ಸಣ್ಣಕಥಾ ಸ್ಪರ್ಧೆ : ಯುವ ಬರಹಗಾರರಿಗೆ ಆಹ್ವಾನ

ಈ ಯುವ ಬರಹಗಾರರು ಕಳಿಸುವ ಕತೆಗಳನ್ನು ಖ್ಯಾತ ಸಾಹಿತಿಗಳನ್ನೊಳಗೊಂಡ ತೀರ್ಪುಗಾರರ ಮಂಡಲಿಗೆ ಒಪ್ಪಿಸಲಾಗುವುದು. ಆ ಮಂಡಲಿ ನಿರ್ಧರಿಸುವ ಮೊದಲ ಮೂರು ಕತೆಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ, ಈ ಮೂರು ಕತೆಗಳ ಜೊತೆಗೆ ಉತ್ತಮ ಎಂದು ಮಂಡಲಿ ನಿರ್ಧರಿಸುವ ಇನ್ನೂ 12 ಕತೆಗಳನ್ನು ಸೇರಿಸಿ ಒಟ್ಟು ಹದಿನೈದು ಕತೆಗಳ ಸಂಗ್ರಹವನ್ನು ಆಕರ್ಷಕವಾದ ಪುಸ್ತಕ ರೂಪದಲ್ಲಿ ಮುದ್ರಿಸಿ ಅಕ್ಕ ಸಮ್ಮೇಳನಕ್ಕೆ ನೋಂದಾವಣೆ ಸಲ್ಲಿಸಿದವರೆಲ್ಲರಿಗೂ ಹಂಚಲಾಗುವುದು.
ಈ ನಮ್ಮ ಕರೆಯನ್ನು ಮನ್ನಿಸಿ ಕನ್ನಡದ ಯುವ ಬರಹಗಾರರು ಅಧಿಕ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಪಾಲುಗೊಳ್ಳುತ್ತಾರೆಂದು ಆಶಿಸುತ್ತೇವೆ. ಕನ್ನಡ ಸಾಹಿತ್ಯದ ಭವ್ಯ ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸುವ, ಹಾಗೂ ಅದನ್ನು ಹೊಸ ಪಥ, ದಿಕ್ಕುಗಳಲ್ಲಿ ಬೆಳೆಸುವ ಹೊಣೆ ಹೊತ್ತ ಈ ಯುವಜನಾಂಗಕ್ಕೆ ನಮ್ಮ ಹಾರ್ದಿಕ ಸ್ವಾಗತ. ಸ್ಪರ್ಧೆಯ ಬಗ್ಗೆ ಕೆಲವು ಸೂಚನೆ ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದೆ:
ಲೇಖಕರಿಗೆ ಸೂಚನೆಗಳು, ಮಾಹಿತಿಗಳು
* ಈ ಸ್ಪರ್ಧೆಯಲ್ಲಿ 20ರಿಂದ 30ರ ವಯಸ್ಸಿನ ಯುವ ಬರಹಗಾರರಿಗೆ ಮಾತ್ರ ಪ್ರವೇಶವುಂಟು. ಬರಹಗಾರರು ಭಾರತದಲ್ಲಾಗಲೀ, ಬೇರೆಲ್ಲಿಯಾಗಲೀ ಇರಬಹುದು.
* ನೀವು ಕಳಿಸುವ ಕತೆ ಕನ್ನಡದಲ್ಲಿರಬೇಕು.
* ಕತೆ ನಿಮ್ಮ ಸ್ವಂತ ರಚನೆಯಾಗಿರಬೇಕು. ಇದಕ್ಕೆ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
* ಭಾಷಾಂತರಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.
* ಸ್ಪರ್ಧೆಯಲ್ಲಿ ಭಾಗವಹಿಸುವವರು ತಲಾ ಒಂದು ಕತೆ ಮಾತ್ರ ಕಳಿಸಬಹುದು.
* ಕತೆಗಳ ಮಿತಿ 3000 ಪದಗಳು. (ಬರಹ ನಂಬರ್ 14 ಫಾಂಟ್ ಸೈಜಿನಲ್ಲಿ ಇದು 8 1/2 x 11 ಹಾಳೆಗಳಲ್ಲಿ ಸುಮಾರು 10ಪುಟ ತುಂಬುತ್ತದೆ.) ಇಲ್ಲಿ ಸೂಚಿಸಿರುವ ಮಿತಿಗಿಂತಲೂ ದೀರ್ಘವಾದ ಕತೆಗಳನ್ನು ಸ್ವೀಕರಿಸುವುದಿಲ್ಲ.
* ಕತೆಗಳನ್ನು ವಿದ್ಯುನ್ಮಾನ (electronic) ಮಾಧ್ಯಮದ ಮೂಲಕ ಮಾತ್ರ ಕಳಿಸತಕ್ಕದ್ದು. ಕೈಬರಹದ ಅಥವ ಟೈಪು ಮಾಡಿದ ಕತೆಗಳನ್ನು ಸ್ವೀಕರಿಸುವುದಿಲ್ಲ. ನುಡಿ ಅಥವ ಬರಹ ತತ್ರಾಂಶಗಳನ್ನು ಮಾತ್ರ ಬಳಸಿ.
* ಕತೆಗಳನ್ನು ಸ್ವೀಕರಿಸಲು ಕಡೆಯ ತಾರೀಕು: ಏಪ್ರಿಲ್ 15, 2010.
* ಕತೆಗಳನ್ನು email ಮೂಲಕ ಈ ವಿಳಾಸಕ್ಕೆ ಕಳಿಸಿಕೊಡಿ: [email protected]
* ನಿಮ್ಮ ಕತೆಯ ಜೊತೆಗೆ, ನಿಮ್ಮ ವಯಸ್ಸಿನ ಬಗ್ಗೆ ಮಾಹಿತಿಯನ್ನು ಕಳಿಸಿಕೊಡಿ. ಇದು ನಿಮ್ಮ ಹೆಸರನ್ನು ನಮೂದಿಸಿರುವ ಜನನ ಪತ್ರಿಕೆ (Birth Certificate), ಸೆಕಂಡರಿ ಶಾಲಾ ಸರ್ಟಿಫಿಕೇಟ್ (SSLC) ಅಥವ ಅವಕ್ಕೆ ಸಮವಾದ ಇನ್ನಾವುದೇ ಆಧಾರವಾಗಿರಬಹುದು.
* ಕತೆಗಳ ಸ್ವಾಮ್ಯ, ಹಕ್ಕು (copyright) ನಿಮ್ಮದೇ ಆಗಿರುತ್ತದೆ. ಆದರೆ ಈ ಪ್ರಸ್ತುತ ಸಂಗ್ರಹದಲ್ಲಿ ಪ್ರಕಟಗೊಂಡ ಯಾವುದೇ ಕತೆಯನ್ನು ಮರುಪ್ರಕಟನೆ ಮಾಡುವ ಹಕ್ಕನ್ನು ಅಕ್ಕ ಉಳಿಸಿಕೊಳ್ಳುತ್ತದೆ.
* ಕತೆಗಳ ಆಯ್ಕೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾದದ್ದು.
ನಿಮಗೆ ಇನ್ನೇನಾದರೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕ ಮಾಡಿ: ಜೆ.ಎ.ಸೀತಾರಾಮ್ (944-803-8181)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications