ತಿರುಮಲದ ಕರ್ನಾಟಕ ಭವನ, ಗೋವಿಂದಾ ಕಾಪಾಡು!
ತಿರುಮಲದಲ್ಲಿರುವ ಕರ್ನಾಟಕ ಭವನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವುದು ಎಲ್ಲ ಕನ್ನಡಿಗರಿಗೆ ಗೊತ್ತಿರುವ ವಿಷಯವೇ. ಹೀಗಾಗಿ ಗದ್ದಲಗಳ ಸಮಯದಲ್ಲಿ ನಮ್ಮ ಕನ್ನಡಿಗರು, ಕರ್ನಾಟಕ ಭವನದಲ್ಲಿ ಜಾಗ ಸಿಗದೇ ರಸ್ತೆ ಪಕ್ಕಾನೋ ಅಲ್ಲೋ ಇಲ್ಲೋ ಕುಟುಂಬ ಸಮೇತ ಮಲಗಿ, ಕನಿಷ್ಟ ತಿಮ್ಮಪ್ಪನ ದರ್ಶನವಾದರೂ ಸರಾಗವಾಗಿ ಆಯಿತಲ್ಲ ಎಂದು ನಿಟ್ಟುಸಿರು ಬಿಟ್ಟು ಊರಿಗೆ ಬರುತ್ತಾರೆ.
ಕರ್ನಾಟಕ ಭವನವಂತೂ ಕೆಲವೇ ಕೆಲವು ಜನರಿಗ ಮಾತ್ರ ಎಂಬಂತಾಗಿದೆ. ಕೇವಲ ತೆಲುಗು ಮಾತನಾಡಿದರೆ ಮಾತ್ರ ಅಲ್ಲಿ ರೂಮುಗಳು ಲಭ್ಯ ಎನ್ನುವ ಸ್ಥಿತಿ ಅಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಭಾಗದ ಜನರಂತೂ ಸಹಜವಾಗಿ ತೆಲುಗು ಮಾತನಾಡುತ್ತಾರೆ. ಹೀಗಾಗಿ, ಅವರಿಗೆ ಕಚೇರಿ ಸಿಬ್ಬಂದಿಯೊಂದಿಗೆ ಸಂವಹನ ಅವರ ಭಾಷೆಯಲ್ಲಿಯೇ ಆಗುವುದರಿಂದ ಅವರಿಗೆ ಸುಲಭವಾಗಿ ರೂಮು ಸಿಗುತ್ತದೆ.
ಇನ್ನು ಉತ್ತರ ಕರ್ನಾಟಕ ಭಾಷೆ ಮಾತನಾಡುವ ಭಕ್ತರನ್ನು ಕರ್ನಾಟಕ ಭವನದ ಸಿಬ್ಬಂದಿ ಪರಕೀಯರಂತೆ ನೋಡುತ್ತಾರೆ. ರೂಮು ಕೊಡುವುದಿರಲಿ ಕನಿಷ್ಟ ಬ್ಯಾಗ್ ಇಟ್ಟುಕೊಳ್ಳಲು ಕೂಡ ವ್ಯವಸ್ಥೆ ಮಾಡುವುದಿಲ್ಲ. ಅಲ್ಲಿಯೇ ಇರುವ ಒಂದು ರೂಮನ್ನು ಬ್ಯಾಗ್ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಬ್ಯಾಗ್ ಇಟ್ಟುಕೊಳ್ಳುವವರು ಹೇಳಿದ್ದೇ ರೇಟ್ ಅಲ್ಲಿ. ಬೆಲೆಬಾಳುವ ವಸ್ತುಗಳನ್ನು ತಂದವರಂತೂ ಯಾಕಾದರೂ ಕರ್ನಾಟಕ ಭವನಕ್ಕೆ ಬಂದೆನಪ್ಪಾ ಎಂದು ಕರ್ನಾಟಕ ಸರಕಾರಕ್ಕೆ ಶಾಪ ಹಾಕುತ್ತಾರೆ.

ಇನ್ನು ಕರ್ನಾಟಕ ಭವನದಲ್ಲಿ ಮಾಜಿ ಸಚಿವರೊಬ್ಬರು ದಿನನಿತ್ಯ ಅನ್ನದಾಸೋಹ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಒಂದು ಮಜವಾದ ವಿಷಯವೆಂದರೆ ಅವರು ತಮ್ಮ ಪತ್ರವನ್ನು ಸಾಕಷ್ಟು ಜನರಿಗೆ ನೀಡಿ ಭಕ್ತ ಸಮೂಹ ಕಳಿಸುವುದರಿಂದ ಕರ್ನಾಟಕ ಭವನದಲ್ಲಿ ಆ ಮಾಜಿ ಸಚಿವರ ಜನರೇ ತುಂಬಿ ತುಳುಕುತ್ತಿರುತ್ತಾರೆ. ಕರ್ನಾಟಕವೆಂದರೆ ಅವರೊಬ್ಬರೇ ಎಂಬಂತಾಗಿದೆ ಅಲ್ಲಿ. ಆ ಗೋವಿಂದನೇ ಕರ್ನಾಟಕ ಭವನಕ್ಕೆ ಹೋಗುವ ಭಕ್ತರನ್ನು ಕಾಪಾಡಬೇಕು.
ಇಷ್ಟಕ್ಕೂ, ಇದೇನೂ ನಮ್ಮ ಕರ್ನಾಟಕದ ಅಧಿಕಾರಿಗಳಿಗೆ, ಸಚಿವರಿಗೆ ಗೊತ್ತಿಲ್ಲ ಎಂದೇನಿಲ್ಲ. ಅವರಿಗೂ ಗೊತ್ತಿದೆ. ಎಲ್ಲಾ ತಿಮ್ಮಪ್ಪನ ಆಟ ಎಂದು ಸುಮ್ಮನಿದ್ದಾರೆ. ಕರ್ನಾಟಕ ಸರಕಾರದಿಂದ ಸಂಬಳ ಪಡೆಯುತ್ತಿರುವ ಕರ್ನಾಟಕ ಭವನದ ಸಿಬ್ಬಂದಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವುದನ್ನು ನೋಡಿ ನೊಂದ ಕನ್ನಡಿಗರು ಆ ತಿಮ್ಮಪ್ಪನಾದರೂ ಯಾಕೆ ಸುಮ್ಮನಿದ್ದಾನೋ ಗೊತ್ತಾಗುತ್ತಿಲ್ಲ ಎಂದು ಹಿಡಿ ಶಾಪ ಹಾಕುತ್ತಾರೆ.
ಇಷ್ಟಕ್ಕೂ, ತಿರುಮಲಕ್ಕೆ ಹೋಗುವ ಭಕ್ತರು ಒಮ್ಮೆ ಕರ್ನಾಟಕ ಭವನದಲ್ಲಿ ಕಾಲಿಟ್ಟು ಬಂದರೆ ಗೊತ್ತಾಗುತ್ತದೆ. ನಮ್ಮ ಕರ್ನಾಟಕದ ಮರ್ಯಾದೆ ಹೇಗೆ ಹರಾಜುಗುತ್ತದೆ ಅಲ್ಲಿ ಎಂಬುದು.
ಕರ್ನಾಟಕ ಭವನದಲ್ಲಿನ ಸಿಬ್ಬಂದಿಗೆ ಏನಾದರೂ ಕೇಳಲು ಹೋದರೆ ಅಪ್ಪಟ ತೆಲುಗು ಭಾಷೆಯಲ್ಲಿ ಮಾತನಾಡಲಾರಂಭಿಸುತ್ತಾರೆ. ತೆಲುಗು ಬಾರದೇ ಹೆಂಡತಿ ಮಕ್ಕಳೊಂದಿಗೆ ಬಂದ ಭಕ್ತರು ಪೆಚ್ಚು ಮೋರೆ ಹಾಕಿಕೊಂಡು ಹೋಗುವ ದೃಶ್ಯ ಇಲ್ಲಿ ನಿತ್ಯ ಕಾಣಬಹುದು.
ಇದನ್ನು ಕಣ್ಣಾರೆ ನೋಡುವ "ಇದ್ದವರು" ವೆಂಕಟರಮಣ ಗೋವಿಂದಾ ಗೋವಿಂದಾ ಎನ್ನುತ್ತಾ ಕಣ್ಣು ಕಾಣದಂತೆ ಏನೂ "ಇಲ್ಲದವರಂತೆ" ತಮ್ಮ ಪರಮಭಕ್ತಿಯನ್ನು ಪ್ರದರ್ಶಿಸುತ್ತಾರೆ. ಮಾನವೀಯತೆಗೆ ಬೆಲೆ ನೀಡದವರು ವೆಂಕಪ್ಪನ ಗುಡ್ಡದ ಮೇಲೆಯೇ ಇದ್ದಾರೆ ಎಂಬುದು ಮಾತ್ರ ಅಚ್ಚರಿಯ ಸಂಗತಿ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications