ಅಮೆರಿಕ ಕನ್ನಡ ಸಂಘಗಳ ಚಾರಿತ್ರಿಕ ದಾಖಲೆ

ಪಂಪ ಆರಂಭವಾದ ಅನತಿಕಾಲದಲ್ಲೇ ಜನ್ಮತಾಳಿದ್ದು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಅಸೋಸಿಯೇಷನ್. ಇತರ ರಾಜ್ಯಗಳಲ್ಲಿ ಕಾಲಕಾಲಕ್ಕೆ ಕನ್ನಡಿಗರ ಜನಸಾಂದ್ರತೆ ಹೆಚ್ಚಾದಂತೆ ಸಂಘಗಳು ಜನ್ಮತಾಳುತ್ತಾ ಬಂದವು. ಕನ್ನಡ ಕುಟುಂಬಗಳಿಗೆ ಒಂದು ವೇದಿಕೆ ಕಲ್ಪಿಸಿಕೊಡುವಲ್ಲಿ ಸಾಫಲ್ಯ ಕಂಡುಕೊಳ್ಳುವುದೇ ಪ್ರತಿಯೊಂದೂ ಸಂಘಗಳ ಮೂಲ ಉದ್ದೇಶ. ಈ ಎಲ್ಲ ಸಂಘಗಳ ಹುಟ್ಟು ಬೆಳವಣಿಗೆ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ವಿವರಗಳು ಬೇಕು. ಎಲ್ಲಿವೆ? ಯಾರು ಕಟ್ಟಿಕೊಡುತ್ತಾರೆ? ಶ್ರಮ ಮತ್ತು ವಾತ್ಸಲ್ಯದಿಂದ ತಾವು ಕಟ್ಟಿದ ಕನ್ನಡ ಸಂಘಗಳ ಇತಿಹಾಸ ಕಳೆದು ಹೋಗುತ್ತದಾ? ಎಂಬ ಪ್ರಶ್ನೆಯನ್ನು ಅನೇಕ ಹಿರಿಯ ಅಮೆರಿಕನ್ನಡಿಗರು ನಮ್ಮ ಡಾಟ್ ಕಾಂ ಮುಂದೆ ಇಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಬಿಡಿ ಲೇಖನಗಳು ಹರಿಹರೇಶ್ವರ ಅವರು ಸಂಪಾದಿಸುತ್ತಿದ್ದ ಅಮೆರಿಕನ್ನಡ ಪತ್ರಿಕೆಯಲ್ಲಿ ಹಾಗೂ ಹ್ಯೂಸ್ಟನ್ ಸಮ್ಮೇಳನದ ಸ್ಮರಣ ಗ್ರಂಥ 'ದರ್ಶನ' ದಲ್ಲಿ ಎಂಎಸ್ ನಟರಾಜ್ ಅವರ ಕನ್ನಡ ಸಂಘ ನಡೆದುಬಂದ ದಾರಿಯ ಕಥಾನಕಗಳು ಬೆಳಕು ಕಂಡಿವೆ. ಅವೆಲ್ಲ ಇವತ್ತು ಚದುರಿದ ಚಿತ್ರಗಳಂತೆ ಕಾಣಿಸುತ್ತವೆ.
ಅಮೆರಿಕನ್ನಡಿಗ ಎಂದ ಕೂಡಲೇ ಅಕ್ಕ ಹೆಸರು ನೆನಪಾಗುವ ಈ ಕಾಲಘಟ್ಟದಲ್ಲಿ ಅಮೆರಿಕಾ ಕನ್ನಡ ಸಂಘಗಳ ಸಮಗ್ರ ಚರಿತ್ರೆ ಸಂಪುಟವನ್ನು ಅಕ್ಕ ವತಿಯಿಂದಲೇ ನಿರೀಕ್ಷಿಸುವುದು ತಪ್ಪಾಗುವುದಿಲ್ಲ. ಎರಡು ವರ್ಷಕ್ಕೊಮ್ಮೆ ಅಕ್ಕ ಸಮ್ಮೇಳನ ನಡೆಯತ್ತೆ, ನಿಜ. ಸಮ್ಮೇಳನದ ನೆನಪಿಗೆ ಸ್ಮರಣ ಸಂಚಿಕೆಗಳೂ ಸಿದ್ಧವಾಗುತ್ತವೆ, ನಿಜ. ಈ ವರೆಗೆ ನಾವು ಕಂಡ ಸ್ಮರಣ ಸಂಚಿಕೆಗಳು ಬಿಡಿಬಿಡಿ ಲೇಖನಗಳ ಮಾಲೆಯಾಗಿ ಬೈಂಡಿಗ್ ಆಗಿವೆಯೇ ವಿನಾ, ಅವುಗಳಿಗೆ ಒಂದು ಚರಿತ್ರೆಯ ಸತ್ವ ಬಂದಿಲ್ಲ, ನಿಜ. ಸ್ಮರಣ ಸಂಚಿಕೆಗಳ ಉದ್ದಿಶ್ಯ ಚರಿತ್ರೆ ಬರೆಯುವುದಲ್ಲವಾದರೂ ಸಂಘ ಪರಿವಾರದೊಂದಿಗೆ ಸಾಗಿಬಂದ ಕನ್ನಡ ಕುಟುಂಬಗಳ ಪಯಣವನ್ನು ದಾಖಲೆ ಮಾಡುವವರು ಯಾರು? ಅದನ್ನು ಪ್ರಕಟಿಸುವವರು ಯಾರು?
ಐದಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನ ನಡೆಸುವ ಅಕ್ಕ ಬಳಗ ಇಂಥದೊಂದು ಕೃತಿಯನ್ನು ಪ್ರಾಜೆಕ್ಟ್ ಮಾದರಿಯಲ್ಲಿ ಕೈಗೆತ್ತಿಕೊಳ್ಳದಿರುವುದು ಒಂದು ಲೋಪ. ಒಂದು ಸಂಘದ ಚರಿತ್ರೆಗೆ 6 ಪುಟದಂತೆ ಲೆಕ್ಕಹಾಕಿ 32 ಸಂಘಗಳ ಸಾಂಸ್ಥಿಕ ಚರಿತ್ರೆಯನ್ನು ದಾಖಲಿಸುವ ಯೋಜನೆಯನ್ನು ಅಕ್ಕ ಈಗಲಾದರೂ ಹಾಕಿಕೊಳ್ಳಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. 200 ಪುಟಗಳ ಅಂಥ ಕೃತಿಯನ್ನು ಬರೆಯುವುದಕ್ಕೆ ಅನುಭವ, ಭಾಷೆ, ಸಮತೋಲನ ಇರುವ ಒಬ್ಬ ಅಮೆರಿಕ ವಾಸಿ ಬರಹಗಾರನನ್ನು ನೇಮಿಸಬೇಕು. ಒಂದು ಪುಸ್ತಕಕ್ಕೆ 10 ಡಾಲರು ಮುಖಬೆಲೆ ಇಡಿ. ಹತ್ತು ಸಾವಿರ ಪ್ರತಿ ಮುದ್ರಿಸಿ ಮಾರಾಟಕ್ಕಿಡಿ. ಡೋನಟ್ಟುಗಳ ಥರ ಮಾರಾಟವಾಗಿ ಅಕ್ಕ ಬೊಕ್ಕಸಕ್ಕೆ ಕನಿಷ್ಠ 50,000 ಡಾಲರು ಆದಾಯ ಬರದಿದ್ದರೆ ಆಗ ನಮ್ಮನ್ನು ಕೇಳಿ.
ಈ ಹಣ ಇಟ್ಟುಕೊಂಡು ಏನು ಮಾಡಬೇಕು? ಬರಲಿರುವ ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ಅಥವಾ ಅದರ ಮುಂದೆ 2012ರಲ್ಲಿ ಬರುವ ಸಮ್ಮೇಳನದ ಮೊದಲ ದಿನ, ಮೂರು ದಿನಗಳ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಪರಿಪಾಠವಿದೆಯಷ್ಟೆ. ಆ ಹೊತ್ತು ಅಲ್ಲಿ ವಾಡಿಕೆಯಂತೆ ಹಚ್ಚೇವು ಕನ್ನಡದ ದೀಪ ಗೀತೆಯ ಸಮೂಹಗಾನ ಇದ್ದೇ ಇರುತ್ತದೆ. ಪುಸ್ತಕ ಮಾರಿಬಂದ ಹಣದಿಂದ ವೇದಿಕೆಯ ಮೇಲೆ ಹೊಳೆಯುವ ನೀಲಾಜನಗಳಿಗೆ ತುಪ್ಪ ತುಂಬಿಸಿದರೆ ಹೇಗಿರತ್ತೆ? ರಾಜಕಾರಣಿಗಳು ನೀಡುವ ದೇಣಿಗೆಯಿಂದ ಹ್ಯಾಲೋಜಿನ್ ದೀಪಗಳು ಝಗಝಗಿಸುತ್ತವೆ. ಆದರೆ, ಕನ್ನಡದ ಮಮತೆಯನ್ನೂ, ಕನ್ನಡಿಗರನ್ನೂ ಭಾವನಾತ್ಮಕವಾಗಿ ಶಾಶ್ವತವಾಗಿ ಬೆಸೆಯುವ ಇಂಥ ಹಾಲು ಜೇನು ಪ್ರಯತ್ನಗಳನ್ನು ಇನ್ನಾದರೂ ಮಾಡದಿದ್ದರೆ ಬಂದಾದರೂ ಏನು ಪ್ರಯೋಜನ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications