‘ಸುವರ್ಣವಾಹಿನಿ’ ಮುಖಪುಟ
''ಬಂಗಾರವ ಎರಕ ಹೊಯ್ದು ಮೈಯ ಮಾಡಿದನೇ... ಸಿಂಗಾರಕ್ಕೆ ಕಳಶ ಇರಿಸಿ ಅಮೃತ ತುಂಬಿದನೇ..."" ಅಂತೊಂದು ಚಿತ್ರಗೀತೆಯಿದೆ. ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ 'ಸುವರ್ಣ ವಾಹಿನಿ"ಯ ಬಗ್ಗೆ ಅದೇ ಮಾತುಗಳನ್ನು ಹೇಳಬಹುದು!
ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ರಾಜ್ಯವು ಸ್ವರ್ಣಸಂಭ್ರಮದಲ್ಲಿರುವಾಗಲೇ ಆಯೋಜಿತವಾಗಿರುವ ಈ ಸಮ್ಮೇಳನದ ಸ್ಮರಣ ಸಂಚಿಕೆಗೆ ಸೂಕ್ತವಾದ ಮತ್ತು ಅರ್ಥಪೂರ್ಣವಾದ ' ಸುವರ್ಣ ವಾಹಿನಿ" ಎಂಬ ಹೆಸರನ್ನಿಡಲಾಗಿದೆ. ಒಳಗಿನ ಹೂರಣ ಅಕ್ಷರಗಳಿಂದಾದ ಅಮೃತವೆಂಬುದು ಸಂಚಿಕೆ ಕೈಸೇರಿದಾಗ ಓದುಗನ ಅನುಭವಕ್ಕೆ ಬರಬಹುದು.
ಈ ಬಾರಿಯ ಸಮ್ಮೇಳನದ ಸ್ಮರಣಸಂಚಿಕೆಯ ವೈಶಿಷ್ಟ್ಯವೆಂದರೆ ನೋಂದಣಿ ಮಾಡಿರುವ ಪ್ರತಿಯೊಬ್ಬರಿಗೂ (ಒಂದು ಕುಟುಂಬಕ್ಕೆ ಒಂದು) ' ಸುವರ್ಣ ವಾಹಿನಿ" ಮುಖ್ಯ ಸಂಚಿಕೆಯ ಜತೆಯಲ್ಲೇ ಸಣ್ಣಕಥೆಗಳ ಸಂಕಲನದ 'ಕಥಾ ವಾಹಿನಿ", ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನಗಳ ಸಂಕಲನ 'ತಂತ್ರ-ವಿಜ್ಞಾನ ವಾಹಿನಿ" ಮತ್ತು ಕಾದಂಬರಿ ಸ್ಪರ್ಧೆಯಲ್ಲಿ ವಿಜೇತ 'ಭರದ್ವಾಜ" ಕಾದಂಬರಿ - ಹೀಗೆ ಮೂರು ಇತರ ಪುಸ್ತಕಗಳೂ ದೊರೆಯುತ್ತವೆ.

ಸ್ಮರಣಸಂಚಿಕೆಗಳ ಸಂಪಾದಕ ಮಂಡಳಿಯ ನೇತೃತ್ವ ವಹಿಸಿದವರು ಡಾ।ಮೈ.ಶ್ರೀ.ನಟರಾಜ. ಪ್ರಧಾನ ಸಂಪಾದಕರು ಸಂಜೀವ ಮನಗೋಳಿ. ಸ್ಮರಣಸಂಚಿಕೆಗೆ ಕರ್ನಾಟಕದಲ್ಲಿ ಸಂಯೋಜಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದವರು ಶಿಕಾರಿಪುರ ಹರಿಹರೇಶ್ವರ. ರಕ್ಷಾಕವಚದ ವಿನ್ಯಾಸಕಾರ ಜನಾರ್ಧನ ಸ್ವಾಮಿ (ಕ್ಯಾಲಿಫೊರ್ನಿಯಾ). ಈ ಸಲದ ಸಂಚಿಕೆಯೂ ಸೇರಿದಂತೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಮರಣಸಂಚಿಕೆಗಳ ಮುಖಪುಟವಿನ್ಯಾಸದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ ಜನಾರ್ಧನ ಸ್ವಾಮಿ.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected]
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications