ನಿಮ್ಮ ಬರವಣಿಗೆಗೆ ಸ್ಫೂರ್ತಿ ಯಾರು? ಜೋಗಿ ಕೇಳ್ತಿದ್ದಾರೆ

ಸಾಹಿತ್ಯ, ಕಲೆ, ಸೃಜನಶೀಲತೆಯ ಆರಂಭಿಕ ನೆಲೆಗಳ ಕುರಿತು ತರುಣ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕಿರುಹೊತ್ತಿಗೆಯೊಂದನ್ನು ಹೊರತರುವ ಆಲೋಚನೆ ನನ್ನದು. ಹಲವಾರು ಶಾಲೆ ಮತ್ತು ಕಾಲೇಜುಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ, ಅವರಲ್ಲಿ ಸಾಹಿತ್ಯ ರಚನೆಯ, ಓದುವ ಕುರಿತು ಅಪಾರ ಆಸಕ್ತಿ ಇರುವುದು ಗೋಚರವಾಯಿತು.
ಆದರೆ ಎಲ್ಲರಲ್ಲೂ ಕೆಲವೊಂದು ಗೊಂದಲಗಳಿವೆ. ಹೇಗೆ ಬರೆಯಬೇಕು, ಬರವಣಿಗೆಗೆ ಪ್ರೇರಣೆ ಏನು, ಯಾವುದನ್ನು ಓದಬೇಕು, ಎಲ್ಲಿಂದ ಆರಂಭಿಸಬೇಕು, ಪರಂಪರೆಯ ಲೇಖಕರು ಮುಖ್ಯವಾ, ಸಮಕಾಲೀನ ಲೇಖಕರನ್ನೇ ಓದಬೇಕಾ, ಎಷ್ಟು ಓದಬೇಕು, ಪದ್ಯವನ್ನು ಓದುವುದು ಹೇಗೆ, ಸಣ್ಣಕತೆಗೂ ಕಿರುಕತೆಗೂ ನೀಳ್ಗತೆಗೂ ಕಾದಂಬರಿಗೂ ಏನು ವ್ಯತ್ಯಾಸ- ಇವೇ ಮುಂತಾದ ಪ್ರಶ್ನೆಗಳನ್ನು ಅವರು ಕೇಳುತ್ತಲೇ ಇರುತ್ತಾರೆ. ಅವರ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ನೆರವಾದೀತೇನೋ ಎಂಬ ನಂಬಿಕೆಯೊಂದಿಗೆ ಅಂಥದ್ದೊಂದು ಕೃತಿಯ ರಚನೆಗೆ ಕೈ ಹಾಕಿದ್ದೇನೆ.
ಇದಕ್ಕೆ ತಮ್ಮ ಸಹಕಾರ ಬೇಕು. ಅನೇಕರು ನಮ್ಮ ಹಿರಿಯ ಲೇಖಕರು ಯಾವಾಗ ಬರೆಯಲು ಆರಂಭಿಸಿದರು, ಅವರಿಗೆ ಸ್ಪೂರ್ತಿ ಆದದ್ದೇನು, ಅವರನ್ನು ಪ್ರೋತ್ಸಾಹಿಸಿದವರು ಯಾರು, ಮೊದಲು ಬರೆಯಲು ಶುರುಮಾಡಿದಾಗ ಅವರ ಆತ್ಮವಿಶ್ವಾಸ ಹೇಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ತೀವ್ರ ಕುತೂಹಲ ಹೊಂದಿದ್ದಾರೆ. ನನ್ನ ಕೃತಿಯ ಎರಡನೆಯ ಭಾಗದಲ್ಲಿ ಕನ್ನಡದ ಪ್ರಮುಖ ಲೇಖಕರು ತಮ್ಮದೇ ಮಾತಿನಲ್ಲಿ ತಮ್ಮ ಆರಂಭದ ದಿನಗಳ ಬರವಣಿಗೆಯ ಬಗ್ಗೆ ಹೇಳಿದ ಮಾತುಗಳು ಇರುತ್ತವೆ.
ನೀವು ನಿಮ್ಮ ಬರವಣಿಗೆಯ ಪ್ರೇರಣೆ, ಸ್ಪೂರ್ತಿ, ನೀವು ಬರೆಯಲು ಆರಂಭಿಸಿದ ಕ್ಷಣದ ಖುಷಿ, ತಲ್ಲಣ, ಎದುರಿಸಿದ ಸವಾಲುಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದುಕೊಡಲು ಸಾಧ್ಯವೇ? ಅದು ನನ್ನ ಪುಸ್ತಕದ ಎರಡನೆಯ ಹಾಗೂ ಬಹುಮುಖ್ಯವಾದ ಭಾಗವಾಗಿ ಬರುತ್ತದೆ. ಇದು ತರುಣ ಮತ್ತು ಉದಯೋನ್ಮುಖ ಲೇಖಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ ಎಂಬುದು ನನ್ನ ಅನಿಸಿಕೆ.
ಪದಗಳ ಮಿತಿಯಿಲ್ಲ. ನಿಮ್ಮ ಅನುಭವವನ್ನು ದಯವಿಟ್ಟು ಬರೆದು ಕಳುಹಿಸಿದರೆ ಅನುಕೂಲ ಮತ್ತು ಸಂತೋಷ. ಪುಸ್ತಕ ಸೆಪ್ಟೆಂಬರ್ 16ರಂದು ಬಿಡುಗಡೆ ಆಗುತ್ತದೆ. ಅಂಕಿತ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ದಯವಿಟ್ಟು ಆಗಸ್ಟ್ 31ರ ಒಳಗೆ ತಲುಪುವಂತೆ ಕಳುಹಿಸಿಕೊಡಲು ಸಾಧ್ಯವೇ?
ಬರೆಯುವ ಒತ್ತಡ ಇದ್ದರೆ ದಯವಿಟ್ಟು ತಿಳಿಸಿ. ನೀವು ಮಾತಾಡಿದರೂ ಸಾಕು. ನಾನೇ ಬಂದು ಅದನ್ನು ಬರೆದುಕೊಳ್ಳುತ್ತೇನೆ. ಪ್ರೀತಿಯಿಟ್ಟು ಒಪ್ಪಿಕೊಳ್ಳಬೇಕಾಗಿ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ.
ವಿಶ್ವಾಸದಿಂದ,
ಜೋಗಿ [ಈಮೇಲ್ : [email protected]]
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications