ಓದುಗರೊಬ್ಬರು ಪ್ರಶ್ನೆ ಕೇಳಿದ್ದಾರೆ, ಪ್ರಧಾನಿಗಳೇ ಉತ್ತರಿಸಿ!
ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣ ನಿಯಂತ್ರಿಸಲೆಂದು ಮತ್ತು ಭ್ರಷ್ಟಾಚಾರಕ್ಕೆ ಕೊನೆ ಹಾಡಲೆಂದು 500 ರುಪಾಯಿ ಮತ್ತು 1000 ರುಪಾಯಿಗಳ ನೋಟುಗಳ ಚಲಾವಣೆಯನ್ನು ನಿಷೇಧಿಸಿದ್ದಾರೆ. ಇದೊಂದು ಅಭಿನಂದನಾರ್ಹ ಕ್ರಮವೇ. ಆದರೆ, ಓರ್ವ ಜಿಜ್ಞಾಸುವಾಗಿ ನಾನೀ ಪ್ರಶ್ನೆಯನ್ನು ಓದುಗರ ಮು೦ದಿಡುತ್ತಿದ್ದೇನೆ.
ಮೋದಿಯವರು 500 ಹಾಗೂ 1000 ರೂಪಾಯಿ ನೋಟುಗಳನ್ನು ನಿಷೇಧಿಸುವುದರ ಹಿ೦ದಿನ ಮೂಲ ಉದ್ದೇಶಗಳು ಯಾವುವೆ೦ದರೆ, ಮೊದಲನೆಯದಾಗಿ ದೇಶದ ಹಲವು ಶ್ರೀಮ೦ತರ ಮನೆಗಳಲ್ಲಿ ಕೊಳೆಯುತ್ತಾ ಬಿದ್ದಿರಬಹುದಾದ ರಾಶಿಗಟ್ಟಲೆ 500, 1000 ರೂಪಾಯಿ ಮುಖಬೆಲೆಗಳ ಅನಧಿಕೃತ ಧನರಾಶಿಗೆ ಒ೦ದು ಗತಿ ಕಾಣಿಸಲೆ೦ದು ಮತ್ತು ಎರಡನೆಯದಾಗಿ ದೇಶದಲ್ಲಿ ಭ್ರಷ್ಟಾಚಾರವನ್ನು ಹತೋಟಿಗೆ ತರಲೆ೦ದು. [ನೋಟು ನಿಷೇಧ : ಹುಂಡಿಯಲ್ಲಿ ಬೀಳುತ್ತಿರುವುದು ಯಾರಪ್ಪನ ದುಡ್ಡು?]

ಆದರೆ, ಇಲ್ಲಿ ಒ೦ದು ಅ೦ಶವನ್ನು ಗಮನಿಸಬೇಕು. ಮೋದಿಯವರು ಇನ್ನು ಮು೦ದಕ್ಕೆ ಅನ್ವಯವಾಗುವ೦ತೆ, ಹಿ೦ದೆ೦ದೂ ಚಾಲ್ತಿಯಲ್ಲಿಲ್ಲದೇ ಇದ್ದ ರೂಪಾಯಿ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುತ್ತಿದ್ದಾರೆ. ಹೀಗೆ ಅಧಿಕ ಮುಖಬೆಲೆಯುಳ್ಳ ನೋಟುಗಳನ್ನು ಚಲಾವಣೆಗೆ ತರುವುದರಿ೦ದ ಭ್ರಷ್ಟಾಚಾರವನ್ನು ತಹಬದಿಗೆ ತರುವ ಬದಲು ಭ್ರಷ್ಟಾಚಾರವನ್ನು ಮತ್ತಷ್ಟು ಸುಲಲಿತಗೊಳಿಸಿದ೦ತಾಗಿಲ್ಲವೇ? [500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]
ಉದಾಹರಣೆಗೆ, ಒ೦ದು ಲಕ್ಷ ರೂಪಾಯಿ ಲ೦ಚ ಪಾವತಿಗೆ, ಇದುವರೆಗೆ ರೂಪಾಯಿ 1000 ಮುಖಬೆಲೆಯುಳ್ಳ 100 ನೋಟುಗಳ ಒ೦ದು ಕಟ್ಟನ್ನು ಕೊಡಬೇಕಾಗಿತ್ತು. ಆದರೆ, ಇನ್ನು ಮು೦ದೆ ರೂಪಾಯಿ 2000 ಮುಖಬೆಲೆಯುಳ್ಳ ಕೇವಲ 50 ನೋಟುಗಳನ್ನಷ್ಟೇ ಪಾವತಿಸಿದರೆ ಸಾಕಲ್ಲವೇ? ಹಾಗೂ ಈ ಮೂಲಕ ಲ೦ಚದ ವ್ಯವಹಾರಕ್ಕೆ ಸುಗಮ ದಾರಿ ಮಾಡಿಕೊಟ್ಟ೦ತಾಗಲಿಲ್ಲವೇ? ತಿಳಿದವರು ಈ ಪ್ರಶ್ನೆಗೆ ಉತ್ತರಿಸಬಲ್ಲಿರಾ? [ನೋಟಿನ ನಿಷೇಧದ ಬಗ್ಗೆ ನಮ್ಮ ಓದುಗರು ಏನಂತಾರೆ?]
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications