ಸಿಂಗಪುರ ಸಾಂಸ್ಕೃತಿಕ ಹಬ್ಬದ ಮೊದಲನೇ ದಿನ!

ಇಂದು ಬೆಳಗ್ಗೆ 9 ಘಂಟೆಗೆ ವಾಣಿಜ್ಯ ವೇದಿಕೆ ಮತ್ತು ಸಮಾವೇಶದೊಂದಿಗೆ ಪ್ರಾರಂಭವಾಗುವ ಭರ್ಜರಿ ಸಮ್ಮೇಳನವು ಇಲ್ಲಿನ ಕನ್ನಡಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾರ್ಯಕ್ರಮ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ಮಂಗಳ ಧ್ವನಿಯೊಂದಿಗೆ ಮಧ್ಯಾನ್ಹ ಉದ್ಘಾಟಣೆಗೊಂಡು ರಾತ್ರಿ ಬದ್ರಿ ಪ್ರಸಾದ್ ಮತ್ತು ಅನುರಾಧ ಭಟ್ ಅವರ ಚಿತ್ರ ಮಂಜರಿಯೊಂದಿಗೆ ಮೊದಲನೇ ದಿನದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಇಂದಿನ ಇನ್ನೂ ಕೆಲವು ವಿಶೇಷಗಳು - ಪುತ್ತೂರ್ ನರಸಿಂಹ ನಾಯಕ್ ಅವರಿಂದ ದಾಸಮಂಜರಿ, ಪ್ರಯೋಗ ರಂಗ ಅವರ ನಾಟಕ, ಕವಿಗೋಷ್ಠಿ, ಜನಪದ ಮತ್ತು ಇತರ ನೃತ್ಯಗಳು ಹಾಗು ವಿಶ್ವಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ.
ಹೊರದೇಶದಲ್ಲಿ ಕಾರ್ಯನಿಮಿತ್ತ ವಲಸೆ ಹೋಗಿ ತಾಯ್ನಾಡಿನಿಂದ ದೂರವಾಗಿ ವಾಸಿಸುತ್ತಿರುವ ಕನ್ನಡಿಗರಿಗೆ ಕರ್ನಾಟಕದ ಕಲೆ, ಸಾಹಿತ್ಯವನ್ನು ಪುನರ್ ಪರಿಚಯಿಸುವ ಮತ್ತು ಹೊರದೇಶದಲ್ಲೇ ಹುಟ್ಟಿ ಬೆಳೆದಿರುವ ಯುವ ಜನಾಂಗಕ್ಕೆ ಕರ್ನಾಟಕದ ಹಿರಿಮೆಯನ್ನು ತೋರುವ ಸದುದ್ದೇಶವನ್ನು ಹೊಂದಿರುವ ಈ ವಿಶ್ವ ಕನ್ನಡ ಸಮ್ಮೇಳನವು, ಈ ಹಿಂದೆ 2004 (ಅಬುಧಾಭಿ), 2005 (ಸಿಂಗಪುರ), 2006 (ಬಹಮಿಯನ್), 2007 (ಕುವೈತ್), 2008 (ಕತಾರ್) ಮತ್ತು 2009 (ದುಬೈ)ನಲ್ಲಿ ಯಶಸ್ವಿಯಾಗಿ ನಡೆದಿದೆ.
ಸಮ್ಮೇಳನದ ಎರಡು ದಿನವೂ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳಿರುತ್ತವೆ. ಇಲ್ಲಿ ಕರ್ನಾಟಕದ ಗ್ರಾಮೀಣ ಆಟಗಳನ್ನು ಆಡಬಹುದು, ಕನ್ನಡದ ಹಳೆಯ ದಿನಪತ್ರಿಕೆಗಳನ್ನು ಓದಬಹುದು ಮತ್ತು ವಿಶ್ವ ವಿಖ್ಯಾತ ಮೈಸೂರು ಶೈಲಿಯ ತೈಲವರ್ಣಗಳನ್ನು ನೋಡಬಹುದು!
ಬನ್ನಿ ಈ ಸಾಂಸ್ಕೃತಿಕ ಹಬ್ಬದಲ್ಲಿ ಇಂದು ಮತ್ತು ನಾಳೆ ಪಾಲ್ಗೊಳ್ಳಿ. ಕನ್ನಡಮ್ಮನ ರಥವನೆಳೆಯಲು ನೀವು ಕೈ ನೀಡಿ. ಸಮ್ಮೇಳನದಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳ ಮಿಂಚಿನ ವರದಿಗಳಿಗೆ ದಟ್ಸ್ ಕನ್ನಡಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರಿ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications