ನನ್ನದು ಎನ್ನುವವರು ಇನ್ನೂ ಅಪಾಯಕಾರಿ!

ಈ 'ನನ್ನದು' ಎನ್ನುವರ ಗುಂಪು ಹೇಗೆ ಅಪಾಯಕಾರಿಯೋ, ಹಾಗೆಯೇ ಸಹಾಯಕ ಕೂಡ. ಇದರಲ್ಲಿ ನಮ್ಮ ಎಂ.ಕೆ.ಇಂದಿರಾ ಅವರು ಬರೆದಿರುವ 'ಫಣಿಯಮ್ಮ'ನವರ ಹಾಗೆ, ಸೇವಾ ಸಂಸ್ಥೆಗಳಲ್ಲಿ ಅನಾಥರ ಸಂಸ್ಕಾರ ಕರ್ಮಗಳನ್ನು ಮಾಡುವ ಹೃದಯವಂತರು. ಇದಕ್ಕೆ ನಮ್ಮವರೇ ಆದ ಹೆಮ್ಮೆಯ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಾಮೂಹಿಕ ವಿವಾಹಗಳು ಸಾಕ್ಷಿ. ಇವರುಗಳು ಆತ್ಮಾರ್ಥತೆ ಉಳ್ಳವರು, ಮಾನವೀಯತೆಯ ಮೇರುಗಳು. ಸಮಾಜದ ಬುನಾದಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನಡೆಯುವವರು.
ಆದರೆ ನಾನು ಹೇಳುತ್ತಿರುವುದು ಈ 'ನನ್ನದು' ಎನ್ನುವ ಗುಂಪಿನ ದ್ವೈತ ರೂಪಿಗಳು. ನಮ್ಮ ಮಹಾಭಾರತದಲ್ಲಿ ಬರುವ ನಾನಾ ವಿಧದ shades of characters. ನಮ್ಮೆಲ್ಲರ ಬಂಧುಗಳಲ್ಲಿಯು ಇಂಥವರು ಕಾಣ ಸಿಗುವವರು. ಇವರುಗಳು ಸಂಬಂಧವಿಲ್ಲದೇನೆ ಅಧಿಪತ್ಯ ಕೊಂಡು ನಡೆಯುವವರು. ತಾವೇ ಉತ್ತರವಾದಿಗಳೆಂದು ತಿಳಿದುಕೊಂಡು ಸಾಂಕೇತಿಕ ಯಜಮಾನಿಕೆಯನ್ನು ಹೊರುವವರು. ಅಥವಾ ಆಫೀಸ್ review ಮೀಟಿಂಗುಗಳಲ್ಲಿ ತಮ್ಮ contribution ಎಂದು ಸುಳ್ಳು ಸುಳ್ಳೇ ಹೇಳುವವರು. ಆಸ್ತಿಯಲ್ಲಿ ದಾಯಾದಿಗಳ ತರಹ ಭಾಗ ಕೇಳುವವರು, ಅತ್ತೆ ಸೊಸೆಯರ ಮಧ್ಯೆ ಜಗಳ ತಂದು ಉಂಡು ಹೋಗುವವರು. ಹಾಗೆ ಸುಮ್ಮಗೆ ಬಾಯಿ ತೀಟೆಗಾಗಿ ತಲೆಗೆ ಮೆಂತ್ಯ ಅರೆಯುವವರು. ದಾಸರೇ ಹೇಳಿದ ಹಾಗೆ ಆಚಾರವಿಲ್ಲದ ನಾಲಿಗೆಯವರು ಆಗಬಹುದು. ಇದೆಲ್ಲ ಒಟ್ಟು ಕುಟುಂಬದಲ್ಲಿ ಜೀವಿಸುವಾಗ ಬಹಳ ಸಹಜವಾದ ದಿನ ನಿತ್ಯದ ಆಗುಹೋಗುಗಳಲ್ಲಿ ಒಂದಾಗಿಬಿಡುತ್ತದೆ. ಇಲ್ಲಿ ಕುಟುಂಬದ ಸದಸ್ಯರೆಲ್ಲರಿಗೂ ಅನುಸರಿಕೆಯ ಪಾಠ ಕಲಿಕೆಯಾಗುತ್ತದೆ. ಒಂದು ವಿಧದಲ್ಲಿ prepares you for handling various situations in life ಅಂತ ಹೇಳಬಹುದು.
ಹಾಗೆಯೇ on the flip side ಈ ಒಟ್ಟು ಸಂಸಾರ ಬಿಟ್ಟು ಒಬ್ಬಂಟಿಗರಾಗಿ ಹೊರ ದೇಶದಲ್ಲಿ ಸಂಸಾರ ಮಾಡುವಾಗ initially ಒಂದು ಅನಾಥೆ ಪ್ರಜ್ಞೆ ಕಾಡುತ್ತದೆ. 'ಫಣಿಯಮ್ಮ'ತರಹ ಯಾರಾದರು ಸಿಕ್ಕಬಾರದೆ, ಯಕಶ್ಚಿತ್ ಮಾತಾದರು ಆಡಿಸಬರದೆ ಎಂದು ಅನ್ನಿಸುತ್ತದೆ. ಕಾಲಕ್ರಮೇಣ ಅದೇ ರೂಢಿಯಾಗಿ ಬಿಡುತ್ತದೆ. ಉದಾಹರಣೆಗಾಗಿ 'ಫಣಿಯಮ್ಮ' ಅವರನ್ನೇ ತೆಗೆದುಕೊಳ್ಳಿ. ಮುಂದೆ ಬಹಳ ವರ್ಷ ಕಳೆದು ಭಾರತಕ್ಕೆ ಹೋದಾಗ, ಈಕೆ 'gossip monger' ಎಂದು ಹೇಳುವಷ್ಟು ಉದ್ದಟತನ ತೋರುತ್ತೇವೆ. Encroachment of private space ಎಂಬ ಮಾನ್ಯತೆಗೆ ಅಡಿಯಾಳಾಗಿಬಿಡುತ್ತೇವೆ.
'ನನ್ನದು' ಎನ್ನುವಿಕೆಯ ಜನ ಭಂಡ ಗೋತ್ರದವರು ಎಂದು ಹೇಳಬಹುದು. ಏನು ಹೇಳಿದರು ಒರೆಸಿಕೊಂಡು ಹೋಗುವವರು. No matter what, I should win, you lose ಎನ್ನುವ ವಿಷಯಾಸಕ್ತರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications