Get Updates
Get notified of breaking news, exclusive insights, and must-see stories!

‘ಸುವರ್ಣವಾಹಿನಿ’ ಮುಖಪುಟ

''ಬಂಗಾರವ ಎರಕ ಹೊಯ್ದು ಮೈಯ ಮಾಡಿದನೇ... ಸಿಂಗಾರಕ್ಕೆ ಕಳಶ ಇರಿಸಿ ಅಮೃತ ತುಂಬಿದನೇ..."" ಅಂತೊಂದು ಚಿತ್ರಗೀತೆಯಿದೆ. ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ 'ಸುವರ್ಣ ವಾಹಿನಿ"ಯ ಬಗ್ಗೆ ಅದೇ ಮಾತುಗಳನ್ನು ಹೇಳಬಹುದು!

ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ರಾಜ್ಯವು ಸ್ವರ್ಣಸಂಭ್ರಮದಲ್ಲಿರುವಾಗಲೇ ಆಯೋಜಿತವಾಗಿರುವ ಈ ಸಮ್ಮೇಳನದ ಸ್ಮರಣ ಸಂಚಿಕೆಗೆ ಸೂಕ್ತವಾದ ಮತ್ತು ಅರ್ಥಪೂರ್ಣವಾದ ' ಸುವರ್ಣ ವಾಹಿನಿ" ಎಂಬ ಹೆಸರನ್ನಿಡಲಾಗಿದೆ. ಒಳಗಿನ ಹೂರಣ ಅಕ್ಷರಗಳಿಂದಾದ ಅಮೃತವೆಂಬುದು ಸಂಚಿಕೆ ಕೈಸೇರಿದಾಗ ಓದುಗನ ಅನುಭವಕ್ಕೆ ಬರಬಹುದು.

ಈ ಬಾರಿಯ ಸಮ್ಮೇಳನದ ಸ್ಮರಣಸಂಚಿಕೆಯ ವೈಶಿಷ್ಟ್ಯವೆಂದರೆ ನೋಂದಣಿ ಮಾಡಿರುವ ಪ್ರತಿಯೊಬ್ಬರಿಗೂ (ಒಂದು ಕುಟುಂಬಕ್ಕೆ ಒಂದು) ' ಸುವರ್ಣ ವಾಹಿನಿ" ಮುಖ್ಯ ಸಂಚಿಕೆಯ ಜತೆಯಲ್ಲೇ ಸಣ್ಣಕಥೆಗಳ ಸಂಕಲನದ 'ಕಥಾ ವಾಹಿನಿ", ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನಗಳ ಸಂಕಲನ 'ತಂತ್ರ-ವಿಜ್ಞಾನ ವಾಹಿನಿ" ಮತ್ತು ಕಾದಂಬರಿ ಸ್ಪರ್ಧೆಯಲ್ಲಿ ವಿಜೇತ 'ಭರದ್ವಾಜ" ಕಾದಂಬರಿ - ಹೀಗೆ ಮೂರು ಇತರ ಪುಸ್ತಕಗಳೂ ದೊರೆಯುತ್ತವೆ.

World Kannada Conference souvenir Suvarna Vahini

ಸ್ಮರಣಸಂಚಿಕೆಗಳ ಸಂಪಾದಕ ಮಂಡಳಿಯ ನೇತೃತ್ವ ವಹಿಸಿದವರು ಡಾ।ಮೈ.ಶ್ರೀ.ನಟರಾಜ. ಪ್ರಧಾನ ಸಂಪಾದಕರು ಸಂಜೀವ ಮನಗೋಳಿ. ಸ್ಮರಣಸಂಚಿಕೆಗೆ ಕರ್ನಾಟಕದಲ್ಲಿ ಸಂಯೋಜಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದವರು ಶಿಕಾರಿಪುರ ಹರಿಹರೇಶ್ವರ. ರಕ್ಷಾಕವಚದ ವಿನ್ಯಾಸಕಾರ ಜನಾರ್ಧನ ಸ್ವಾಮಿ (ಕ್ಯಾಲಿಫೊರ್ನಿಯಾ). ಈ ಸಲದ ಸಂಚಿಕೆಯೂ ಸೇರಿದಂತೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಮರಣಸಂಚಿಕೆಗಳ ಮುಖಪುಟವಿನ್ಯಾಸದಲ್ಲಿ ಹ್ಯಾಟ್ರಿಕ್‌ ಸಾಧಿಸಿದ್ದಾರೆ ಜನಾರ್ಧನ ಸ್ವಾಮಿ.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+