ಸಂಜನಾ ಸಾವು:ಗುತ್ತಿಗೆದಾರನಿಗೆ ಸಿಕ್ಕಿದೆ ಶ್ರೀರಕ್ಷೆ?

ಯಾಕೆಂದರೆ ಇದೆಲ್ಲಾ ನಮ್ಮ ದೇಶದಲ್ಲಿ ಮಾಮೂಲಿ ದಿನನಿತ್ಯದ ಆಗುಹೋಗುಗಳು. ಕಟ್ಟಿದ ಆರೇ ತಿಂಗಳಲ್ಲಿ ಸೇತುವೆಗಳು, ಮೋರಿಗಳು ತುಂಡಾಗಿ ಬೀಳುವುದು. ಡಾಂಬರೀಕರಣ ಮಾಡಿದ ಮೂರೇ ದಿನಗಳಲ್ಲಿ ರಸ್ತೆಗಳು ಕೆರೆಗಳಾಗಿ ಮಾರ್ಪಡುತ್ತವೆ.
ಅಪಾಟ್ ಮೆಂಟುಗಳು, ಕಟ್ಟಡಗಳು ಕುಸಿದು ಬಿದ್ದು ನೂರಾರು ಜನರು ಕಟ್ಟಡದಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಘಟನಾ ಸ್ಥಳಕ್ಕೆ ಮಂತ್ರಿಗಳು, ಅಧಿಕಾರಿಗಳು ಭೇಟಿ ನೀಡಿ ಮೊಸಳೆ ಕಣ್ಣೀರು ಸುರಿಸಿ ಪ್ರಾಣ ಕಳೆದುಕೊಂಡವರ ಬಂಧುಗಳಿಗೆ ಒಂದೆರಡು ಲಕ್ಷ ಪರಿಹಾರ ಘೋಷಿಸಿ ಜಾಗ ಖಾಲಿ ಮಾಡುವುದು ಇದನ್ನೆಲ್ಲಾ ನೋಡಿ ನಮ್ಮ ಮನಸ್ಸು ಜಡಗಟ್ಟಿ ಹೋಗಿದೆ.
ಈ ರೀತಿ ಅವಘಡಗಳು ವಿಶೇಷ ಅನಿಸುವುದೇ ಇಲ್ಲ. ಆದರೆ, ನನ್ನದು ಒಂದೇ ಪ್ರಶ್ನೆ. ಕಳಪೆ ಕಾಮಗಾರಿ ಮಾಡಿ, ಕೋಟಿ, ಕೋಟಿ ಹಣ ನುಂಗಿ ಅಪಾರ ಕಷ್ಟನಷ್ಟಗಳಿಗೆ, ಸಾವು-ನೋವುಗಳಿಗೆ ಕಾರಣರಾದ ಗುತ್ತಿಗೆದಾರರಿಂದ, ಅಧಿಕಾರಿಗಳಿಂದ ಸರ್ಕಾರ ಪರಿಹಾರದ ಹಣವನ್ನು ಯಾಕೆ ಕಕ್ಕಿಸುವುದಿಲ್ಲ ? ಅವರು ಮಾಡಿದ ಅಪರಾಧಕ್ಕೆ ಸರ್ಕಾರ
ತೆರಿಗೆ ಹಣವನ್ನು ಕೊಡಬೇಕೆ ?
ಭಾರತ ಬಿಟ್ಟು ಇನ್ನು ಯಾವ ದೇಶದಲ್ಲೂ ಇಂತಹ ಅಪರಾಧಿಗಳಿಗೆ ಮರಣ ಶಿಕ್ಷೆಯಲ್ಲದೆ ಬೇರೆ ಶಿಕ್ಷೆ ಇಲ್ಲ. ನಮ್ಮಲ್ಲಿ ಎಫ್ಐಆರ್ ದಾಖಲಾಗುತ್ತದಷ್ಟೆ. ಅಪರಾಧಿ ಜಾಮೀನಿನಲ್ಲಿ ಹೊರಬರುತ್ತಾನೆ. ಮತ್ತೇನಾಗುತ್ತದೋ ಯಾರಿಗೂ ಗೊತ್ತಾಗುವುದಿಲ್ಲ.
ಜನರೂ ಮರೆತು ಬಿಡುತ್ತಾರೆ. ಈ ಕಾಲ ಘಟ್ಟದಲ್ಲೇ ಅಪರಾಧಿ ಚಮತ್ಕಾರಗಳನ್ನು ನಡೆಸಿ ಮೋಕ್ಷ ಪಡೆದು ಬಿಡುತ್ತಾನೆ. ಅವನ ಬಳಿ ಹಣ, ಪ್ರಭಾವ ಇರುತ್ತದೆ. ಪ್ರಸ್ತುತ ಕೇಸ್ ನ ಆರೋಪಿ ಬಿಬಿಎಂಪಿ ಕಾರ್ಪೊರೇಟರ್ ಕಮ್ ಕಂಟ್ರಾಕ್ಟರ್ ಮುನಿರತ್ನ ಕೂಡಾ ಹಾಲಿ ಸಚಿವರೊಬ್ಬರ ಅಶ್ರಯ ಪಡೆದು ಕೇಸ್ ನಿಂದ ಬಚಾವಾಗಲು ಯತ್ನಿಸುತ್ತಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ.
ಇನ್ನು ಇಂತಹ ದುರಂತಗಳಲ್ಲಿ ಸತ್ತು ಹೋಗುವವರು ಹೆಚ್ಚಾಗಿ ಬಡ ಕೂಲಿ ಕಾರ್ಮಿಕರು. ಅವರ ಜೀವಕ್ಕೆ ಬೆಲೆಯೇ ಇಲ್ಲವೇ ? ಸಂಜನಾ ಸಿಂಗ್ ಪೋಷಕರಿಗೆ ಲೋಕಾಯುಕ್ತರಿಂದಲಾದರೂ ನ್ಯಾಯ ಸಿಗುವಂತಾಗಲಿ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications