ಪ್ರವಾಸಿಗರು, ಚಾರಣಿಗರ ಗಮನಕ್ಕೆ: ಈ ಜಲಪಾತಗಳ ಭೇಟಿಗೆ ನಿಷೇಧ
ಬೆಳಗಾವಿ, ಜೂನ್ 17: ಮಳೆಗಾಲ ಆರಂಭವಾಗಿದೆ ಹಲವು ಜಲಪಾತಗಳಿಗೆ ಜೀವಕಳೆ ಬಂದಿದೆ. ರಜೆ ಹಾಕಿ ಪ್ರವಾಸ, ಚಾರಣ ಕೈಗೊಳ್ಳುವವರ ಗಮನಕ್ಕೆ ಪ್ರಮುಖವಾದ ಮಾಹಿತಿಯೊಂದಿದೆ. ಹಲವು ಜಲಪಾತಗಳನ್ನು ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ನೀವು ಪ್ರವಾಸದ ಯೋಜನೆ ತಯಾರಿಸಿದ್ದರೆ ಅದನ್ನು ಬದಲಾಯಿಸುವುದು ಉತ್ತಮ.
ಅರಣ್ಯ ಇಲಾಖೆ ಬೆಳಗಾವಿ ಜಿಲ್ಲೆಯ ಖಾನಾಪುರದ ಎಲ್ಲಾ ಜಲಪಾತಗಳ ಭೇಟಿಗೆ ನಿಷೇಧ ಹೇರಿದೆ. ಮುಂದಿನ ಆದೇಶದ ತನಕ ಯಾವುದೇ ಜಲಪಾತಗಳನ್ನು ವೀಕ್ಷಣೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆ, ಬೆಳಗಾವಿ ವಿಭಾಗ, ಕಣಕುಂಬಿ ವಲಯ ಈ ಕುರಿತು ಪ್ರಕಟಣೆ ಮೂಲಕ ಪ್ರವಾಸಿಗರಿಗೆ, ಚಾರಣ ಕೈಗೊಳ್ಳುವವರಿಗೆ ಮಾಹಿತಿ ನೀಡಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶಗಳಿಗೆ ಅತಿಕ್ರಮಣ ಪ್ರವೇಶ ಮಾಡುವುದು ಕರ್ನಾಟಕ ಅರಣ್ಯ ಕಾಯ್ದೆ, 1963ರ ಕಲಂ 24ರ ಪ್ರಕಾರ ಶಿಕ್ಷಾರ್ಹ ಅಪರಾಧ (ಒಂದು ವರ್ಷ ಜೈಲು ಮತ್ತು ದಂಡ). ಸೂಚನೆ ಜಲಪಾತ ವೀಕ್ಷಣೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಏಕೆ ಪ್ರವಾಸಿಗೆ ಭೇಟಿ ನಿಷೇಧ?; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ಹಲವು ಜಲಪಾತಗಳಿವೆ. ಇವುಗಳಲ್ಲಿ ಕಣಕುಂಬಿ, ಚಿಗುಲೆ, ಪಾರವಾಡ, ಚಿಕಲೆ, ವಜ್ರಾ ಪ್ರಮುಖವಾದವುಗಳು. ಖಾನಾಪುರ ತಾಲೂಕಿನ ಬಹುತೇಕ ಅರಣ್ಯ ಪ್ರದೇಶಗಳು ಭೀಮಗಡ ವನ್ಯಧಾಮದ ವ್ಯಾಪ್ತಿಗೆ ಸೇರಿದ್ದು, ರಕ್ಷಿತ ಅಭಯಾರಣ್ಯ ಎಂದು ಘೋಷಣೆಯಾಗಿದೆ.
ಆದ್ದರಿಂದ ಈ ವ್ಯಾಪ್ತಿಯಲ್ಲಿರುವ ಜಲಪಾತಗಳನ್ನು ನೋಡು ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕಿದೆ. ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದು ಸೊಗಸು. ಆದರೆ ಅಲ್ಲಿಗೆ ತೆರಳುವ ಮಾರ್ಗ ಅಷ್ಟೇ ಅಪಾಯಕಾರಿ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಜಲಪಾತದ ವೀಕ್ಷಣೆಗೆ ನಿಷೇಧ ಹೇರುತ್ತದೆ.
ಹಿಂದಿನ ಹಲವು ವರ್ಷ ಜಲಪಾತ ನೋಡಲು ಆಗಮಿಸಿದ ಪ್ರವಾಸಿಗರ ಜೀವಕ್ಕೆ ಅಪಾಯ ತರುವಂತಹ ಪ್ರಕರಣಗಳು ನಡೆದಿವೆ. ಆದ್ದರಿಂದ ಮಳೆಗಾಲದ ಆರಂಭದಲ್ಲಿಯೇ ಖಾನಾಪುರ ಎಲ್ಲಾ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಸ್ಥಳೀಯ ಆಡಳಿತವೂ ಸಹ ಅರಣ್ಯ ಇಲಾಖೆ ಕ್ರಮಕ್ಕೆ ಬೆಂಬಲ ಸೂಚಿಸಿದೆ.
ಖಾನಾಪುರ ತಾಲೂಕಿನಲ್ಲಿ ಸುಮಾರು 92 ಸಾವಿರ ಹೆಕ್ಟೇರ್ ಅರಣ್ಯವಿದೆ. ಮಲಪ್ರಭಾ, ಮಹದಾಯಿ, ಮಾರ್ಕಂಡೇಯ, ಪಾಂಡರಿ ಸೇರಿದಂತೆ ವಿವಿಧ ನದಿಗಳ ಉಗಮಸ್ಥಾನವಿದೆ. ಅರಣ್ಯ ಪ್ರದೇಶದಲ್ಲಿ ಹರಿಯುವ ನದಿಗಳು ಎತ್ತರದ ಗುಡ್ಡ, ಬೆಟ್ಟಗಳಿಂದ ಧುಮ್ಮಿಕ್ಕಿ ಹಲವು ಜಲಪತಾಗಳನ್ನು ಸೃಷ್ಟಿಸಿವೆ.
ಆದರೆ ಕಾಡಿದಾದ ಕಾಡಿನಲ್ಲಿರುವ ಈ ಜಲಪಾತಗಳನ್ನು ನೋಡಲು ಹೋಗುವುದು ಅಪಾಯಕಾರಿಯಾಗಿದೆ. ಕೆಲವು ಜಲಪಾತಗಳಿಗೆ ಸಾಗುವ ಹಾದಿ ಸರಿಯಾಗಿಲ್ಲ. ಮತ್ತೆ ಕೆಲವು ಕಡೆ ವನ್ಯಜೀವಿಗಳ ದಾಳಿಯ ಭಯವಿದೆ. ಸ್ಥಳೀಯ ಪರಿಸ್ಥಿತಿ ಅರಿಯದೇ ಎಲ್ಲಿಂದಲೂ ಆಗಮಿಸುವ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಬಾರದು ಎಂದು ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ.
ನೈಋತ್ಯ ಮುಂಗಾರು ಮಳೆ ಅವಧಿಯಲ್ಲಿ ಕಾಡಿನ ಪರಿಸ್ಥಿತಿ ಭಿನ್ನವಾಗಿರುತ್ತದೆ. ತೀವ್ರವಾದ ಮಳೆಯಿಂದಾಗಿ ಹಾದಿ ಕಠಿಣವಾಗಿರುತ್ತದೆ. ಜಲಪಾತಕ್ಕೆ ಸಾಗುವ ರಸ್ತೆ ಜಾರುತ್ತದೆ. ಹಲವಾರು ವಿಷಜಂತುಗಳು ಸಹ ಸಂಚಾರ ನಡೆಸುತ್ತಿರುತ್ತವೆ. ಆದ್ದರಿಂದ ಪ್ರವಾಸಿಗರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಜಲಪಾತಗಳ ವೀಕ್ಷಣೆ ನಿಷೇಧಿಸಲಾಗಿದೆ.
ಜಲಪಾತ ನೋಡಲು ಆಗಮಿಸುವ ಪ್ರವಾಸಿಗರು, ಚಾರಣ ನಡೆಸುವವರು ಅರಣ್ಯದಲ್ಲಿ ಪ್ಲಾಸ್ಟಿಕ್ ಸೇರಿದಂತೆ ತಾಜ್ಯಗಳನ್ನು ಎಸೆದು ಹೋಗುತ್ತಿದ್ದರು. ಇದರಿಂದಾಗಿ ಮಾಲಿನ್ಯ ಉಂಟಾಗುತ್ತಿತ್ತು. ಅಲ್ಲದೇ ಚಾರಣಿಗರು ದಾರಿ ತಪ್ಪಿ, ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯೂ ಇರುವುದರಿಂದ ಪ್ರವಾಸಿಗರಿಗೆ ಸದ್ಯಕ್ಕೆ ಜಲಪಾತ ನೋಡುವ ಭಾಗ್ಯವಿಲ್ಲ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications