ವೆಬ್ಬಿನ ಸರಸ-ಸೌಭಾಗ್ಯ; ವಿರಸ-ವೈರಾಗ್ಯ

ಇಲ್ಲಿನ (ಅಂತರ್ಜಾಲದಲ್ಲಿನ) ವಿಹಾರಿಗಳು ವಿಭಿನ್ನ ರುಚಿಯುಳ್ಳವರು. ವಿಭಿನ್ನ ಹಿನ್ನೆಲೆಯುಳ್ಳವರು. ಕೆಲವರು ಸ್ಪಂದಿಸುವವರು. ಇನ್ನು ಕೆಲವರು ಸಾರಾಂಶವನ್ನು ಗ್ರಹಿಸಲಾಗದೇ ಅವರ ಬುಡವನ್ನು ಅಲ್ಲಾಡಿಸಿದ ಸಾಲುಗಳ ಸಪ್ಪಳಕ್ಕೆ ಮಾತ್ರ ಪ್ರತಿಕ್ರಿಯಿಸುವವರು.
ಕೆಲವರು ಧ್ಯೇಯವಾದದ ಬಲೆಯಲ್ಲಿ ಸಿಕ್ಕ ಪೂರ್ವಗ್ರಹಪೀಡಿತರು. ಇನ್ನು ಕೆಲವರು ಲೇಖಕನ ಬಗೆಗೆ ಅವರಿಗಿರುವ ಅಭಿಪ್ರಾಯದ ಮೇರೆಗೆ ರಾಗಕ್ರೋಧಗಳನ್ನು ಹೊಮ್ಮಿಸುವವರು. ಇನ್ನು ಕೆಲವರಂತೂ ಕುಹಕವಿದ್ಯಾವಿಶಾರದರು! ವಿನಾ ಕಾರಣ ಕಾಲೆಳೆದು ಕೀಳುಮಟ್ಟದ ದಿಢೀರ್ ತೃಪ್ತಿಯಲ್ಲೇ ಮೂಲೋಕ ಕಾಣುವವರು.
ನನ್ನ ಮತದಲ್ಲಿ ಅಂತರ್ಜಾಲವನ್ನು ಅಂಕೆಗೆ ತರುವುದು ಹೀನಾಯ ಸೋಲಿನ ಹಣೆಬರಹವನ್ನು ಪಡೆದುಕೊಂಡೆ ಹುಟ್ಟುವ ಒಂದು ದುರ್ಬಲ ಸಾಹಸದ ಕೆಲಸ.
ಮೂರನೆಯ ಅಂಶವೆಂದರೆ ಅಂತರ್ಜಾಲವು ಉಸಿರಾಡುವ ಗಾಳಿಯಂತೆ ಎನ್ನುವ ಅರ್ಥದಲ್ಲಿ ಯಾರ ಸೊತ್ತೂ ಅಲ್ಲ. ಎಲ್ಲರೂ ಭಾಗವಹಿಸಬಹುದಾದ, ತಮ್ಮ ಅನಿಸಿಕೆಗಳನ್ನು ಅವರವರ ಭಾವಕ್ಕೆ ತಕ್ಕಂತೆ ರಾಗ ರಂಗುಗಳೊಂದಿಗೆ ಹಂಚಿಕೊಳ್ಳಬಹುದಾದ ಒಂದು ಮಿಂಚಿನ ವೇಗದ ಮಾಧ್ಯಮ.
ಇಲ್ಲಿನ ಬೇಹುಗಾರರು ಯಾವ ಪತ್ರಿಕೋದ್ಯಮ ಶಾಲೆಗಳಲ್ಲೂ ತರಬೇತಿ ಪಡೆದ ಮತ್ತು ಅಭಿವ್ಯಕ್ತಿಯಲ್ಲಿ ಪರಿಪಕ್ವತೆಯನ್ನೂ, ಸಮತೋಲನವನ್ನೂ ತೋರುವ, ಲೋಕಾಪವಾದಕ್ಕೆ-ಅಂಜುವ ವಿರೋಧಾಭಾಸಗಳನ್ನ (politically incorrect) ಸಮಯೋಚಿತವಾಗಿ ತುಂಬಬಲ್ಲ ಕುಶಲತೆ ಅಥವಾ ಆತಂಕವಿರುವ ವೃತ್ತಿಪರರಲ್ಲ.
ಅದ್ದರಿಂದ ಅಂತರ್ಜಾಲದ ಸ್ವರೂಪ ಅರಿತವರಿಗೆ ಅಂತರ್ಜಾಲ-ಜನಿತ ಸರಸ-ಸೌಭಾಗ್ಯಗಳೂ ವಿರಸ-ವೈರಾಗ್ಯಗಳೂ ಮುಕ್ತ ಅಭಿವ್ಯಕ್ತಿಯ ಸಮರಸಗಳಂತೆ ಕಾಣುತ್ತವೆ. ಪಾಪಿಗಳ ಪೀಡನೆಯನ್ನು ರಸಾಭಾಸದಂತೆ ಪರಿಗಣಿಸದೇ ಗುಲಾಬಿಗಿಡದ ಮುಳ್ಳುಗಳಂತೆ ನೋಡುವ ಅಭ್ಯಾಸ ಅಂತರ್ಗತವಾಗಿಬಿಡುತ್ತದೆ.
ಒಟ್ಟಾರೆ ಇದು ನನ್ನ ಅನಿಸಿಕೆ! ನಿಮ್ಮ ವಿಶ್ವಾಸಿ, ಮಹಾಬಲ ಶಾಸ್ತ್ರಿ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications