ಸತ್ತ ಹುಡುಗಿಯೇ ದೂರು ಕೊಡಬೇಕೇ, ಪೊಲೀಸರೇ?

ಹಂಪನಕಟ್ಟೆಯಲ್ಲಿ ವಿದ್ಯಾರ್ಥಿ ಸಂಘಟನೆ(ಎಬಿವಿಪಿ)ಗಳು ಕಂಡಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾ ಯಿಸಿ ಪ್ರತಿಭಟನೆಯನ್ನೂ ನಡೆಸಿದವು. ಆದರೆ ಫಲಿ ತಾಂಶ ಮಾತ್ರ ಶೂನ್ಯ. ಘಟನೆ ನಡೆದು ಹತ್ತು ದಿನ ದಾಟಿದರೂ ಕಂಡಕ್ಟರ್ ಮೇಲೆ ಕ್ರಮ ಕೈಗೊಳ್ಳ ಲಾಗಿಲ್ಲ. ಆತ ತನ್ನನ್ನು ಯಾರೂ ಏನೂ ಮಾಡಲಾ ರರು ಎಂದುಕೊಂಡು ಆರಾಮವಾಗಿದ್ದಾನೆ. ಇಲ್ಲಿ ಪೊಲೀಸರು ಕೊಡುವ ಉತ್ತರ ಬೇರೆಯೇ ಆಗಿದೆ. ಮೃತ ವಿದ್ಯಾರ್ಥಿನಿಯ ಹೆತ್ತವರು ಬಂದು ದೂರು ನೀಡಲಿಲ್ಲ, ನೀಡಿದ್ದರೆ ಕ್ರಮ ಜರುಗಿಸುತ್ತಿದ್ದೆವು ಎಂದು. ಹಾಗಾದರೆ ಸಮಾಜದಲ್ಲಿ ಅಶಾಂತಿ, ಕುಕೃತ್ಯ ನಡೆ ಯುತ್ತಲೇ ಇದ್ದರೂ ಇಲಾಖೆ ದೂರು ಬಂದಿಲ್ಲ ಎಂದು ಸುಮ್ಮನಿದ್ದು ಬಿಡುವುದೇ?
ಇಂತಹ ಕ್ರಮ ಆರೋಪಿ ಕಂಡಕ್ಟರ್ ತನ್ನ ಬಸ್ ನಲ್ಲಿ ಸಂಚರಿಸುವ ಮತ್ತಷ್ಟು ಹೆಣ್ಣುಮಕ್ಕಳಿಗೆ ಕಿರು ಕುಳ ಕೊಡಲು ಪ್ರೇರೇಪಣೆ ನೀಡುವುದಿಲ್ಲವೇ? ಪೊಲೀಸರಿಗೆ ಆರೋಪಿ ಮೇಲೆ ಸ್ವಯಂಪ್ರೇರಿತ ಕೇಸು ದಾಖಲು ಮಾಡಲು ಯಾಕೆ ಸಾಧ್ಯವಿಲ್ಲ? ಇನ್ನಾದರೂ ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ.












Click it and Unblock the Notifications