ಕಾರವಾರವನ್ನು ಗೋವಾಗೆ ಸೇರಿಸಬೇಕಂತೆ!

ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗು ಈಗಿನ ಲೋಕೋಪಯೋಗಿ ಮಂತ್ರಿಗಳಾದ ಅಲೆಮವೋ ಚರ್ಚಿಲ್ ಮೊನ್ನೆಯ ದಿನ ಕಾರವಾರ ಜಿಲ್ಲೆಯನ್ನು ಮತ್ತು ಜೋಯಿಡಾ ತಾಲೂಕನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕು ಅಂತ ಒತಾಯಿಸಿದ್ದಾರೆ. ಕನ್ನಡಿಗರ ಹಾಗು ಕೊಂಕಣಿ ಭಾಷಿಕರ ನಡುವೆ ವೈಷಮ್ಯ ಬೆಳೆಸುವಂತ ಗೋವಾ ಪ್ರಯತ್ನಗಳಿಗೆ ನಾವು ತೀವ್ರವಾಗಿ ಖಂಡಿಸಬೇಕಿದೆ.
ಕೊಂಕಣಿ ಭಾಷೆ ಕರ್ನಾಟಕದ ರಾಜ್ಯದ ಪ್ರಮುಖ ಭಾಷೆಗಳಲ್ಲಿ ಒಂದು ಎನ್ನುವ ಸಂಗತಿ ಬಹುಶ ಚರ್ಚಿಲ್ ಸಾಹೇಬರಿಗೆ ತಿಳಿದಂತಿಲ್ಲ. ಕನ್ನಡಿಗರಿಗೆ ಸಿಗುವ ಎಲ್ಲ ಸವಲತ್ತುಗಳು ಕೊಂಕಣಿ ಭಾಷಿಕರಿಗೂ ಸಿಗುತ್ತಿರುವುದು ಕರ್ನಾಟಕದ ಸಾಮರಸ್ಯ ವೈಶಿಷ್ಯತೆಯನ್ನು ಸಾರುವಂತದ್ದು.
ಇದೆಲ್ಲದಕ್ಕೂ ಮೇಲಾಗಿ ನೂರಾರು ವರ್ಷಗಳಿಂದ ಕೊಂಕಣಿ ಭಾಷಿಕರು ಕರ್ನಾಟಕದ ಮುಖ್ಯವಾಹಿನಿಯಲ್ಲಿ ಬೆರೆತು ಕರ್ನಾಟಕದ ಶಿಕ್ಷಣ, ಕಲೆ, ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡಕ್ಕೆ ಸಿಕ್ಕಿರುವ 7 ಜ್ಞಾನಪೀಠ ಪ್ರಶಸ್ತಿಗಳಲ್ಲಿ ಕೊಂಕಣಿ ಭಾಷೆ ಮನೆಮಾತಾಗಿದ್ದ ಶಿವರಾಮ ಕಾರಂತರು ಹಾಗು ಗಿರೀಶ್ ಕಾರ್ನಾಡರಿಗೆ ಬಂದಿರುವುದು ಗಮನಾರ್ಹ ವಿಷಯ.
ಗಡಿ ಸಮಸ್ಯೆಯ ನಿವಾರಣೆಗೆ ನಿರ್ಮಿಸಿದ "ಮಹಾಜನ್ ವರದಿ"ಯಲ್ಲಿ ಗಡಿ ಜಿಲ್ಲೆಗಳಾದ ಕಾರವಾರ ಹಾಗು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗಗಳು ಎಂದು ಸ್ಪಷ್ಟವಾಗಿದೆ. ಈ ವರದಿಯನ್ನು ಎಲ್ಲ ರಾಜ್ಯಗಳು ಗೌರವಿಸಬೇಕಿದೆ.
ಕರ್ನಾಟಕದಲ್ಲಿನ ರಾಜಕೀಯ ಪಕ್ಷಗಳಾಗಲೀ, ಸ್ವಯಂ ಘೋಷಿತ ಕನ್ನಡ ಸಂಘಟನೆಗಲಾಗಲೀ ಚರ್ಚಿಲ್ ಹೇಳಿಕೆಯ ವಿರುದ್ಧ ದನಿ ಎತ್ತದಿರುವುದು ನಮ್ಮ ರಾಜ್ಯದ ಪರವಾದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸಿದೆ. ಇನ್ನು ಮುಂದಕ್ಕಾದರೂ ಕರ್ನಾಟಕದ ರಾಜಕೀಯ ಪಕ್ಷಗಳು ಕರ್ನಾಟಕದ ಏಕತೆಯ ಪರವಾಗಿ ಮಾತನಾಡಿ ದೇಶದಲ್ಲಿನ ಶಾಂತಿ ಹಾಗು ಸೌಹಾರ್ದತೆಯನ್ನು ಕಾಪಾಡುವಲ್ಲಿ ತೊಡಗಿಕೊಳ್ಳಲಿ ಅನ್ನುವುದು ನನ್ನ ಆಶಯ. [ಗಡಿ ವಿವಾದ]
* ಅಮರನಾಥ ಶಿವಶಂಕರ್, ಬೆಂಗಳೂರು
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications