ಅಮೆರಿಕ ಕನ್ನಡ ಸಂಘಗಳ ಚಾರಿತ್ರಿಕ ದಾಖಲೆ

ಪಂಪ ಆರಂಭವಾದ ಅನತಿಕಾಲದಲ್ಲೇ ಜನ್ಮತಾಳಿದ್ದು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಅಸೋಸಿಯೇಷನ್. ಇತರ ರಾಜ್ಯಗಳಲ್ಲಿ ಕಾಲಕಾಲಕ್ಕೆ ಕನ್ನಡಿಗರ ಜನಸಾಂದ್ರತೆ ಹೆಚ್ಚಾದಂತೆ ಸಂಘಗಳು ಜನ್ಮತಾಳುತ್ತಾ ಬಂದವು. ಕನ್ನಡ ಕುಟುಂಬಗಳಿಗೆ ಒಂದು ವೇದಿಕೆ ಕಲ್ಪಿಸಿಕೊಡುವಲ್ಲಿ ಸಾಫಲ್ಯ ಕಂಡುಕೊಳ್ಳುವುದೇ ಪ್ರತಿಯೊಂದೂ ಸಂಘಗಳ ಮೂಲ ಉದ್ದೇಶ. ಈ ಎಲ್ಲ ಸಂಘಗಳ ಹುಟ್ಟು ಬೆಳವಣಿಗೆ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ವಿವರಗಳು ಬೇಕು. ಎಲ್ಲಿವೆ? ಯಾರು ಕಟ್ಟಿಕೊಡುತ್ತಾರೆ? ಶ್ರಮ ಮತ್ತು ವಾತ್ಸಲ್ಯದಿಂದ ತಾವು ಕಟ್ಟಿದ ಕನ್ನಡ ಸಂಘಗಳ ಇತಿಹಾಸ ಕಳೆದು ಹೋಗುತ್ತದಾ? ಎಂಬ ಪ್ರಶ್ನೆಯನ್ನು ಅನೇಕ ಹಿರಿಯ ಅಮೆರಿಕನ್ನಡಿಗರು ನಮ್ಮ ಡಾಟ್ ಕಾಂ ಮುಂದೆ ಇಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಬಿಡಿ ಲೇಖನಗಳು ಹರಿಹರೇಶ್ವರ ಅವರು ಸಂಪಾದಿಸುತ್ತಿದ್ದ ಅಮೆರಿಕನ್ನಡ ಪತ್ರಿಕೆಯಲ್ಲಿ ಹಾಗೂ ಹ್ಯೂಸ್ಟನ್ ಸಮ್ಮೇಳನದ ಸ್ಮರಣ ಗ್ರಂಥ 'ದರ್ಶನ' ದಲ್ಲಿ ಎಂಎಸ್ ನಟರಾಜ್ ಅವರ ಕನ್ನಡ ಸಂಘ ನಡೆದುಬಂದ ದಾರಿಯ ಕಥಾನಕಗಳು ಬೆಳಕು ಕಂಡಿವೆ. ಅವೆಲ್ಲ ಇವತ್ತು ಚದುರಿದ ಚಿತ್ರಗಳಂತೆ ಕಾಣಿಸುತ್ತವೆ.
ಅಮೆರಿಕನ್ನಡಿಗ ಎಂದ ಕೂಡಲೇ ಅಕ್ಕ ಹೆಸರು ನೆನಪಾಗುವ ಈ ಕಾಲಘಟ್ಟದಲ್ಲಿ ಅಮೆರಿಕಾ ಕನ್ನಡ ಸಂಘಗಳ ಸಮಗ್ರ ಚರಿತ್ರೆ ಸಂಪುಟವನ್ನು ಅಕ್ಕ ವತಿಯಿಂದಲೇ ನಿರೀಕ್ಷಿಸುವುದು ತಪ್ಪಾಗುವುದಿಲ್ಲ. ಎರಡು ವರ್ಷಕ್ಕೊಮ್ಮೆ ಅಕ್ಕ ಸಮ್ಮೇಳನ ನಡೆಯತ್ತೆ, ನಿಜ. ಸಮ್ಮೇಳನದ ನೆನಪಿಗೆ ಸ್ಮರಣ ಸಂಚಿಕೆಗಳೂ ಸಿದ್ಧವಾಗುತ್ತವೆ, ನಿಜ. ಈ ವರೆಗೆ ನಾವು ಕಂಡ ಸ್ಮರಣ ಸಂಚಿಕೆಗಳು ಬಿಡಿಬಿಡಿ ಲೇಖನಗಳ ಮಾಲೆಯಾಗಿ ಬೈಂಡಿಗ್ ಆಗಿವೆಯೇ ವಿನಾ, ಅವುಗಳಿಗೆ ಒಂದು ಚರಿತ್ರೆಯ ಸತ್ವ ಬಂದಿಲ್ಲ, ನಿಜ. ಸ್ಮರಣ ಸಂಚಿಕೆಗಳ ಉದ್ದಿಶ್ಯ ಚರಿತ್ರೆ ಬರೆಯುವುದಲ್ಲವಾದರೂ ಸಂಘ ಪರಿವಾರದೊಂದಿಗೆ ಸಾಗಿಬಂದ ಕನ್ನಡ ಕುಟುಂಬಗಳ ಪಯಣವನ್ನು ದಾಖಲೆ ಮಾಡುವವರು ಯಾರು? ಅದನ್ನು ಪ್ರಕಟಿಸುವವರು ಯಾರು?
ಐದಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನ ನಡೆಸುವ ಅಕ್ಕ ಬಳಗ ಇಂಥದೊಂದು ಕೃತಿಯನ್ನು ಪ್ರಾಜೆಕ್ಟ್ ಮಾದರಿಯಲ್ಲಿ ಕೈಗೆತ್ತಿಕೊಳ್ಳದಿರುವುದು ಒಂದು ಲೋಪ. ಒಂದು ಸಂಘದ ಚರಿತ್ರೆಗೆ 6 ಪುಟದಂತೆ ಲೆಕ್ಕಹಾಕಿ 32 ಸಂಘಗಳ ಸಾಂಸ್ಥಿಕ ಚರಿತ್ರೆಯನ್ನು ದಾಖಲಿಸುವ ಯೋಜನೆಯನ್ನು ಅಕ್ಕ ಈಗಲಾದರೂ ಹಾಕಿಕೊಳ್ಳಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. 200 ಪುಟಗಳ ಅಂಥ ಕೃತಿಯನ್ನು ಬರೆಯುವುದಕ್ಕೆ ಅನುಭವ, ಭಾಷೆ, ಸಮತೋಲನ ಇರುವ ಒಬ್ಬ ಅಮೆರಿಕ ವಾಸಿ ಬರಹಗಾರನನ್ನು ನೇಮಿಸಬೇಕು. ಒಂದು ಪುಸ್ತಕಕ್ಕೆ 10 ಡಾಲರು ಮುಖಬೆಲೆ ಇಡಿ. ಹತ್ತು ಸಾವಿರ ಪ್ರತಿ ಮುದ್ರಿಸಿ ಮಾರಾಟಕ್ಕಿಡಿ. ಡೋನಟ್ಟುಗಳ ಥರ ಮಾರಾಟವಾಗಿ ಅಕ್ಕ ಬೊಕ್ಕಸಕ್ಕೆ ಕನಿಷ್ಠ 50,000 ಡಾಲರು ಆದಾಯ ಬರದಿದ್ದರೆ ಆಗ ನಮ್ಮನ್ನು ಕೇಳಿ.
ಈ ಹಣ ಇಟ್ಟುಕೊಂಡು ಏನು ಮಾಡಬೇಕು? ಬರಲಿರುವ ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ಅಥವಾ ಅದರ ಮುಂದೆ 2012ರಲ್ಲಿ ಬರುವ ಸಮ್ಮೇಳನದ ಮೊದಲ ದಿನ, ಮೂರು ದಿನಗಳ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಪರಿಪಾಠವಿದೆಯಷ್ಟೆ. ಆ ಹೊತ್ತು ಅಲ್ಲಿ ವಾಡಿಕೆಯಂತೆ ಹಚ್ಚೇವು ಕನ್ನಡದ ದೀಪ ಗೀತೆಯ ಸಮೂಹಗಾನ ಇದ್ದೇ ಇರುತ್ತದೆ. ಪುಸ್ತಕ ಮಾರಿಬಂದ ಹಣದಿಂದ ವೇದಿಕೆಯ ಮೇಲೆ ಹೊಳೆಯುವ ನೀಲಾಜನಗಳಿಗೆ ತುಪ್ಪ ತುಂಬಿಸಿದರೆ ಹೇಗಿರತ್ತೆ? ರಾಜಕಾರಣಿಗಳು ನೀಡುವ ದೇಣಿಗೆಯಿಂದ ಹ್ಯಾಲೋಜಿನ್ ದೀಪಗಳು ಝಗಝಗಿಸುತ್ತವೆ. ಆದರೆ, ಕನ್ನಡದ ಮಮತೆಯನ್ನೂ, ಕನ್ನಡಿಗರನ್ನೂ ಭಾವನಾತ್ಮಕವಾಗಿ ಶಾಶ್ವತವಾಗಿ ಬೆಸೆಯುವ ಇಂಥ ಹಾಲು ಜೇನು ಪ್ರಯತ್ನಗಳನ್ನು ಇನ್ನಾದರೂ ಮಾಡದಿದ್ದರೆ ಬಂದಾದರೂ ಏನು ಪ್ರಯೋಜನ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications