ತಿಮ್ಮಪ್ಪನ ನೋಡಕ್ಕೆ ಡ್ರೆಸ್ ಕೋಡ್ ಸ್ವಾಗತಾರ್ಹ

ಗಂಡಸರಿಗೆ ಪಂಚೆ. ಇದು ಭಕ್ತಾದಿಗಳು ದೇವಸ್ಥಾನಕ್ಕೆ ಹೋಗುವ ರೀತಿ ನೀತಿ. ಪ್ಯಾಂಟ್ಸ್, ಜೀನ್ಸ್, ಟೀ ಷರ್ಟ್ ಹಾಗೆಯೇ ತುಂಡು ಲಂಗಗಳನ್ನು, ಬಿಗಿಯಾದ ವಸ್ತ್ರಗಳನ್ನು ನಿಷೇಧಿಸಿರುವುದು ಸಂತಸದ ಸಂಗತಿ. ರೆಸ್ಟೋರೆಂಟ್ ಗೆ ಔಟಿಂಗ್ ಹೋಗುವಾಗ ತೊಡುವ ಡ್ರೆಸ್ ಅನ್ನು ಧರಿಸಿ ದೇವಸ್ಥಾನದ ಪವಿತ್ರತೆ ಹಾಳುಗೆಡುವುದು, ಭಕ್ತಾದಿಗಳ ಗಮನ ಸೆಳೆಯುವುದು ಸರಿಯಲ್ಲ.
ತಿರುಪತಿ ದೇವಾಲಯದ ಆವರಣದಲ್ಲಿ ಕುಡಿಯುವ ನೀರಿನ ಬಾಟಲ್ ಅನ್ನು ಹಿಡಿದುಕೊಂಡು ಓಡಾಡುವಂತಿಲ್ಲ ಹಾಗೂ ತೆಗೆದುಕೊಂಡು ಹೋಗುವಂತೆಯೂ ಇಲ್ಲ. ಇದಕ್ಕೆ ಕಾರಣವೂ ಉಂಟು.
ದೇವಾಲಯದ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆಯಿದೆಯೆಂದು ಆಡಳಿತ ಮಂಡಳಿಗೆ ಗುಪ್ತದಳ ಇಲಾಖೆ ಎಚ್ಚರಿಸಿದೆ. ಆದರೆ, ತಿಮ್ಮಪ್ಪನ ದರ್ಶನ ಬೇಗ ಆಗುವುದಿಲ್ಲ. ತಾಸುಗಟ್ಟಲೆ ಮಕ್ಕಳು, ಮಹಿಳೆಯರು, ವಯಸ್ಸಾದವರು ಕಾಯಲೇ ಬೇಕು. ಅಲ್ಲದೇ ಸಾಲಿನಲ್ಲಿ ನಿಂತು ಸಾಗ ಬೇಕಾಗಿದೆ.
ಆ ಸಮಯದಲ್ಲಿ ಬಾಯಾರಿಕೆಯಾದರೆ ನೀರು ಕುಡಿಯಲು ಎಲ್ಲಿಗೆ ಹೋಗಬೇಕು. ಮಕ್ಕಳ, ವಯಸ್ಸಾದವರ ಗತಿ ಏನು? ಇದರ ಬಗ್ಗೆ ಟಿಟಿಡಿ ಯೋಚಿಸಬೇಕಲ್ಲವೇ? ಹೀಗಾಗಿ ಪ್ರತಿ 60 ಅಡಿಗೂ ನೀರು ದೊರೆಯುವಂತೆ ನಲ್ಲಿಗಳನ್ನು ಸ್ಥಾಪಿಸಬೇಕು. ಹೇಗೂ ಭಕ್ತಾದಿಗಳಿಂದ ಕೋಟಿ ಕೋಟಿ ಹಣ ಬಂದು ಬೀಳುತ್ತಿದೆ.
ಹಾಗಾಗಿ ಭಕ್ತಿಗಾಗಿ ಭಕ್ತರ ಪರವಾಗಿ ಅನುಕೂಲವನ್ನು ಮಾಡಬಹುದಲ್ಲವೆ. ಈ ವಿಐಪಿಗಳಿಂದ ಲಕ್ಷಾಂತರ ಭಕ್ತಾದಿಗಳು ತಾಸುಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇವರನ್ನೂ ಕೂಡ ಸಾಮಾನ್ಯ ಜನರಂತೆ ನೋಡುವುದು ಒಳಿತು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications