ನಾವಿಕ ಸಮ್ಮೇಳನ ಮುಖಪುಟ ವಿನ್ಯಾಸ ಸ್ಪರ್ಧೆ

ಕನ್ನಡ ಜಗತ್ತಿನ ನಾನಾ ಲೇಖಕರು, ಚಿತ್ರಕಾರರು, ಕವಿಗಳು ಮತ್ತು ಚಿಂತಕರ ಸೃಜನಶೀಲ ಕಾಣಿಕೆಗಳಿಂದ ಕಂಗೊಳಿಸಲಿರುವ 'ಅಲೆವಾಣಿ' ಒಂದು ಮಹೋನ್ನತ ಮತ್ತು ಸಂಗ್ರಹಯೋಗ್ಯ ಸಂಪುಟವಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಸಮಿತಿ ಹೊಂದಿದೆ. 'ಅಲೆವಾಣಿ' ಸಾರುವ ಮುಖ್ಯ ಸಂದೇಶವಾಣಿ “ವಿಶ್ವವ್ಯಾಪ್ತಿ ಕನ್ನಡ : ಅಂದು, ಇಂದು,ಮುಂದು."
ಕನ್ನಡ ನಾಡಿನ ಶ್ರೀಮಂತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ಸಂಚಿಕೆಗೆ ಸೂಕ್ತವಾದ ಮುಖಪುಟ ವಿನ್ಯಾಸ ಬೇಕಾಗಿರುತ್ತದೆ. ಕನ್ನಡ ಕೃತಿಗಳಿಗೆ ಮುಖಪುಟ ವಿನ್ಯಾಸ ಮಾಡುವ ನುರಿತ ಕಲಾವಿದರು ಅಲೆವಾಣಿಯ ಧ್ಯೇಯವಾಕ್ಯಕ್ಕೆ ಅನುಗುಣವಾದ ವಿನ್ಯಾಸ ರೂಪಿಸಿ ಸ್ಮರಣ ಸಂಚಿಕೆಯ ಸಂಪಾದಕರಿಗೆ ಕಳಿಸಬೇಕೆಂದು ಕೋರಲಾಗಿದೆ. ಸಂಪಾದಕರು, ಶ್ರೀಕಾಂತ್ ಬಾಬು.
ವಿಶ್ವಕನ್ನಡಿಗರ ಸೃಜನಶೀಲತೆಯ ಅಭಿವ್ಯಕ್ತಿಗೆ ಇದೊಂದು ಸದವಕಾಶವೆಂದು ನಾವಿಕ ಸಾಹಿತ್ಯ ಸಮಿತಿ ವಿಶ್ವಾಸವಿರಿಸುತ್ತದೆ. ಆಯ್ಕೆಯಾದ ಮುಖಪುಟ ವಿನ್ಯಾಸವನ್ನು ಅಲೆವಾಣಿ ಸಂಚಿಕೆಯ ರಕ್ಷಾಕವಚಕ್ಕೆ ಬಳಸಿಕೊಳ್ಳಲಾಗುವುದು. ಹಾಗೂ, ಆಯ್ಕೆಯಾದ ಅತ್ಯುತ್ತಮ ವಿನ್ಯಾಸ ರಚಿಸಿದ ಕಲಾವಿದರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ ಎಂದೂ ಅಲೆವಾಣಿಯ ಸಂಪಾದಕರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಮುಖಪುಟ ವಿನ್ಯಾಸ ಕಳುಹಿಸಲು ಕೊನೆಯ ದಿನ: 30 ಏಪ್ರಿಲ್ 2010. ವಿಳಾಸ : [email protected]
ಮುಖಪುಟದ ವಿನ್ಯಾಸವಲ್ಲದೆ ಸ್ಮರಣ ಸಂಚಿಕೆಗೆ ಕಥೆ, ಕವಿತೆ, ಲೇಖನ, ಪ್ರವಾಸ ಕಥನ, ಅನುಭವ ಕಥನ, ನಾಟಕ ಮತ್ತು ಮಕ್ಕಳ ಚಿತ್ರಕಲೆ ಮುಂತಾದ ಕನ್ನಡ ಸಾಮಗ್ರಿಗಳನ್ನು ಅಲೆವಾಣಿ ಅಪೇಕ್ಷಿಸಿದ್ದು ವಿವರಗಳಿಗೆ ಇಲ್ಲಿ ನೋಡಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications