Get Updates
Get notified of breaking news, exclusive insights, and must-see stories!

ಪೊಲೀಸರು ರಾಜಕೀಯ ಜೀತದಾಳುಗಳೇನಲ್ಲ

Police are not slave to Politicians
ಪೊಲೀಸ್ ಇಲಾಖೆ 1861ನೇ ಇಸವಿಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂವಿಧಾನದಂತೆ ಪ್ರತಿಯೊಬ್ಬ ಪ್ರಜೆಯು ಗೌರವಯುತವಾಗಿ ಜೀವಿಸುವ ಹಕ್ಕಿಗಾಗಿ ಒಳಗಾಗಿರುತ್ತಾನೆ. ಆದರೆ, ಈ ಮಾನವ ಹಕ್ಕು ಪೊಲೀಸರನ್ನು ಮಾತ್ರ ಹೊರತುಪಡಿಸಿದಂತಾಗಿದೆ. ರಾಜಕೀಯ ಧುರೀಣರು ಪೊಲೀಸರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ.

ಸಂಘಟನೆಯ ಹಕ್ಕು ಮತ್ತು ಸಂವಿಧಾನದ ಹಕ್ಕು ಮೊಟಕು ಮಾಡುತ್ತಾ ಇಲಾಖೆಯಲ್ಲಿ ಮಾತೆತ್ತಿದರೆ ಅಟೆನ್ಷನ್, ಷಟಪ್ ಮತ್ತು ಡೋಂಟ್ ಟಾಕ್ ಎಂಬ ಈ ಮೂರು ಕಟು ಶಬ್ದಕ್ಕೆ ಪೊಲೀಸರನ್ನು ಒಳಪಡಿಸಿ ತಮ್ಮ ಹಿಡಿತದಲ್ಲಿಟ್ಟುಕೊಂಡು ಅಮಾನವೀಯತೆಯಿಂದ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ಪೊಲೀಸರು ಸದಾ ಜಿಗಿದ ಹಗ್ಗದ ಮೇಲೆ ನಡೆಯುವಂತಾಗಿದೆ.

ಅವರ ಕಠೋರ ಕರ್ತವ್ಯದ ಚಿಂತನೆಯನ್ನು ಸರ್ಕಾರ ಕಿಂಚಿತ್ತೂ ಯೋಚಿಸದೆ ಅವರ ಮೇಲೆ ಗೂಬೆಯಂತೆ ಕಣ್ಣಿಟ್ಟು ಇಂದಿಗೂ ಬೆದರಿಸುತ್ತಲೇ ಇದೆ. ಹೀಗಾಗಿ ಪೊಲೀಸರು ದೈಹಿಕ ಮತ್ತು ಮಾನಸಿಕ ಅಸ್ಪೃಶ್ಯತೆಯಿಂದ ನರಳುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಸಮಾನತೆಗಳಿಂದಲೂ ಇಲಾಖೆ ನರಳುತ್ತಿದೆ. ಪೊಲೀಸರ ಬಗ್ಗೆ ಪರಿಣಾಮಕಾರಿಯಾಗಿ ಶಾಸನ ಸಭೆಗಳಲ್ಲಿ ಯಾರೊಬ್ಬ ಮಂತ್ರಿಗಳಾಗಲಿ, ಶಾಸಕರಾಗಲಿ, ವಾದಗಳನ್ನು ಮಂಡಿಸುತ್ತಿಲ್ಲ. ಪೊಲೀಸರ ನೋವು, ಸಂಕಷ್ಟಗಳನ್ನು ಕೇಳುವವರಿಲ್ಲ.

ನಮ್ಮ ಸಮಾಜವೂ ಪೊಲೀಸರನ್ನು ಸದಾ ಸಂಶಯದಿಂದಲೇ ಕಾಣುತ್ತಿದೆ. ಪ್ರತಿಯೊಬ್ಬ ಪ್ರಜೆ ಹಾಗೂ ರಾಜಕಾರಣಿಯೂ ಪೊಲೀಸರಿಂದ ಸಹಾಯ ಪಡೆದು ಅವರನ್ನು ಹೊಗಳಿ ನಂತರ ತೆಗಳುತ್ತಾರೆ. ಈ ರೀತಿ ಹೊಗಳಿದವರು ಪೊಲೀಸರ ಜ್ವಲಂತ ಸಮಸ್ಯೆಗಳ ಬಗ್ಗೆ ಏಕೆ ಚಿಂತಿಸುತ್ತಿಲ್ಲ?

ಪೊಲೀಸರಿಗೆ ನಿರ್ದಿಷ್ಟವಾದ ಕೆಲಸದ ವೇಳೆಯಿಲ್ಲ. ದುಡಿತಕ್ಕೆ ಸಮಾನವಾದ ವೇತನವಾಗಲೀ, ಹಬ್ಬ-ಹರಿದಿನಗಳಲ್ಲಿ ದುಡಿಸಿಕೊಳ್ಳುವ ಕೆಲಸಕ್ಕೂ ವೇತನವನ್ನಾಗಲೀ ನೀಡುತ್ತಿಲ್ಲ. ಅವರ ಕುಟುಂಬದ ಲಾಲನೆ, ಪಾಲನೆ, ಆರೈಕೆಗಳ ಕಡೆಗೆ ಗಮನ ನೀಡದೆ ಕೋಮುಗಲಭೆಗಳಲ್ಲಿ ಮತ್ತು ಇತರೆ ಕಠೋರ ರಾಜಕೀಯ ಚಳವಳಿಗಳಲ್ಲಿ ಕರ್ತವ್ಯ ನಿರತರಾದ ಪೊಲೀಸರ ಊಟೋಪಚಾರಕ್ಕೂ ಅವಕಾಶ ನೀಡುತ್ತಿಲ್ಲ.

ಮತಾಂಧರು, ಮತಹೀನರೂ, ಪುಂಡುಪೋಕರಿಗಳು ಮತ್ತು ಪೊಲೀಸರನ್ನು ದೂರುವ ರಾಜಕಾರಣಿಗಳು, ಪೊಲೀಸರ ಕಠೋರ ಕರ್ತವ್ಯವನ್ನು ನೋಡಿ ಮರುಗದಿರುವುದು ನಾಚಿಕೆಗೇಡು ಪೊಲೀಸರು ಕಾನೂನಿನಡಿ ಸದಾ ಎಚ್ಚರ ವಹಿಸಿ ಕರ್ತವ್ಯ ಮಾಡಿದರೂ ಕಾನೂನು ಗಂಧವಿಲ್ಲದವರು ಪೊಲೀಸರನ್ನು ದೂಷಿಸುವುದು ಸರಿಯಲ್ಲ.

ಪೊಲೀಸ್ ಅಧಿಕಾರಿ ತನ್ನ ಸಮಯ ಪ್ರಜ್ಞೆಯಿಂದ ಅಹಿತಕರ ಘಟನೆ ಮತ್ತು ಕಾನೂನು ಸುವ್ಯವಸ್ಥೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಅಪರಾಧಿಯನ್ನು ಬಂಧಿಸುವುದಕ್ಕೆ ಹೊತ್ತು ಗೊತ್ತು ನಿಗದಿ ಪಡಿಸಿಲ್ಲ. ಅವರು ಎಲ್ಲಿಯಾದರೂ, ಯಾವಾಗಲಾದರೂ, ಹೋಗಿ ದಸ್ತಗಿರಿ ಮಾಡಬಹುದು.

ಇಂದು ಪೊಲೀಸರ ಕರ್ತವ್ಯದ ಬಗ್ಗೆ ಸಮಾಜವಾಗಲಿ, ರಾಜಕಾರಣಿಗಳಾಗಲಿ ಚಿಂತಿಸುತ್ತಿಲ್ಲ. ಇದರಿಂದ ನೂರಕ್ಕೆ ತೊಂಬತ್ತು ಮಂದಿ ತಮ್ಮ ನಿವೃತ್ತಿ ಹೊಂದುವುದಕ್ಕೆ ಮುಂಚೆಯೇ ಮರಣ ಹೊಂದುತ್ತಿದ್ದಾರೆ. ಈ ಇಲಾಖೆಯಲ್ಲಿ ದುಡಿಯುತ್ತಿರುವ ಬಹು ಮಂದಿ ಅಧಿಕಾರಿಗಳು ದೈಹಿಕ, ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಾ ಆರ್ಥಿಕ, ಸಾಂಸ್ಕೃತಿಕ ಅಸಮಾನತೆಗಳಿಂದ ಕೊರಗುತ್ತಿದ್ದಾರೆ.

ಗೂಂಡಾಗಳನ್ನು, ಸಮಾಜ ದ್ರೋಹಿಗಳನ್ನು, ದರೋಡೆಕೋರರನ್ನು, ಕಳ್ಳಕಾಕರನ್ನು, ಜಾಣ್ಮೆಯಿಂದ ಬಂಧಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿರುವಾಗ ಅವರನ್ನು ಸಮಾಜ ದಂಡಿಸುವುದು ಹಾಗೂ ದೂರುವುದು ಸರಿಯೇ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+