ವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು!

* ಮುಖ್ಯಮಂತ್ರಿಗಳನ್ನೇ ಪ್ರತಿಕೂಲ ಹವಾಮಾನದಲ್ಲಿ ಅಸುರಕ್ಷಿತ ವಾಹನ ಹತ್ತಿಸುವ ನಮ್ಮ ವ್ಯವಸ್ಥೆಯು ಶ್ರೀಸಾಮಾನ್ಯರಿಗೆ ಇನ್ನೇನು ರಕ್ಷಣೆ ನೀಡೀತು?
* ಸ್ವಯಂ ತಮಗೇ ಮುಳುವಾಗಬಹುದಾದ ಪ್ರತಿಕೂಲ ಹವಾಮಾನವನ್ನಾಗಲೀ ತಮ್ಮ ವಾಹನದ ಸ್ಥಿತಿಯನ್ನಾಗಲೀ ಗಮನಿಸದ ಜನನಾಯಕರು ಜನರ ರಕ್ಷಣೆಯನ್ನು ಅದೆಷ್ಟರಮಟ್ಟಿಗೆ ಗಮನಿಸಿಯಾರು?
* ಬದುಕಿದ್ದಾಗ 'ಸ್ವಾರ್ಥಿ, ಪಕ್ಷಪಾತಿ, ವಂಚಕ, ಅಹಂಕಾರಿ' ಎಂದೆಲ್ಲ ಕೆಲವರಿಂದ ಕರೆಸಿಕೊಳ್ಳುತ್ತಿದ್ದವನು ಸತ್ತಕೂಡಲೇ ಅವೇ ಕೆಲವರ ಬಾಯಲ್ಲೇ ದಿಢೀರನೆ 'ಮಹಾತ್ಮ' ಆಗಿಬಿಡುತ್ತಾನಲ್ಲಾ, ಅದು ಹೇಗೆ?!
* ಮುಖ್ಯಮಂತ್ರಿಗಾಗಿ ಪ್ರಾಣ ತೆತ್ತ ಇತರ ನಾಲ್ವರೂ ಮನುಷ್ಯರೇ ತಾನೆ? ಅಧಿಕಾರದ ಗಾತ್ರಕ್ಕನುಗುಣವಾಗಿ ಸಂತಾಪ-ಪ್ರಚಾರಗಳೇ?!
* ವೈಎಸ್ಆರ್ ನಿಧನದ ಶೋಕ ಭರಿಸಲಾರದೆ ಸಾಲು ಸಾಲು ಜನ ಸತ್ತರಲ್ಲಾ, ಅವರನ್ನು ಮುಗ್ಧರೆನ್ನಬೇಕೋ ದಡ್ಡರೆನ್ನಬೇಕೋ?
* ಬಳ್ಳಾರಿ ಗಣಿ ದಣಿಗಳೀಗ ಯಾವ ಗಣಿತ ಮಾಡುತ್ತಿರಬಹುದು? ಯಾರ ಬಳಿ ಕಣಿ ಕೇಳುತ್ತಿರಬಹುದು?











Click it and Unblock the Notifications