ನಿಮ್ಮ ಬರವಣಿಗೆಗೆ ಸ್ಫೂರ್ತಿ ಯಾರು? ಜೋಗಿ ಕೇಳ್ತಿದ್ದಾರೆ

ಸಾಹಿತ್ಯ, ಕಲೆ, ಸೃಜನಶೀಲತೆಯ ಆರಂಭಿಕ ನೆಲೆಗಳ ಕುರಿತು ತರುಣ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕಿರುಹೊತ್ತಿಗೆಯೊಂದನ್ನು ಹೊರತರುವ ಆಲೋಚನೆ ನನ್ನದು. ಹಲವಾರು ಶಾಲೆ ಮತ್ತು ಕಾಲೇಜುಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ, ಅವರಲ್ಲಿ ಸಾಹಿತ್ಯ ರಚನೆಯ, ಓದುವ ಕುರಿತು ಅಪಾರ ಆಸಕ್ತಿ ಇರುವುದು ಗೋಚರವಾಯಿತು.
ಆದರೆ ಎಲ್ಲರಲ್ಲೂ ಕೆಲವೊಂದು ಗೊಂದಲಗಳಿವೆ. ಹೇಗೆ ಬರೆಯಬೇಕು, ಬರವಣಿಗೆಗೆ ಪ್ರೇರಣೆ ಏನು, ಯಾವುದನ್ನು ಓದಬೇಕು, ಎಲ್ಲಿಂದ ಆರಂಭಿಸಬೇಕು, ಪರಂಪರೆಯ ಲೇಖಕರು ಮುಖ್ಯವಾ, ಸಮಕಾಲೀನ ಲೇಖಕರನ್ನೇ ಓದಬೇಕಾ, ಎಷ್ಟು ಓದಬೇಕು, ಪದ್ಯವನ್ನು ಓದುವುದು ಹೇಗೆ, ಸಣ್ಣಕತೆಗೂ ಕಿರುಕತೆಗೂ ನೀಳ್ಗತೆಗೂ ಕಾದಂಬರಿಗೂ ಏನು ವ್ಯತ್ಯಾಸ- ಇವೇ ಮುಂತಾದ ಪ್ರಶ್ನೆಗಳನ್ನು ಅವರು ಕೇಳುತ್ತಲೇ ಇರುತ್ತಾರೆ. ಅವರ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ನೆರವಾದೀತೇನೋ ಎಂಬ ನಂಬಿಕೆಯೊಂದಿಗೆ ಅಂಥದ್ದೊಂದು ಕೃತಿಯ ರಚನೆಗೆ ಕೈ ಹಾಕಿದ್ದೇನೆ.
ಇದಕ್ಕೆ ತಮ್ಮ ಸಹಕಾರ ಬೇಕು. ಅನೇಕರು ನಮ್ಮ ಹಿರಿಯ ಲೇಖಕರು ಯಾವಾಗ ಬರೆಯಲು ಆರಂಭಿಸಿದರು, ಅವರಿಗೆ ಸ್ಪೂರ್ತಿ ಆದದ್ದೇನು, ಅವರನ್ನು ಪ್ರೋತ್ಸಾಹಿಸಿದವರು ಯಾರು, ಮೊದಲು ಬರೆಯಲು ಶುರುಮಾಡಿದಾಗ ಅವರ ಆತ್ಮವಿಶ್ವಾಸ ಹೇಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ತೀವ್ರ ಕುತೂಹಲ ಹೊಂದಿದ್ದಾರೆ. ನನ್ನ ಕೃತಿಯ ಎರಡನೆಯ ಭಾಗದಲ್ಲಿ ಕನ್ನಡದ ಪ್ರಮುಖ ಲೇಖಕರು ತಮ್ಮದೇ ಮಾತಿನಲ್ಲಿ ತಮ್ಮ ಆರಂಭದ ದಿನಗಳ ಬರವಣಿಗೆಯ ಬಗ್ಗೆ ಹೇಳಿದ ಮಾತುಗಳು ಇರುತ್ತವೆ.
ನೀವು ನಿಮ್ಮ ಬರವಣಿಗೆಯ ಪ್ರೇರಣೆ, ಸ್ಪೂರ್ತಿ, ನೀವು ಬರೆಯಲು ಆರಂಭಿಸಿದ ಕ್ಷಣದ ಖುಷಿ, ತಲ್ಲಣ, ಎದುರಿಸಿದ ಸವಾಲುಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದುಕೊಡಲು ಸಾಧ್ಯವೇ? ಅದು ನನ್ನ ಪುಸ್ತಕದ ಎರಡನೆಯ ಹಾಗೂ ಬಹುಮುಖ್ಯವಾದ ಭಾಗವಾಗಿ ಬರುತ್ತದೆ. ಇದು ತರುಣ ಮತ್ತು ಉದಯೋನ್ಮುಖ ಲೇಖಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ ಎಂಬುದು ನನ್ನ ಅನಿಸಿಕೆ.
ಪದಗಳ ಮಿತಿಯಿಲ್ಲ. ನಿಮ್ಮ ಅನುಭವವನ್ನು ದಯವಿಟ್ಟು ಬರೆದು ಕಳುಹಿಸಿದರೆ ಅನುಕೂಲ ಮತ್ತು ಸಂತೋಷ. ಪುಸ್ತಕ ಸೆಪ್ಟೆಂಬರ್ 16ರಂದು ಬಿಡುಗಡೆ ಆಗುತ್ತದೆ. ಅಂಕಿತ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ದಯವಿಟ್ಟು ಆಗಸ್ಟ್ 31ರ ಒಳಗೆ ತಲುಪುವಂತೆ ಕಳುಹಿಸಿಕೊಡಲು ಸಾಧ್ಯವೇ?
ಬರೆಯುವ ಒತ್ತಡ ಇದ್ದರೆ ದಯವಿಟ್ಟು ತಿಳಿಸಿ. ನೀವು ಮಾತಾಡಿದರೂ ಸಾಕು. ನಾನೇ ಬಂದು ಅದನ್ನು ಬರೆದುಕೊಳ್ಳುತ್ತೇನೆ. ಪ್ರೀತಿಯಿಟ್ಟು ಒಪ್ಪಿಕೊಳ್ಳಬೇಕಾಗಿ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ.
ವಿಶ್ವಾಸದಿಂದ,
ಜೋಗಿ [ಈಮೇಲ್ : [email protected]]
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications