ಸಂಜನಾ ಸಾವು:ಗುತ್ತಿಗೆದಾರನಿಗೆ ಸಿಕ್ಕಿದೆ ಶ್ರೀರಕ್ಷೆ?

ಯಾಕೆಂದರೆ ಇದೆಲ್ಲಾ ನಮ್ಮ ದೇಶದಲ್ಲಿ ಮಾಮೂಲಿ ದಿನನಿತ್ಯದ ಆಗುಹೋಗುಗಳು. ಕಟ್ಟಿದ ಆರೇ ತಿಂಗಳಲ್ಲಿ ಸೇತುವೆಗಳು, ಮೋರಿಗಳು ತುಂಡಾಗಿ ಬೀಳುವುದು. ಡಾಂಬರೀಕರಣ ಮಾಡಿದ ಮೂರೇ ದಿನಗಳಲ್ಲಿ ರಸ್ತೆಗಳು ಕೆರೆಗಳಾಗಿ ಮಾರ್ಪಡುತ್ತವೆ.
ಅಪಾಟ್ ಮೆಂಟುಗಳು, ಕಟ್ಟಡಗಳು ಕುಸಿದು ಬಿದ್ದು ನೂರಾರು ಜನರು ಕಟ್ಟಡದಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಘಟನಾ ಸ್ಥಳಕ್ಕೆ ಮಂತ್ರಿಗಳು, ಅಧಿಕಾರಿಗಳು ಭೇಟಿ ನೀಡಿ ಮೊಸಳೆ ಕಣ್ಣೀರು ಸುರಿಸಿ ಪ್ರಾಣ ಕಳೆದುಕೊಂಡವರ ಬಂಧುಗಳಿಗೆ ಒಂದೆರಡು ಲಕ್ಷ ಪರಿಹಾರ ಘೋಷಿಸಿ ಜಾಗ ಖಾಲಿ ಮಾಡುವುದು ಇದನ್ನೆಲ್ಲಾ ನೋಡಿ ನಮ್ಮ ಮನಸ್ಸು ಜಡಗಟ್ಟಿ ಹೋಗಿದೆ.
ಈ ರೀತಿ ಅವಘಡಗಳು ವಿಶೇಷ ಅನಿಸುವುದೇ ಇಲ್ಲ. ಆದರೆ, ನನ್ನದು ಒಂದೇ ಪ್ರಶ್ನೆ. ಕಳಪೆ ಕಾಮಗಾರಿ ಮಾಡಿ, ಕೋಟಿ, ಕೋಟಿ ಹಣ ನುಂಗಿ ಅಪಾರ ಕಷ್ಟನಷ್ಟಗಳಿಗೆ, ಸಾವು-ನೋವುಗಳಿಗೆ ಕಾರಣರಾದ ಗುತ್ತಿಗೆದಾರರಿಂದ, ಅಧಿಕಾರಿಗಳಿಂದ ಸರ್ಕಾರ ಪರಿಹಾರದ ಹಣವನ್ನು ಯಾಕೆ ಕಕ್ಕಿಸುವುದಿಲ್ಲ ? ಅವರು ಮಾಡಿದ ಅಪರಾಧಕ್ಕೆ ಸರ್ಕಾರ
ತೆರಿಗೆ ಹಣವನ್ನು ಕೊಡಬೇಕೆ ?
ಭಾರತ ಬಿಟ್ಟು ಇನ್ನು ಯಾವ ದೇಶದಲ್ಲೂ ಇಂತಹ ಅಪರಾಧಿಗಳಿಗೆ ಮರಣ ಶಿಕ್ಷೆಯಲ್ಲದೆ ಬೇರೆ ಶಿಕ್ಷೆ ಇಲ್ಲ. ನಮ್ಮಲ್ಲಿ ಎಫ್ಐಆರ್ ದಾಖಲಾಗುತ್ತದಷ್ಟೆ. ಅಪರಾಧಿ ಜಾಮೀನಿನಲ್ಲಿ ಹೊರಬರುತ್ತಾನೆ. ಮತ್ತೇನಾಗುತ್ತದೋ ಯಾರಿಗೂ ಗೊತ್ತಾಗುವುದಿಲ್ಲ.
ಜನರೂ ಮರೆತು ಬಿಡುತ್ತಾರೆ. ಈ ಕಾಲ ಘಟ್ಟದಲ್ಲೇ ಅಪರಾಧಿ ಚಮತ್ಕಾರಗಳನ್ನು ನಡೆಸಿ ಮೋಕ್ಷ ಪಡೆದು ಬಿಡುತ್ತಾನೆ. ಅವನ ಬಳಿ ಹಣ, ಪ್ರಭಾವ ಇರುತ್ತದೆ. ಪ್ರಸ್ತುತ ಕೇಸ್ ನ ಆರೋಪಿ ಬಿಬಿಎಂಪಿ ಕಾರ್ಪೊರೇಟರ್ ಕಮ್ ಕಂಟ್ರಾಕ್ಟರ್ ಮುನಿರತ್ನ ಕೂಡಾ ಹಾಲಿ ಸಚಿವರೊಬ್ಬರ ಅಶ್ರಯ ಪಡೆದು ಕೇಸ್ ನಿಂದ ಬಚಾವಾಗಲು ಯತ್ನಿಸುತ್ತಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ.
ಇನ್ನು ಇಂತಹ ದುರಂತಗಳಲ್ಲಿ ಸತ್ತು ಹೋಗುವವರು ಹೆಚ್ಚಾಗಿ ಬಡ ಕೂಲಿ ಕಾರ್ಮಿಕರು. ಅವರ ಜೀವಕ್ಕೆ ಬೆಲೆಯೇ ಇಲ್ಲವೇ ? ಸಂಜನಾ ಸಿಂಗ್ ಪೋಷಕರಿಗೆ ಲೋಕಾಯುಕ್ತರಿಂದಲಾದರೂ ನ್ಯಾಯ ಸಿಗುವಂತಾಗಲಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications