ನನ್ನದು ಎನ್ನುವವರು ಇನ್ನೂ ಅಪಾಯಕಾರಿ!

ಈ 'ನನ್ನದು' ಎನ್ನುವರ ಗುಂಪು ಹೇಗೆ ಅಪಾಯಕಾರಿಯೋ, ಹಾಗೆಯೇ ಸಹಾಯಕ ಕೂಡ. ಇದರಲ್ಲಿ ನಮ್ಮ ಎಂ.ಕೆ.ಇಂದಿರಾ ಅವರು ಬರೆದಿರುವ 'ಫಣಿಯಮ್ಮ'ನವರ ಹಾಗೆ, ಸೇವಾ ಸಂಸ್ಥೆಗಳಲ್ಲಿ ಅನಾಥರ ಸಂಸ್ಕಾರ ಕರ್ಮಗಳನ್ನು ಮಾಡುವ ಹೃದಯವಂತರು. ಇದಕ್ಕೆ ನಮ್ಮವರೇ ಆದ ಹೆಮ್ಮೆಯ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಾಮೂಹಿಕ ವಿವಾಹಗಳು ಸಾಕ್ಷಿ. ಇವರುಗಳು ಆತ್ಮಾರ್ಥತೆ ಉಳ್ಳವರು, ಮಾನವೀಯತೆಯ ಮೇರುಗಳು. ಸಮಾಜದ ಬುನಾದಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನಡೆಯುವವರು.
ಆದರೆ ನಾನು ಹೇಳುತ್ತಿರುವುದು ಈ 'ನನ್ನದು' ಎನ್ನುವ ಗುಂಪಿನ ದ್ವೈತ ರೂಪಿಗಳು. ನಮ್ಮ ಮಹಾಭಾರತದಲ್ಲಿ ಬರುವ ನಾನಾ ವಿಧದ shades of characters. ನಮ್ಮೆಲ್ಲರ ಬಂಧುಗಳಲ್ಲಿಯು ಇಂಥವರು ಕಾಣ ಸಿಗುವವರು. ಇವರುಗಳು ಸಂಬಂಧವಿಲ್ಲದೇನೆ ಅಧಿಪತ್ಯ ಕೊಂಡು ನಡೆಯುವವರು. ತಾವೇ ಉತ್ತರವಾದಿಗಳೆಂದು ತಿಳಿದುಕೊಂಡು ಸಾಂಕೇತಿಕ ಯಜಮಾನಿಕೆಯನ್ನು ಹೊರುವವರು. ಅಥವಾ ಆಫೀಸ್ review ಮೀಟಿಂಗುಗಳಲ್ಲಿ ತಮ್ಮ contribution ಎಂದು ಸುಳ್ಳು ಸುಳ್ಳೇ ಹೇಳುವವರು. ಆಸ್ತಿಯಲ್ಲಿ ದಾಯಾದಿಗಳ ತರಹ ಭಾಗ ಕೇಳುವವರು, ಅತ್ತೆ ಸೊಸೆಯರ ಮಧ್ಯೆ ಜಗಳ ತಂದು ಉಂಡು ಹೋಗುವವರು. ಹಾಗೆ ಸುಮ್ಮಗೆ ಬಾಯಿ ತೀಟೆಗಾಗಿ ತಲೆಗೆ ಮೆಂತ್ಯ ಅರೆಯುವವರು. ದಾಸರೇ ಹೇಳಿದ ಹಾಗೆ ಆಚಾರವಿಲ್ಲದ ನಾಲಿಗೆಯವರು ಆಗಬಹುದು. ಇದೆಲ್ಲ ಒಟ್ಟು ಕುಟುಂಬದಲ್ಲಿ ಜೀವಿಸುವಾಗ ಬಹಳ ಸಹಜವಾದ ದಿನ ನಿತ್ಯದ ಆಗುಹೋಗುಗಳಲ್ಲಿ ಒಂದಾಗಿಬಿಡುತ್ತದೆ. ಇಲ್ಲಿ ಕುಟುಂಬದ ಸದಸ್ಯರೆಲ್ಲರಿಗೂ ಅನುಸರಿಕೆಯ ಪಾಠ ಕಲಿಕೆಯಾಗುತ್ತದೆ. ಒಂದು ವಿಧದಲ್ಲಿ prepares you for handling various situations in life ಅಂತ ಹೇಳಬಹುದು.
ಹಾಗೆಯೇ on the flip side ಈ ಒಟ್ಟು ಸಂಸಾರ ಬಿಟ್ಟು ಒಬ್ಬಂಟಿಗರಾಗಿ ಹೊರ ದೇಶದಲ್ಲಿ ಸಂಸಾರ ಮಾಡುವಾಗ initially ಒಂದು ಅನಾಥೆ ಪ್ರಜ್ಞೆ ಕಾಡುತ್ತದೆ. 'ಫಣಿಯಮ್ಮ'ತರಹ ಯಾರಾದರು ಸಿಕ್ಕಬಾರದೆ, ಯಕಶ್ಚಿತ್ ಮಾತಾದರು ಆಡಿಸಬರದೆ ಎಂದು ಅನ್ನಿಸುತ್ತದೆ. ಕಾಲಕ್ರಮೇಣ ಅದೇ ರೂಢಿಯಾಗಿ ಬಿಡುತ್ತದೆ. ಉದಾಹರಣೆಗಾಗಿ 'ಫಣಿಯಮ್ಮ' ಅವರನ್ನೇ ತೆಗೆದುಕೊಳ್ಳಿ. ಮುಂದೆ ಬಹಳ ವರ್ಷ ಕಳೆದು ಭಾರತಕ್ಕೆ ಹೋದಾಗ, ಈಕೆ 'gossip monger' ಎಂದು ಹೇಳುವಷ್ಟು ಉದ್ದಟತನ ತೋರುತ್ತೇವೆ. Encroachment of private space ಎಂಬ ಮಾನ್ಯತೆಗೆ ಅಡಿಯಾಳಾಗಿಬಿಡುತ್ತೇವೆ.
'ನನ್ನದು' ಎನ್ನುವಿಕೆಯ ಜನ ಭಂಡ ಗೋತ್ರದವರು ಎಂದು ಹೇಳಬಹುದು. ಏನು ಹೇಳಿದರು ಒರೆಸಿಕೊಂಡು ಹೋಗುವವರು. No matter what, I should win, you lose ಎನ್ನುವ ವಿಷಯಾಸಕ್ತರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications