ಲೈಂಗಿಕ ಕ್ರೌರ್ಯಕ್ಕೆ ಕೊನೆ ಎಂದು?

ಡಿ.23 ರಂದು ಬೆಳಗ್ಗೆ ಪಶ್ಚಿಮ ದಿಲ್ಲಿಯಲ್ಲಿ 23ರ ಹರೆಯದ ಬಿಪಿಒ ಉದ್ಯೋಗಸ್ಥ ತರುಣಿ ಒಬ್ಬಳು ಫ್ಲೈ ಓವರ್ ಒಂದರಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಹೃದಯ ಕರಗುವಂತಾಯಿತು. ಆಕೆ ಹೆಸರು ದೀಪ್ತಿ. ದಿಲ್ಲಿಯ ಪಶ್ಚಿಮ ವಿಹಾರದ ನಿವಾಸಿ. ಬೆಳಗ್ಗೆ 7.15ರ ಸುಮಾರಿಗೆ ಸ್ವತಃ ಕಾರನ್ನು ಚಲಾಯಿಸಿಕೊಂಡ ಬಂದ ಆಕೆ ಮೋತಿ ನಗರದ ಮೇಲ್ಸೇತುವೆಯಿಂದ ಕೆಳಕ್ಕೆ ಜಿಗಿದು ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಳು. ಆಕೆ ಏಕಾಂಗಿ ಆತ್ಮಹತ್ಯೆ ಮಾಡಿಕೊಂಡಳೆಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಅಥವಾ ಆ ಕುರಿತ ಸತ್ಯ ಬಹುತೇಕ ಎಂದಿಗೂ ಯಾರಿಗೂ ಗೊತ್ತಾಗದೇ ಉಳಿಯಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆ ತನ್ನ ಅಣ್ಣನಿಗೆ ಕೆಲವೊಂದು ಎಸ್ಎಂಎಸ್ ಕಳುಹಿಸಿ ತನ್ನನ್ನು ಕ್ಷಮಿಸಬೇಕೆಂದು ಕೋರಿದ್ದಳು.
ದೀಪ್ತಿಯಂತಹ ಸಣ್ಣ ವಯಸ್ಸಿನ ಉದ್ಯೋಗಸ್ಥ ಹೆಣ್ಣು ಮಕ್ಕಳು ಇಂದು ಈ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲೆಡೆ ಸಾಮಾನ್ಯವಾಗುತ್ತಿದೆ. ಪ್ರೀತೊ, ಪ್ರಣಯ, ಕಾಮ, ಬಿಂದಾಸ್ ಜೀವನ ಶೈಲಿ, ಪ್ರಿಯಕರನ ಮೇಲೆ ಪೂರ್ಣ ನಂಬಿಕೆ ಇಟ್ಟು ಮೈಮನಸ್ಸನ್ನು ಒಪ್ಪಿಸಿ ಆನಂತರ ಭ್ರಮ ನಿರಸರನಗೊಳ್ಳುವುದು ಮುಂತಾಗಿ ಹತ್ತಾರು ಕಾರಣಗಳೀಗೆ ಇಂದು ಹೆಣ್ಣು ಮಕ್ಕಳಿ ಬಲಿಯಾಗುತ್ತಿದ್ದಾರೆ.
ಇನ್ನೊಂದೆಡೆ ಮಾನಭಂಗ ಮುಂತಾದ ಲೈಂಗಿಕ ಕ್ರೌರ್ಯಕ್ಕೆ ಗುರಿಯಾಗಿ ಸಾವಿಗೆ ಶರಣಾಗುವ ಹೆಣ್ಣುಮಕ್ಕಳ ಸಂಖ್ಯೆಯೂ ಏರುತ್ತಿದೆ. ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಪೊಲೀಸ್ ಎನ್ ಕೌಂಟರ್ ನಲ್ಲಿ ಹತನಾದ ಲಂಪಟ ತರುಣನೊಬ್ಬ ತನ್ನ ಸ್ನೇಹಿತನ ಜತೆಗೂಡಿ ಅದೆಷ್ಟೋ ತರುಣಿಯರ ಮಾನಭಂಗ ಮಾಡಿ ಬಳಿಕ ಅವರನ್ನು ಬೆದರಿಸುತ್ತಿದ್ದುದು ಬಹಿರಂಗವಾಯಿತು.
ತಾನು ಕಿಡ್ನಾಪ್ ಮಾಡಿದ ಹುಡುಗಿಯರನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ರೇಪ್ ಮಾಡುವಾಗ ಆತನ ಸ್ನೇಹಿತ ಅದನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿದ್ದನಂತೆ. ರೇಪ್ ಗೆ ಬಲಿಯಾದ ಹುಡುಗಿಗೆ ಆ ವಿಡಿಯೋ ಚಿತ್ರ ತೋರಿಸಿ "ನೀನೇನಾದರೂ ಪೊಲೀಸರಿಗೆ ದೂರು ಕೊಟ್ಟರೆ ಈ ವಿಡಿಯೋ ಚಿತ್ರಿಕೆಯನ್ನು ಇಂಟರ್ ನೆಟ್ ನಲ್ಲಿ ಹಾಕುತ್ತೇನೆ, ಮೊಬೈಲ್ ಮೂಲಕ ಎಲ್ಲರಿಗೂ ಎಂಎಂಎಸ್ ಕಳಿಸುತ್ತೇನೆ" ಎಂದು ಬೆದರಿಕೆ ಹಾಕಿ ಹುಡುಗಿಯರ ಬಾಯಿ ಮುಚ್ಚಿಸುತ್ತಿದ್ದನಂತೆ.
ಇಂದಿನ ಅನೇಕ ಸಾಮಾಜಿಕ ಪಿಡುಗುಗಳಿಗೆ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದು ದುಃಖಕರ. ಇದಕ್ಕೆ ಸ್ವಲ್ಪಾಂಶ ಹುಡುಗಿಯರೂ ಕಾರಣರಿರಬಹುದು. ಟೆಕ್ಕಿಗಳಾಗಿಯೋ, ಬಿಪಿಒ ಉದ್ಯೋಗಿಗಳಾಗಿಯೋ ಕೈ ತುಂಬ ಸಂಬಳ ಪದೆಯುವ ಅನೇಕ ಹುಡುಗಿಯರು ಟಿವಿ, ಸಿನಿಮಾ ಪ್ರಭಾವದಲ್ಲಿ ಬಿಂದಾಸ್ ಜೀವನ ಶೈಲಿ ನಡೆಸುತ್ತಿರುವುದು ಇದಕ್ಕೆ ಆಸ್ಪದವಾಗಿರಬಹುದು.
ಇದನ್ನೆಲ್ಲ ತಡೆಯಲು ನಮಗೆ ಸಾಧ್ಯವಿಲ್ಲವೇ? ಹುಡುಗಿಯರು ಹೊಣೆಯರಿತು ಜೀವಿಸಲು ಮನಸ್ಸು ಮಾಡಬಾರದೇ? ಧೈರ್ಯದಿಂದ ಶಿಷ್ಟ ರೀತಿಯಲ್ಲಿ ಸಮಾಜವನ್ನು ಎದುರಿಸುವ ಛಾತಿ ಹೊಂದಬೇಡವೇ? [ಲೈಂಗಿಕ ಕಿರುಕುಳ]
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications