ಅಕ್ಕ ಸಮ್ಮೇಳನಕ್ಕೆ ದಾಖಲೆ ನೊಂದಾವಣೆ

ಅಮೇರಿಕದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲದಿದ್ದರೂ, ಅಕ್ಕ ಸಮ್ಮೇಳನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನೊಂದಾವಣೆ ಪ್ರಾರಂಭವಾದ 2 ತಿಂಗಳ ಒಳಗೆ 2,000ಕ್ಕೂ ಹೆಚ್ಚಿನ ನೋಂದಾವಣೆ ಆಗಿರುವುದು ಒಂದು ಹೊಸ ದಾಖಲೆ. ಅಕ್ಕ ಹಾಗೂ ಬೃಂದಾವನ ಸಂಸ್ಥೆಗಳು ಒಂದು ಅತ್ಯುತ್ತಮ ವಿಶ್ವ ಸಮ್ಮೇಳನವನ್ನು ನಡೆಸುತ್ತದೆ ಎಂಬ ಭರವಸೆ ಇಟ್ಟು ಬಲುಬೇಗ ನೊಂದಾವಣೆ ಮಾಡಿ ಸಮ್ಮೇಳನಕ್ಕೆ ಪ್ರೋತ್ಸಾಹ ಸೂಚಿಸಿರುವ ಕನ್ನಡ ಬಂಧುಗಳಿಗೆ ಮತ್ತೊಮ್ಮೆ ಧನ್ಯವಾದಗಳು.
ಸಮ್ಮೇಳನಕ್ಕೆ ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲ ಕನ್ನಡಿಗರಿಗೆ ಹಾಗೂ ಮುಂದಿನ ದಿನಗಳಲ್ಲಿ ನೊಂದಾವಣೆಗೆ ಸಿದ್ಧವಾಗಿರುವ ಕನ್ನಡ ಪ್ರತಿನಿಧಿಗಳಿಗೆ ಅರ್ಥಪೂರ್ಣ ಮತ್ತು ಆನಂದದಾಯಕ ಮೂರು ದಿನಗಳ ಕನ್ನಡ ಹಬ್ಬ ಕಟ್ಟಿಕೊಡಲು ಸಮ್ಮೇಳನ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ. ಸಮ್ಮೇಳನವನ್ನು ಸ್ಮರಣೀಯವಾಗಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದಾರೆ.
ಇದಕ್ಕೆ ಸಾಕ್ಷಿಯೋ ಎಂಬಂತೆ ಇದ್ದುದು ಫೆಬ್ರವರಿ 27ರಂದು ಸಮ್ಮೇಳನ ನಡೆಯುವ "ರಾರಿಟನ್ ಸೆಂಟರ್"ನಲ್ಲಿ ಅಕ್ಕ ಪದಾಧಿಕಾರಿಗಳೊಡಗೂಡಿ ಸಮ್ಮೇಳನ ಸಮಿತಿಗಳು ನಡೆಸಿದ ಸಮಾಲೋಚನಾ ಸಭೆ. ಕನೆಕ್ಟಿಕಟ್, ನ್ಯೂಯಾರ್ಕ್, ಪೆನ್ಸಿಲ್ಲ್ವೇನಿಯ ಹಾಗು ನ್ಯೂ ಜೆರ್ಸಿಯಿಂದ ಆಗಮಿಸಿದ್ದ ಎಲ್ಲ 37 ಸಮಿತಿಗಳ ಚೇರ್ / ಕೊ ಚೇರ್ ಹಾಗು ಸ್ವಯಂಸೇವಕರು ಸುಮಾರು 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಲೆತು ವಿಚಾರ ವಿನಿಮಯ ಮಾಡಿಕೊಂಡರು.
ವಿಶೇಷ ಪೂಜೆ, ಯತಿವರ್ಯರ ಆಶೀರ್ವಾದ : ಆಯಾ ಸಮಿತಿಗಳು ಮುಗಿಸಿರುವ / ನಡೆಸುತ್ತಿರುವ ಕಾರ್ಯ ಕಲಾಪಗಳ ಬಗ್ಗೆ ಸಂಕ್ಷಿಪ್ತವಾದ ಪರಿಚಯ ಮಾಡಿಕೊಂಡರು. ತದನಂತರ ಹತ್ತಿರದ ಶ್ರೀ ಕೃಷ್ಣ ವೃಂದಾವನದಲ್ಲಿ ಆರನೇ ಅಕ್ಕ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ದೂರವಾಣಿ ಮೂಲಕ ಆಶೀರ್ವಚನವನ್ನೂ ಪಡೆದುಕೊಳ್ಳಲಾಯಿತು.
ಈ ಒಂದು ದಾಖಲೆ ನೋಂದಾವಣೆಗೆ ಸಹಕರಿಸಿದ ಎಲ್ಲಾ ಚೇರ್, ಕೊ ಚೇರ್ ಗಳಿಗೂ, ಅಕ್ಕ ಪದಾಧಿಕಾರಿಗಳಿಗೂ, ಬೃಂದಾವನದ ಪದಾಧಿಕಾರಿಗಳಿಗೂ, ಎಲ್ಲ ಕನ್ನಡ ಕೂಟದ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯವರಿಗೂ ಹಾಗೂ ಸಮ್ಮೇಳನದ ಸುದ್ದಿ ಚಿತ್ರಗಳನ್ನು ಕನ್ನಡದಲ್ಲಿ ಬಿಂಬಿಸಿದ ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ನಮ್ಮ ವಂದನೆಗಳು ಸಲ್ಲುತ್ತವೆ.
ಇನ್ನೂ ಹೆಚ್ಚಿನ ನೊಂದಾವಣೆಗೆ ಕನ್ನಡ ಸಮುದಾಯದ ಸಹಕಾರ ಸಿಗುವುದು ಎಂಬ ಭರವಸೆ ಸಮ್ಮೇಳನ ಸಮಿತಿಗೆ ಇದೆ. ಕಾರ್ಯಕ್ರಮಗಳಿಗೆ ಪ್ರಾಯೋಜಕರುಗಳನ್ನು, ಸಮ್ಮೇಳನಕ್ಕೆ ದಾನಿಗಳನ್ನು, ಸ್ಮರಣ ಸಂಚಿಕೆಗೆ ಜಾಹಿರಾತುಗಳನ್ನು ಹಾಗೂ ಸಮ್ಮೇಳನದ ವಸ್ತು ಪ್ರದರ್ಶನಕ್ಕೆ ವಾಣಿಜ್ಯ ಮಳಿಗೆಗಳನ್ನು ತರುವುದರಲ್ಲೂ ಕೂಡ ಕನ್ನಡ ಸೇವಕರ ಸಹಕಾರ ಅತ್ಯಗತ್ಯ. ನಿಮ್ಮ ಸಹಕಾರ ಹೀಗೇ ಮುಂದುವರೆಯಲಿ ಎಂದು ಅಕ್ಕ, ಬೃಂದಾವನ ಕನ್ನಡ ಕೂಡ ಆಶಿಸುತ್ತದೆ.
ಸಂಗೀತ, ನೃತ್ಯ, ನಾಟಕ, ಹಾಸ್ಯ ವಿಡಂಬಣೆ, ಫ್ಯಾಷನ್ ಶೋ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, "ಅಕ್ಕ ಐಡಲ್", "ಮಿಸ್ ಅಕ್ಕ", "ಕೂಟ ನೃತ್ಯ", "ಅಕ್ಕ ಕ್ರಿಕೆಟ್ ಲೀಗ್", "ಸಣ್ಣ ಕಥೆಗಳ ಸ್ಪರ್ಧೆ"ಯಂತಹ ಸ್ಪರ್ಧೆಗಳಲ್ಲಿ ಎಲ್ಲ ಕನ್ನಡ ಕೂಟಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದನ್ನು ನಾವು ಕಾಣಬಯಸುತ್ತೇವೆ.
ಸ್ಮರಣ ಸಂಚಿಕೆಯಲ್ಲಿ ನಿಮ್ಮ ಲೇಖನಗಳನ್ನು ನಾವು ಓದಬಯಸುತ್ತೇವೆ. ಕರ್ನಾಟಕದ ಕಲಾವಿದರಿಂದ ಅತ್ತ್ಯುತ್ತಮವಾದ ಮನರಂಜನೆ ಕಾರ್ಯಕ್ರಮದ ಸಲುವಾಗಿ ಹಲವಾರು ಕಲಾವಿದರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಕರ್ನಾಟಕದ ತಿಂಡಿ, ಊಟಗಳನ್ನು ನಿಮಗೆ ಉಣಬಡಿಸಲು ಕೇಟರರ್ ಗಳ ಜೊತೆ ಸುದೀರ್ಘವಾಗಿ ಚರ್ಚೆ ಸಾಗಿದೆ.
ಒಟ್ಟಾರೆ ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಅಕ್ಕ ಆರನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಕಲ ಕನ್ನಡಿಗರಿಗೂ ಸವಿಯಾದ ಮಾತು, ಸಿಹಿಯಾದ ಊಟ, ಸೊಗಸಾದ ನೋಟ, ಸದಾ ಕಾಲ ನೆನಪಿಡುವಂಥಹ ಕನ್ನಡ ಹಬ್ಬಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಹೆಚ್ಚಿನ ವಿವರಗಳಿಗೆ ಅಕ್ಕ ವೆಬ್ಸೈಟ್ ಹಾಗು ದಟ್ಸ್ ಕನ್ನಡ ನೋಡುತ್ತಿರಿ. ಧನ್ಯವಾದಗಳು.
ತಮ್ಮ ವಿಶ್ವಾಸಿ, ಸಮ್ಮೇಳನ ಕಾರ್ಯಕಾರಿ ಸಮಿತಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications