ಸಿಂಗಾಪುರದಲ್ಲಿ ಕೋಲು ಕೋಲೆನ್ನ ಕೋಲೆ

ಬೆಂಗಳೂರಿನ ಶಿವಪ್ರಿಯ ನೃತ್ಯ ಶಾಲೆಯ ಸಂಸ್ಥಾಪಕರಾದ ಪ್ರಸಿದ್ಧ ನೃತ್ಯ ಪಟು ಡಾ.ಸಂಜಯ್ ಶಾಂತಾರಾಮ್ ಅವರು ಸತತ ಎರಡು ವಾರಗಳ ಕಾಲ ಸಿಂಗಪುರದಲ್ಲಿ ಉಳಿದು ಸ್ಥಳೀಯ ಕನ್ನಡಿಗ ಕಲಾವಿದರಿಗೆ ತರಬೇತಿ ನೀಡಿದ್ದರು. ತಮ್ಮ ಶಾಲೆಯ ಕೆಲವು ಕಲಾವಿದರೊಡನೆ ಹಲವಾರು ಸ್ಥಳೀಯ ಕಲಾವಿದರನ್ನೂ ಸೇರಿಸಿಕೊಂಡು ಅನೇಕ ನೃತ್ಯ ರೂಪಕಗಳನ್ನು ಸಿದ್ಧಗೊಳಿಸಿ ಪ್ರದರ್ಶನ ನೀಡಿದರು. ಈ ಪ್ರದರ್ಶನಗಳಲ್ಲಿ ಮುಖ್ಯವಾದದ್ದು ಜಾನಪದ ನೃತ್ಯ ಮೇಳಗಳು.
ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಸುಗ್ಗಿ ಕುಣಿತ ಮತ್ತು ಯಕ್ಷಗಾನ ನೃತ್ಯಗಳ ಪ್ರದರ್ಶನ ಪ್ರೇಕ್ಷಕರ ಮನಸ್ಸನ್ನು ಎಷ್ಟೊಂದು ಆಕರ್ಷಿಸಿತೆಂದರೆ, ಇಡೀ ಸಭೆ ಒಕ್ಕೊರಲಿನಿಂದ once more ಎಂದು ಬೇಡಿಕೊಂಡಿತು. ಸಭಿಕರ ಸವಿನಯ ಆಗ್ರಹಕ್ಕೆ ಮಣಿದ ಕಾರ್ಯಕ್ರಮದ ಆಯೋಜಕರು ಸಮಯದ ಆಭಾವವಿದ್ದರೂ, ಜಾನಪದ ನೃತ್ಯ ಮೇಳವನ್ನು ಮತ್ತೊಮ್ಮೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟದ್ದು ಸಂತಸತಂದಿತು.
ಕಂಸಾಳೆ ನೃತ್ಯ ಪ್ರಕಾರ ಮೈಸೂರು ಮತ್ತು ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಜಾನಪದ ಕಲೆ. ಕಂಸಾಳೆ ವಾದ್ಯವನ್ನು ಉಪಯೋಗಿಸುವರಿಂದ ಈ ಕಲೆಗೆ ಅದರ ಹೆಸರು ಬಂದಿದೆ. ಈ ಕಲೆ ಮಲೆ ಮಹಾದೇಶ್ವರನ ಆರಾಧಿಸುವ ಒಂದು ಪದ್ಧತಿ. ಡೊಳ್ಳು ಕುಣಿತ ಉತ್ತರ ಕರ್ನಾಟಕದ ಜಾನಪದ ಸಮೂಹ ನೃತ್ಯ. ಹದಿನಾರು ಜನರು ಡೊಳ್ಳನ್ನು ಹೊತ್ತು ಅದನ್ನು ಬಾರಿಸುತ್ತ ಮತ್ತು ಅದೇ ಸಮಯದಲ್ಲಿ ನರ್ತಿಸುತ್ತಾರೆ. ದಕ್ಷ ಯಜ್ಞ ಮತ್ತು ವೀರಭದ್ರನ ಕಥೆಯನ್ನು ನೃತ್ಯ ರೂಪಕವಾಗಿ ಹೇಳುವ ವೀರಗಾಸೆ, ಅನೇಕ ತೀವ್ರಗತಿಯ ನಾಟ್ಯ ಭಂಗಿಗಳನ್ನು ಹೊಂದಿದ್ದು ಎರಡು, ನಾಲ್ಕು ಅಥವಾ ಆರು ಜನರ ತಂಡಗಳಿಂದ ಪ್ರದರ್ಶಿಸಲ್ಪಡುತ್ತದೆ.
ಯಕ್ಷಗಾನ ಕರಾವಳಿಯ ಅತ್ಯಂತ ಜನಪ್ರಿಯ ಜಾನಪದ ಕಲೆ. ಈ ಕಲೆಯಲ್ಲಿ ಸಂಗೀತ, ಸಾಹಿತ್ಯ ಮತ್ತು ನೃತ್ಯ, ಮೂರೂ ಕಲೆಗಳ ಸಂಗಮವಿದೆ. ಯಕ್ಷಗಾನ ಪ್ರಸಂಗವೊಂದರಲ್ಲಿ ಕಲಾವಿದರು ಮಹಾಭಾರತ, ರಾಮಾಯಣ ಮತ್ತು ಪುರಾಣದ ಕಥೆಗಳನ್ನು ಅಭಿನಯಿಸಿ ಪ್ರಸ್ತುತಪಡಿಸುತ್ತಾರೆ. ಯಕ್ಷಗಾನದ ರಾಗ ತಾಳಗಳ ಮೂಲ ಜಾನಪದ. ಆದರೆ ಯಕ್ಷಗಾನದ ರಾಗ ತಾಳಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಬಹುದು. ಕರಾವಳಿಯ ಹಾಲಕ್ಕಿ ಒಕ್ಕಲಿಗರು ಸುಗ್ಗಿಯ ಕಾಲದಲ್ಲಿ ಸಂಭ್ರಮದಿಂದ ಆಚರಿಸುವ ನೃತ್ಯ ಸುಗ್ಗಿ ಕುಣಿತ. ಹನ್ನೆರಡರಿಂದ ಹದಿನಾಲ್ಕು ಜನ ನೃತ್ಯಪಟುಗಳು ಸಾದರಪಡಿಸುವ ಈ ನೃತ್ಯ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರಚಲಿತವಿರುವ ಜಾನಪದ ನೃತ್ಯ. ಕೋಲಾಟ ಬಣ್ಣ ಬಣ್ಣದ ಕೋಲುಗಳಿರುವ ಜಾನಪದ ನೃತ್ಯ ರಾಜ್ಯದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಕೋಲು ಕೋಲೆನ್ನ ಕೋಲೆ ಮತ್ತು ಚೆಲುವಯ್ಯ ಚೆಲುವೋ ತಾನಿ ತಂದಾನ ಜನಪ್ರಿಯ ಗೀತೆಗಳನ್ನು ಕೋಲಾಟದಲ್ಲಿ ಸಾಮಾನ್ಯವಾಗಿ ಬಳಸುವದುಂಟು.
ಆಧುನಿಕತೆಯ ಪ್ರವಾಹದಲ್ಲಿ ನಮ್ಮತನ ಮತ್ತು ನಮ್ಮ ಸಂಸ್ಕೃತಿಗಳೆಲ್ಲಿ ಕೊಚ್ಚಿಹೋಗುವವೋ ಎಂಬ ಅಳುಕು ನಮ್ಮಲ್ಲನೇಕರಿಗಿದೆ. ಆದರೆ ಈ ರೀತಿಯ ಜಾನಪದ ನೃತ್ಯಗಳನ್ನು ಜನರು ನೋಡಿ ಮೆಚ್ಚಿ ಮತ್ತೆ ಮತ್ತೆ ನೋಡುವ ಇಚ್ಛೆ ವ್ಯಕ್ತಪಡಿಸುತ್ತಿರುವುದು ಸಮಾಧಾನಕರ. ಈ ತರಹದ ಕಲೆಗಳಿಗೆ ವೇದಿಕೆ ಒದಗಿಸಿ ಅವುಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿರುವ ಕರ್ನಾಟಕ ವೈಭವದಂತಹ ಸಂಸ್ಥೆಗಳೂ ಅಭಿನಂದನಾರ್ಹ. ಕರ್ನಾಟಕ ಪಾರಂಪರಿಕ ಸಂಸ್ಕೃತಿಗೆ ಸಂಕೇತಗಳಾದ ಈ ಅಪೂರ್ವ ಕಲೆಗಳಿಗೆ ವಿಶ್ವದೆಲ್ಲೆಡೆಯ ಕನ್ನಡಿಗರಿಂದ ಮನ್ನಣೆ ದೊರೆತು ಈ ಕಲೆಗಳು ಉಳಿದು ಬೆಳೆಯಬೇಕು ಎಂಬುದು ಜಾನಪದ ಕಲಾಭಿಮಾನಿಗಳ ಆಶಯ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications