Bengaluru to Manchanabele Dam Trip: ಬೆಂಗಳೂರಿನಿಂದ ಮಂಚನಬೆಲೆ ಡ್ಯಾಮ್ಗೆ ಪ್ರವಾಸ: ಸಂಗಾತಿಯೊಂದಿಗೆ ಹೋದರೆ ಆಗದು ಆಯಾಸ
ಬೆಂಗಳೂರಿಗೆ ಹತ್ತಿರ ಇರುವ ವೀಕ್ಷಣೀಯ ಸ್ಥಳಗಳಲ್ಲಿ ಮಂಚಿನಬೆಲೆ ಡ್ಯಾಮ್ ಕೂಡ ಒಂದು. ನೀವೇನಾದ್ರು ಒಂದು ದಿನದ ಪ್ರವಾಸ ಹೋಗಬೇಕು ಅಂದುಕೊಂಡರೆ ಈ ಪ್ಲೇಸ್ ಬೆಸ್ಟ್. ಅದರಲ್ಲೂ ನೀವು ನಿಮ್ಮ ಸಂಗಾತಿಯೊಂದಿಗೆ ಏಕಾಂಗಿಯಾಗಿ ಕಳೆಯಬೇಕು ಅಂದುಕೊಂಡಿದ್ದರೆ ಈ ಸ್ಥಳ ನಿಮಗೆ ಸೂಟೆಬಲ್ ಆಗಿದೆ.
ಹಾಗಾದರೆ ಮಂಚಿನಬೆಲೆ ಡ್ಯಾಮ್ ಬೆಂಗಳೂರಿನಿಂದ ಎಷ್ಟು ದೂರವಿದೆ? ಇಲ್ಲಿ ಏನೆಲ್ಲಾ ನೋಡಬಹುದು? ಈ ಸ್ಥಳ ಹೇಗಿದೆ ಅನ್ನೋದ ಸಂಪೂರ್ಣ ವಿವರ ಇಲ್ಲಿದೆ. ನೇವೇನಾದ್ರು ಇವತ್ತು ಹೊರಗೆ ಹೋಗಬೇಕು ಅಂದುಕೊಂಡಿದ್ದರೆ ಈ ಸ್ಥಳಕ್ಕೆ ಹೋಗಬಹುದು. ಒಂದೇ ದಿನದಲ್ಲಿ ವಾಪಸ್ ಕೂಡ ಬೆಂಗಳೂರಿಗೆ ಬರಬಹುದು.

ಮಂಚಿನಬೆಲೆ ಡ್ಯಾಮ್ಗೆ ಭೇಟಿ ನೀಡುವ ಸಮಯ
ಬೆಂಗಳೂರಿನಿಂದ ಮಂಚಿನಬೆಲೆ ಡ್ಯಾಮ್ 36 ಕಿಮೀ ದೂರವಿದೆ. 1 ರಿಂದ 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿಗೆ ನೀವು ಬಸ್ ಅಥವಾ ಕ್ಯಾಬ್ ಮೂಲಕ ಹೋಗಬಹುದು. ಇಲ್ಲವಾದಲ್ಲಿ ನಿಮ್ಮ ಸ್ವಂತ ಟೂವಿಲ್ಲರ್ ಅಥವಾ ಕಾರಲ್ಲಿ ಕೂಡ ಹೋಗಬಹುದು. ಇಲ್ಲಿಗೆ 6 AM - 6 PMವರೆಗೆ ಹೋಗಲು ಅವಕಾಶವಿರುತ್ತದೆ. ಉಚಿತವಾಗಿ ಪ್ರವೇಶ ಇರುತ್ತದೆ.
ಜೊತೆಗೆ ಮಾಗಡಿಯಿಂದ ಕೇವಲ 19 ಕಿಮೀ ದೂರದಲ್ಲಿರುವ ಈ ಮಂಚನಬೆಲೆ ಅಣೆಕಟ್ಟು ಕರ್ನಾಟಕದ ರಾಮನಗರ ಜಿಲ್ಲೆಯ ಮಂಚನಬೆಲೆ ಗ್ರಾಮದಲ್ಲಿದೆ. ದಟ್ಟವಾದ ಸಸ್ಯವರ್ಗದ ನಡುವೆ ಈ ಸುಂದರವಾದ ಜಲಾಶಯವಿದೆ. ಬೆಂಗಳೂರಿನ ಸಮೀಪದಲ್ಲಿ ಭೇಟಿ ನೀಡಲು ಇದು ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ.
ನೈಸರ್ಗಿಕ ಸೌಂದರ್ಯ
ಮಂಚನಬೆಲೆ ಅಣೆಕಟ್ಟನ್ನು ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ಮಾಗಡಿ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರನ್ನು ಒದಗಿಸುತ್ತದೆ. ಈ ಸ್ಥಳದಲ್ಲಿ ಪ್ರಶಾಂತವಾದ ವಾತಾವರಣವಿರುತ್ತದೆ. ಕಣ್ಣಾಯಿಸಿದಲೆಲ್ಲ ಹಸಿರು ಕಾಣಿಸುತ್ತದೆ.

ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತತೆಯಿಂದಾಗಿ ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಮಂಚನಬೆಲೆ ಅಣೆಕಟ್ಟು ತಂಪಾದ ವಾತಾವರಣ ಕೂಡಿದ್ದು ಆಣೆಕಟ್ಟಿನ ಸ್ಪಷ್ಟ ನೀರಿನ್ನು ದೂರದಿಂದ ಕಾಣಬಹುದು. ಈ ಅಣೆಕಟ್ಟಿನ ಸುತ್ತಲೂ ಹಚ್ಚ ಹಸಿರಿನ ಮರಗಳು ಚಿಕ್ಕ ಬೆಟ್ಟಗಳಲ್ಲಿದ್ದು, ಈ ಸ್ಥಳವನ್ನು ಇನ್ನಷ್ಟು ಮೋಡಿಮಾಡುವಂತೆ ಮಾಡುತ್ತದೆ. ಈ ಸ್ಥಳವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಆಕರ್ಷಕವಾಗಿ ಕಾಣುತ್ತದೆ. ಏಕೆಂದರೆ ಹಚ್ಚ ಹಸಿರಿನ ಈ ಸ್ಥಳ, ನೀಲಿ ಆಕಾಶ, ಆಣೆಗಟ್ಟಿನ ನೀರು ನೋಡುಗರನ್ನು ಆಕರ್ಷಿಸುತ್ತದೆ.
ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಿನ ಸ್ಥಳ
ಟ್ರೆಕ್ಕಿಂಗ್ನಿಂದ ಹಿಡಿದು ರಾಪ್ಪೆಲಿಂಗ್ ಮಾಡಲು ಈ ಸ್ಥಳಕ್ಕೆ ಜನ ಭೇಟಿ ನೀಡುತ್ತಾರೆ. ಜಲ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಪ್ರಕೃತಿ ಪ್ರಿಯರು ಮತ್ತು ಸಾಹಸ ಉತ್ಸಾಹಿಗಳು ಈ ತಾಣಕ್ಕೆ ಆದ್ಯತೆ ನೀಡುತ್ತಾರೆ. ಈ ಸ್ಪಷ್ಟ ಜಲಾಶಯದಲ್ಲಿ ಬೋಟಿಂಗ್ ಅನುಭವವು ಅದ್ಬುತ ಆನಂದವನ್ನು ನೀಡುತ್ತದೆ.

ಮಂಚನಬೆಲೆ ಅಣೆಕಟ್ಟಿಗೆ ಪ್ರಯಾಣಿಸಲು ಸೂಕ್ತವಾದ ಸಮಯವೆಂದರೆ ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಚಳಿಗಾಲದ ಅವಧಿಯಲ್ಲಿ ಅಣೆಕಟ್ಟು ನೀರಿನಿಂದ ತುಂಬಿರುತ್ತದೆ ಮತ್ತು ಸುತ್ತಮುತ್ತಲಿನ ಹಚ್ಚ ಹಸಿರಿನಿಂದಾಗಿ ಈ ಸ್ಥಳ ಅದ್ಭುತವಾಗಿರುತ್ತದೆ.
-
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು












Click it and Unblock the Notifications