ ಕಕ್ಕಬ್ಬೆಯ ಕಬ್ಬಿನಕಾಡಿಗೆ ಹೋಗಿ, ಬಲಕ್ಕೆ ಏರು ರಸ್ತೆಯಲ್ಲಿ ಸುಮಾರು 3 ಕಿ.ಮೀ. ಸಾಗಬೇಕು.
ಹೀಗೆ ಏರುರಸ್ತೆಯಲ್ಲಿ ಸಾಗುವುದು ವಿಶಿಷ್ಟ ಅನುಭವ ಆದಂತಾಗುತ್ತದೆ. ಫೋರ್ವೀಲ್ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸಾಗುವುದು ಸ್ವಲ್ಪ ಕಷ್ಟವೇ. ಆದರೂ ಕಷ್ಟಪಟ್ಟು ಸಾಗಿದರೆ ಹನಿವ್ಯಾಲಿ ಎಂಬ ಎಸ್ಟೇಟ್ ಸಿಗುತ್ತದೆ. ಅಲ್ಲಿಂದ ಮತ್ತೆ ಏರು ಹಾದಿಯಲ್ಲಿ ನಡೆಯುತ್ತಾ ಸುಮಾರು ಮೂರು ಕಿ.ಮೀ.ನಷ್ಟು ಸಾಗಿದರೆ ಸುಮಾರು ಒಂದೂವರೆ ಕಿ.ಮೀ.ದೂರದಿಂದಲೇ ನೀಲಕಂಡಿ ಜಲಧಾರೆಯ ದರ್ಶನವಾಗುತ್ತದೆ. ಅಲ್ಲಿಂದ ಮುಂದಕ್ಕೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications