Ballari utsav 2023: ಆಗಸದಿಂದ ಐತಿಹಾಸಿಕ ಸ್ಥಳಗಳ ದೃಶ್ಯವನ್ನು ಸವಿಯಲು "ಬೈಸ್ಕೈ" ವ್ಯವಸ್ಥೆ, ದರದ ವಿವರ ತಿಳಿಯಿರಿ
ಬಳ್ಳಾರಿ, ಜನವರಿ, 20: ಬಳ್ಳಾರಿಯ ಐತಿಹಾಸಿಕ ಸ್ಥಳಗಳು ಹಾಗೂ ಮನೋರಮಣೀಯ ಬೆಟ್ಟ, ಗುಡ್ಡಗಳ ದೃಶ್ಯಗಳನ್ನು ಆಗಸದಿಂದ ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬಳ್ಳಾರಿ ಬೈಸ್ಕೈನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.
ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಆಗಸದಿಂದ ಬಳ್ಳಾರಿಯನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ನಗರದ ಕೊಳಗಲ್ ವಿಮಾನ ನಿಲ್ದಾಣದಿಂದ ಬಳ್ಳಾರಿ ಬೈಸ್ಕೈಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಬೈಸ್ಕೈನಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಹಿಂದೆ ಹಂಪಿ ಉತ್ಸವದಲ್ಲಿ ಬೈಸ್ಕೈ ಇರುತ್ತಿತ್ತು. ಈಗ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ತುಂಬೆ ಏವಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಚೊಚ್ಚಲ ಉತ್ಸವದ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಇದನ್ನು ಆಯೋಜಿಸಲಾಗಿದೆ. ಈ ಬೈಸ್ಕೈಯುು ಉತ್ಸವಕ್ಕೆ ಹಾಗೂ ನಗರದ ಜನತೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದರು.
Ballari utsav 2023: ಗಣಿನಾಡು ಬಳ್ಳಾರಿಯಲ್ಲಿ ತಲೆ ಎತ್ತಲಿದೆ 23 ಅಡಿ ಎತ್ತರದ ಅಪ್ಪು ಪುತ್ಥಳಿ
ಆಗಸದಿಂದ
ಐತಿಹಾಸಿಕ
ಸ್ಥಳಗಳ
ವೀಕ್ಷಣೆ
ಬೈಸ್ಕೈನಲ್ಲಿ
ಹೆಲಿಕಾಪ್ಟರ್
ಮೂಲಕ
15
ನಿಮಿಷಗಳ
ಕಾಲ
ಆಗಸದಿಂದ
ಬಳ್ಳಾರಿಯ
ಪ್ರಸಿದ್ಧ
ಸ್ಥಳಗಳಾದ
ತುಮಟಿಯ
ಐತಿಹಾಸಿಕ
ಬ್ರಿಟಿಷ್
ಬಂಗಲೆ
ಹಾಗೂ
ಸಾಲು
ಬೆಟ್ಟ,
ಬಳ್ಳಾರಿ
ಕೋಟೆ,
ಸಂಗನಕಲ್ಲು
ಗುಡ್ಡ
ಸೇರಿದಂತೆ
ನಗರವನ್ನು
ವೀಕ್ಷಿಸಿಸಬಹುದಾಗಿದೆ.
ಹೆಲಿಕಾಪ್ಟರ್ನಲ್ಲಿ
ಒಂದು
ಬಾರಿಗೆ
6
ಮಂದಿ
ಪ್ರಯಾಣಿಕರು
ಹಾರಾಟ
ನಡೆಸಬಹುದಾಗಿದೆ.
ಒಬ್ಬರಿಗೆ
3,500
ರೂಪಾಯಿ
ದರ
ನಿಗದಿಪಡಿಸಲಾಗಿದೆ.
ಸಾರ್ವಜನಿಕರು
ಹೆಲಿಕಾಪ್ಟರ್ನಲ್ಲಿ
ಸಂಚರಿಸಿ
ನಗರ
ಸೇರಿದಂತೆ
ಐತಿಹಾಸಿಕ
ಮನೋರಮಣಿಯ
ದೃಶ್ಯಗಳನ್ನು
ನೋಡಿ
ಆನಂದಿಸಬಹುದಾಗಿದೆ
ಎಂದು
ತಿಳಿಸಿದರು.
ಜನವರಿ
19ರಿಂದ
"ಬೈಸ್ಕೈ"
ಆರಂಭ
ಬೈಸ್ಕೈಯು
ಜನವರಿ
19ರಿಂದ
ಆರಂಭವಾಗಿದ್ದು,
ಇದು
ಜನವರಿ
23
ರವರೆಗೂ
ನಡೆಯಲಿದೆ.
ಬೆಳಗ್ಗೆ
7ರಿಂದ
ಸಂಜೆ
4
ರವರೆಗೆ
ನಡೆಯಲಿದೆ.
ಹವಮಾನ
ನೋಡಿಕೊಂಡು
ಕಾಲಾವಧಿಯನ್ನು
ವಿಸ್ತರಿಸಲಾಗುವುದು.
ಅದರಂತೆಯೇ
ಜನರ
ಆಸಕ್ತಿಯ
ಮೇರೆಗೆ
ಇನ್ನೊಂದು
ಹೆಲಿಕಾಪ್ಟರ್
ತರಿಸಲು
ತೀರ್ಮಾನಿಸಲಾಗುವುದು
ಎಂದರು.
ಇನ್ನು ಟಿಕೆಟ್ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಭಾಗದಲ್ಲಿಯೂ ಲಭ್ಯವಾಗಲಿದೆ. ಸಾರ್ವಜನಿಕರು ನೋಂದಣಿಗಾಗಿ https://helitaxii.com/ಗೆ ಭೇಟಿ ನೀಡಬಹುದು. ಅಥವಾ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9620301866 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಸಹಾಯಕ ಆಯುಕ್ತರಾದ ಹೇಮಂತ್, ತಹಶೀಲ್ದಾರ್ ವಿಶ್ವನಾಥ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಡಾ.ಎಸ್.ತಿಪ್ಪೇಸ್ವಾಮಿ, ತುಂಬೆ ಏವಿಯೇಷನ್ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.