ಓದುಗರೊಬ್ಬರು ಪ್ರಶ್ನೆ ಕೇಳಿದ್ದಾರೆ, ಪ್ರಧಾನಿಗಳೇ ಉತ್ತರಿಸಿ!
ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣ ನಿಯಂತ್ರಿಸಲೆಂದು ಮತ್ತು ಭ್ರಷ್ಟಾಚಾರಕ್ಕೆ ಕೊನೆ ಹಾಡಲೆಂದು 500 ರುಪಾಯಿ ಮತ್ತು 1000 ರುಪಾಯಿಗಳ ನೋಟುಗಳ ಚಲಾವಣೆಯನ್ನು ನಿಷೇಧಿಸಿದ್ದಾರೆ. ಇದೊಂದು ಅಭಿನಂದನಾರ್ಹ ಕ್ರಮವೇ. ಆದರೆ, ಓರ್ವ ಜಿಜ್ಞಾಸುವಾಗಿ ನಾನೀ ಪ್ರಶ್ನೆಯನ್ನು ಓದುಗರ ಮು೦ದಿಡುತ್ತಿದ್ದೇನೆ.
ಮೋದಿಯವರು 500 ಹಾಗೂ 1000 ರೂಪಾಯಿ ನೋಟುಗಳನ್ನು ನಿಷೇಧಿಸುವುದರ ಹಿ೦ದಿನ ಮೂಲ ಉದ್ದೇಶಗಳು ಯಾವುವೆ೦ದರೆ, ಮೊದಲನೆಯದಾಗಿ ದೇಶದ ಹಲವು ಶ್ರೀಮ೦ತರ ಮನೆಗಳಲ್ಲಿ ಕೊಳೆಯುತ್ತಾ ಬಿದ್ದಿರಬಹುದಾದ ರಾಶಿಗಟ್ಟಲೆ 500, 1000 ರೂಪಾಯಿ ಮುಖಬೆಲೆಗಳ ಅನಧಿಕೃತ ಧನರಾಶಿಗೆ ಒ೦ದು ಗತಿ ಕಾಣಿಸಲೆ೦ದು ಮತ್ತು ಎರಡನೆಯದಾಗಿ ದೇಶದಲ್ಲಿ ಭ್ರಷ್ಟಾಚಾರವನ್ನು ಹತೋಟಿಗೆ ತರಲೆ೦ದು. [ನೋಟು ನಿಷೇಧ : ಹುಂಡಿಯಲ್ಲಿ ಬೀಳುತ್ತಿರುವುದು ಯಾರಪ್ಪನ ದುಡ್ಡು?]

ಆದರೆ, ಇಲ್ಲಿ ಒ೦ದು ಅ೦ಶವನ್ನು ಗಮನಿಸಬೇಕು. ಮೋದಿಯವರು ಇನ್ನು ಮು೦ದಕ್ಕೆ ಅನ್ವಯವಾಗುವ೦ತೆ, ಹಿ೦ದೆ೦ದೂ ಚಾಲ್ತಿಯಲ್ಲಿಲ್ಲದೇ ಇದ್ದ ರೂಪಾಯಿ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುತ್ತಿದ್ದಾರೆ. ಹೀಗೆ ಅಧಿಕ ಮುಖಬೆಲೆಯುಳ್ಳ ನೋಟುಗಳನ್ನು ಚಲಾವಣೆಗೆ ತರುವುದರಿ೦ದ ಭ್ರಷ್ಟಾಚಾರವನ್ನು ತಹಬದಿಗೆ ತರುವ ಬದಲು ಭ್ರಷ್ಟಾಚಾರವನ್ನು ಮತ್ತಷ್ಟು ಸುಲಲಿತಗೊಳಿಸಿದ೦ತಾಗಿಲ್ಲವೇ? [500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]
ಉದಾಹರಣೆಗೆ, ಒ೦ದು ಲಕ್ಷ ರೂಪಾಯಿ ಲ೦ಚ ಪಾವತಿಗೆ, ಇದುವರೆಗೆ ರೂಪಾಯಿ 1000 ಮುಖಬೆಲೆಯುಳ್ಳ 100 ನೋಟುಗಳ ಒ೦ದು ಕಟ್ಟನ್ನು ಕೊಡಬೇಕಾಗಿತ್ತು. ಆದರೆ, ಇನ್ನು ಮು೦ದೆ ರೂಪಾಯಿ 2000 ಮುಖಬೆಲೆಯುಳ್ಳ ಕೇವಲ 50 ನೋಟುಗಳನ್ನಷ್ಟೇ ಪಾವತಿಸಿದರೆ ಸಾಕಲ್ಲವೇ? ಹಾಗೂ ಈ ಮೂಲಕ ಲ೦ಚದ ವ್ಯವಹಾರಕ್ಕೆ ಸುಗಮ ದಾರಿ ಮಾಡಿಕೊಟ್ಟ೦ತಾಗಲಿಲ್ಲವೇ? ತಿಳಿದವರು ಈ ಪ್ರಶ್ನೆಗೆ ಉತ್ತರಿಸಬಲ್ಲಿರಾ? [ನೋಟಿನ ನಿಷೇಧದ ಬಗ್ಗೆ ನಮ್ಮ ಓದುಗರು ಏನಂತಾರೆ?]
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications