ದೇವರ ಪ್ರತಿರೂಪವಾದ ಸಮಸ್ತ ವೈದ್ಯರಿಗೆ ನಮ್ಮ ಸಲಾಂ
ತಾಯಿ ಜನ್ಮ ಕೊಟ್ಟರೆ, ವೈದ್ಯರು ಪುನರ್ಜನ್ಮ ನೀಡುತ್ತಾರೆ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕನ್ನು ಎದುರಿಸುತ್ತಿರುವವರು ನಮ್ಮ ವೈದ್ಯರು, ವೈದ್ಯೋ ನಾರಾಯಣ ಹರಿ ಎಂದು ನಾವು ಸುಮ್ನೆ ಹೇಳುವುದಿಲ್ಲ ದೇವರ ಪ್ರತಿರೂಪ ನಮ್ಮ ವೈದ್ಯರು, ದೇವರು ಕೊಡುವ ಪ್ರಾಣವನ್ನು ಹಾರಿ ಹೋಗದಂತೆ ಉಳಿಸಿ ನೂತನ ಜೀವನಕ್ಕೆ ದಾರಿ ಮಾಡಿ ಕೊಡುವವರು ವೈದ್ಯರು.
ಮುಖ್ಯವಾಗಿ ಈ ಕೋವಿಡ್ 19 ಸಂದರ್ಭದಲ್ಲಿ ತಮ್ಮ ಮನೆಯವರನ್ನು ಬಿಟ್ಟು, ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ಕಾಯಕದಲ್ಲಿ ತೊಡಗಿರುವ ವೈದ್ಯರು, ಇವರು ಖಂಡಿತವಾಗಿಯೂ ದೇವರ ಸಮಾನ.
ಸಮಯವನ್ನು ಲೆಕ್ಕಿಸದೆ ಹಗಲಾಗಲಿ, ರಾತ್ರಿಯಾಗಲಿ ಎನ್ನದೆ ನಿಸ್ವಾರ್ಥದಿಂದ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಇವರು ಜೀವ ರಕ್ಷಕರು, ಧನ ದಾಹ ವಿಲ್ಲದ ವೃತ್ತಿ ಧರ್ಮವನ್ನು ನಿಭಾಯಿಸುವ ವೈದ್ಯರು ನಮಗೆ ಹೆಚ್ಚು ಹೆಚ್ಚಾಗಿ ಬೇಕು,.
Recommended Video
ಆರೋಗ್ಯ ಕಾಪಾಡುವ ದೇವರು ಎನ್ನುವ ಪದಗಳಿಗೆ ಹೀಗಿನ ತುರ್ತು ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ಸೋಂಕು ಕೋವಿಡ್-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅಕ್ಷರಶಃ ನಿಜ ಮಾಡಿ ತೋರಿಸುತ್ತಿರುವ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಆ ದೇವರು ಇನ್ನು ಶಕ್ತಿ ಮತ್ತು ಆರೋಗ್ಯ, ಆತ್ಮಸ್ಥೈರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸೋಣ. ನಮ್ಮ ಪ್ರಾರ್ಥನೆಯ ಮೂಲಕ ವೈದ್ಯರ ಋಣವನ್ನು ಸ್ವಲ್ಪವಾದರೂ ತೀರಿಸೋಣ,
ತಮ್ಮ ಇಡೀ ಜೀವನವನ್ನು ಜನರಿಗಾಗಿ ಶ್ರಮಿಸುವ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು ಹಾಗೂ ನಮ್ಮೆಲ್ಲರಿಂದ ಸಲಾಂ!