ಮನಸೋ ಇಚ್ಛೆ ಓಡಾಡೋರಿಗೆ ಮನೆಯಲ್ಲಿರುವವರ ಸ್ಥಿತಿ ಯಾಕೆ ಅರ್ಥವಾಗಲ್ಲ?
ಇಡೀ ಭಾರತ ಇಪ್ಪತ್ತೊಂದು ದಿನ ಲಾಕ್ ಡೌನ್. ನನಗೆ ತಿಳಿದಂತೆ ಇಷ್ಟು ದೀರ್ಘ ಕಾಲದ ಲಾಕ್ ಡೌನ್ ಕಂಡಿರಲಿಲ್ಲ, ಕೇಳಿರಲಿಲ್ಲ. ಎಪ್ಪತ್ತೈದು ವರ್ಷ ದಾಟಿದೆ ನನಗೆ. ಹೆಂಡತಿ, ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು... ಎಲ್ಲ ಇರುವ ತುಂಬು ಕುಟುಂಬ ನಮ್ಮದು. ಯಾವಾಗ ಪ್ರಧಾನಿಗಳು, ಯಾರೂ ಮನೆ ಬಿಟ್ಟು ಕೂಡ ಬರಬಾರದು ಎಂಬ ಆದೇಶ ಕೊಟ್ಟರೋ ಆಗಿನಿಂದ ನಾವ್ಯಾರೂ ಮನೆಯ ಕಾಂಪೌಂಡ್ ಕೂಡ ದಾಟಿಲ್ಲ.
ಮೊಮ್ಮಗಳು ಇನ್ನೂ ಬಹಳ ಸಣ್ಣವಳು. ದಿನವೂ ನಾನೇ ಅವಳನ್ನು ಹೊರಗೆ ವಾಕಿಂಗ್ ಕರೆದುಕೊಂಡು ಹೋಗ್ತಿದ್ದೆ. ಈಗಲೂ ಅವಳದು ಒಂದೇ ಹಠ. ನನ್ನ ಮಕ್ಕಳು, ಗಾಡಿಯಲ್ಲಾದರೂ ಬನ್ನಿ, ಹೊರಗೆ ಹೋಗಿ ಬಂದುಬಿಡೋಣ ಅಂತಾರೆ. ಆದರೆ ನಾನು ಅದಕ್ಕೆ ಸುತಾರಾಂ ಒಪ್ಪಲ್ಲ.
ಈಗ ನನ್ನ ಬಗ್ಗೆ ಹೇಳಿಕೊಂಡಿದ್ದಾಯಿತು. ಆದರೆ ಮನೆ ಎದುರು ಸ್ಕೂಟರ್, ಬೈಕ್, ಕಾರುಗಳು ಓಡಾಡುತ್ತಲೇ ಇವೆ. ಕೆಲವರಂತೂ ಜೋರಾಗಿ ಹಾರ್ನ್ ಮಾಡುತ್ತಾ, ಕೂಗಾಡುತ್ತಾ ಹೋಗುತ್ತಾರೆ. ಕೆಲವರಿಗೆ ಮನೆಗೆ ಏನಾದರೂ ತೆಗೆದುಕೊಂಡು ಬರುವ ಅನಿವಾರ್ಯ ಇರಬಹುದು. ಆದರೆ ಬಹುತೇಕರನ್ನು ನೋಡಿದರೆ ಹಾಗೆ ಅನಿಸಲ್ಲ.

ವಯಸ್ಸಾದವನು, ಬರೀ ದೂರುಗಳನ್ನೇ ಹೇಳ್ತಾನೆ ಅಂದುಕೊಳ್ಳಬೇಡಿ. ಈಗಿನ ಪರಿಸ್ಥಿತಿಯ ತೀವ್ರತೆ ತಿಳಿದುಕೊಂಡು ತಾನೇ ಇಪ್ಪತ್ತೊಂದು ದಿನ ಲಾಕ್ ಡೌನ್ ಮಾಡಿರೋದು. ಹಾಗಿಲ್ಲದಿದ್ದಲ್ಲಿ ಆರಾಮಾಗಿ ಓಡಾಡಿಕೊಂಡು ಇರೋದಕ್ಕೆ ಬಿಡಬಹುದಿತ್ತು. ಈ ಗಾಡಿಗಳಲ್ಲಿ ಆರಾಮವಾಗಿ ಓಡಾಡುವವರಿಗೆ ಪೆಟ್ರೋಲ್ ಬಂಕ್ ತೆಗೆದಿದೆ ಅನ್ನೋದು ತಾನೇ ಧೈರ್ಯ?
ಪೆಟ್ರೋಲ್ ಬಂಕ್ ತೆಗೆಯುವುದಕ್ಕೆ ಆಕ್ಷೇಪ ಇಲ್ಲ. ಆದರೆ ಅದಕ್ಕೆ ಸಮಯ ನಿಗದಿ ಆಗಬೇಕು. ಪೆಟ್ರೋಲ್ ಭರ್ತಿ ಮಾಡುವ ಮುನ್ನ ಅವರ ಕಾಂಟ್ಯಾಕ್ಟ್ ನಂಬರ್, ವಾಹನದ ನೋಂದಣಿ ಸಂಖ್ಯೆ ತೆಗೆದುಕೊಳ್ಳಬೇಕು. ಒಂದು ವೇಳೆ ಮನಸೋ ಇಚ್ಛೆ ಓಡಾಡಿದರೆ ಇಂಥವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಒತ್ತಾಯ.
ಎಲ್ಲೋ ಬೆಂಗಳೂರಿನ ಒಂದು ಮೂಲೆಯಲ್ಲಿ ಕೂತ ವಯಸ್ಸಾದ ವ್ಯಕ್ತಿಯ ಮಾತು ಯಾರು ಕೇಳ್ತಾರೆ ಅಂತಲೇ ಮೊದಲಿಗೆ ಅಂದುಕೊಂಡೆ. ಆದರೆ ಯಾವಾಗೆಲ್ಲ ವಾಹನದ ಶಬ್ದ ಕೇಳುತ್ತೋ ಆಗೆಲ್ಲ ನನ್ನ ಮೊಮ್ಮಗಳ ಅಮಾಯಕ ಮುಖ ಕಣ್ಣೆದುರು ಬರುತ್ತದೆ. ಜತೆಗೆ ನನ್ನ ಕೈಲಾಗದತನ ಕೂಡ ನೆನಪಾಗುತ್ತದೆ.
ನಾನೇನೋ ಹೀಗೆ ಮಾಡಿ, ಹಾಗೆ ಮಾಡಿ ಎಂದು ಯಾವುದೋ ಭಾವುಕತೆಯಿಂದ ಹೇಳಿಬಿಟ್ಟೆ. ಉಹುಂ, ಬೇಡ. ಸಂಬಂಧಪಟ್ಟವರು ಚೆನ್ನಾಗಿ ಆಲೋಚಿಸಿಯೇ ನಿರ್ಧಾರ ಮಾಡಲಿ. ಮನೆಯೊಳಗೆ ಹಲ್ಲು ಕಚ್ಚಿಕೊಂಡು ಕೂತವರ ಪರಿಸ್ಥಿತಿಯನ್ನು ರಸ್ತೆಯಲ್ಲಿ ಮನಸೋ ಇಚ್ಛೆ ಓಡಾಡುವವರು ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ, ಯಾವ ಲಾಕ್ ಡೌನ್ ಏನು ಮಾಡುತ್ತೆ?
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications