‘ಸುವರ್ಣವಾಹಿನಿ’ ಮುಖಪುಟ
''ಬಂಗಾರವ ಎರಕ ಹೊಯ್ದು ಮೈಯ ಮಾಡಿದನೇ... ಸಿಂಗಾರಕ್ಕೆ ಕಳಶ ಇರಿಸಿ ಅಮೃತ ತುಂಬಿದನೇ..."" ಅಂತೊಂದು ಚಿತ್ರಗೀತೆಯಿದೆ. ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ 'ಸುವರ್ಣ ವಾಹಿನಿ"ಯ ಬಗ್ಗೆ ಅದೇ ಮಾತುಗಳನ್ನು ಹೇಳಬಹುದು!
ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ರಾಜ್ಯವು ಸ್ವರ್ಣಸಂಭ್ರಮದಲ್ಲಿರುವಾಗಲೇ ಆಯೋಜಿತವಾಗಿರುವ ಈ ಸಮ್ಮೇಳನದ ಸ್ಮರಣ ಸಂಚಿಕೆಗೆ ಸೂಕ್ತವಾದ ಮತ್ತು ಅರ್ಥಪೂರ್ಣವಾದ ' ಸುವರ್ಣ ವಾಹಿನಿ" ಎಂಬ ಹೆಸರನ್ನಿಡಲಾಗಿದೆ. ಒಳಗಿನ ಹೂರಣ ಅಕ್ಷರಗಳಿಂದಾದ ಅಮೃತವೆಂಬುದು ಸಂಚಿಕೆ ಕೈಸೇರಿದಾಗ ಓದುಗನ ಅನುಭವಕ್ಕೆ ಬರಬಹುದು.
ಈ ಬಾರಿಯ ಸಮ್ಮೇಳನದ ಸ್ಮರಣಸಂಚಿಕೆಯ ವೈಶಿಷ್ಟ್ಯವೆಂದರೆ ನೋಂದಣಿ ಮಾಡಿರುವ ಪ್ರತಿಯೊಬ್ಬರಿಗೂ (ಒಂದು ಕುಟುಂಬಕ್ಕೆ ಒಂದು) ' ಸುವರ್ಣ ವಾಹಿನಿ" ಮುಖ್ಯ ಸಂಚಿಕೆಯ ಜತೆಯಲ್ಲೇ ಸಣ್ಣಕಥೆಗಳ ಸಂಕಲನದ 'ಕಥಾ ವಾಹಿನಿ", ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನಗಳ ಸಂಕಲನ 'ತಂತ್ರ-ವಿಜ್ಞಾನ ವಾಹಿನಿ" ಮತ್ತು ಕಾದಂಬರಿ ಸ್ಪರ್ಧೆಯಲ್ಲಿ ವಿಜೇತ 'ಭರದ್ವಾಜ" ಕಾದಂಬರಿ - ಹೀಗೆ ಮೂರು ಇತರ ಪುಸ್ತಕಗಳೂ ದೊರೆಯುತ್ತವೆ.

ಸ್ಮರಣಸಂಚಿಕೆಗಳ ಸಂಪಾದಕ ಮಂಡಳಿಯ ನೇತೃತ್ವ ವಹಿಸಿದವರು ಡಾ।ಮೈ.ಶ್ರೀ.ನಟರಾಜ. ಪ್ರಧಾನ ಸಂಪಾದಕರು ಸಂಜೀವ ಮನಗೋಳಿ. ಸ್ಮರಣಸಂಚಿಕೆಗೆ ಕರ್ನಾಟಕದಲ್ಲಿ ಸಂಯೋಜಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದವರು ಶಿಕಾರಿಪುರ ಹರಿಹರೇಶ್ವರ. ರಕ್ಷಾಕವಚದ ವಿನ್ಯಾಸಕಾರ ಜನಾರ್ಧನ ಸ್ವಾಮಿ (ಕ್ಯಾಲಿಫೊರ್ನಿಯಾ). ಈ ಸಲದ ಸಂಚಿಕೆಯೂ ಸೇರಿದಂತೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಮರಣಸಂಚಿಕೆಗಳ ಮುಖಪುಟವಿನ್ಯಾಸದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ ಜನಾರ್ಧನ ಸ್ವಾಮಿ.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected]
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications