ಪೋಸ್ಟ್ ಮ್ಯಾನ್, ಪತ್ರ ಯಾವ್ದಾದ್ರೂ ಬಂದಿದೆಯಾ?

ಶಂಕ್ರಣ್ಣ ಯಾವದಾದ್ರು ಕಾಗದ ಬಂದೈತಾ? ಅಂತಾ ಪೋಸ್ಟ್ ಮ್ಯಾನ್ ಶಂಕ್ರಣ್ಣನನ್ನು ಕೇಳಿದಾಗ, ಮೇಲಿಂದ ಕೆಳಗಿನ ತನಕ ಅವ ನನ್ನ ನೋಡಿ... "ಎನಲೇ ನಾಗೇಶ? ಚೋಟುದ್ದ ಇದ್ದೀಯ. ಯಾರಲೇ ನಿಂಗೆ ಪತ್ರ ಬರಿತಾರೆ? ಮಾವನ ಮಗಳು ಯಾರಾರ ಇದಾರೇನು ಅಂತಾ?" ಹಾಸ್ಯ ಮಾಡಿದಾಗ, ಏನು ಹೇಳಬೇಕೆಂದು ತೋಚದೆ ಪೆಚ್ಚಾಗಿದ್ದೆ.
"ಉಸ್ಸಪ್ಪ ಈ ಸೈಕಲ್ ತುಳಿದು ತುಳಿದು ಸಾಕಾಯ್ತು. ಅಬ್ಬಬ್ಬ ಏನು ಸುಡು ಬಿಸಿಲು" ಎಂದು ಗೊಣಗಿಕೊಳ್ಳುತ್ತ, ಕರ್ಚಿಪಿನಿಂದ ಮುಖ ಒರೆಸಿಕೊಳ್ಳುತ್ತಾ ಪೋಸ್ಟ್ ಮ್ಯಾನ್ ಶಂಕ್ರಣ್ಣ ಪಕ್ಕದ ಮನೆಯ ಬಸಣ್ಣನಿಗೆ ಬಂದ ಪತ್ರವನ್ನು ಕೊಟ್ಟಾಗ, "ಹಂಗೆ ಸ್ವಲ್ಪ ಓದಿ ಹೇಳಪ್ಪ ಏನು ಬರದಾರೆ" ಅಂತ ಬಸಣ್ಣ ಪೋಸ್ಟ್ ಮ್ಯಾನ್ಗೇ ಹೇಳಿದ. ಇದು ಬೇರೆ ಅಂತ ಗೊಣಗುತ್ತ ಅವ ಓದಿ ಹೇಳಿದ್ದ. ಅವ ಓದಿ ಮುಗಿಸೋದರಲ್ಲಿ ತಂದಿಟ್ಟಿದ್ದ ಮಂದವಾದ ಮಜ್ಜಿಗೆಯನ್ನು ಚಂದವಾಗಿ ಹೀರಿ ಮುಂದಕ್ಕೆ ಹೋದ ಪೋಸ್ಟ್ ಮ್ಯಾನ್ ಸೈಕಲ್ ಅನ್ನೇ ನೋಡುತ್ತಾ ನಿಂತಿದ್ದ ನಂಗೆ, ಮಗ್ಗಿ ಹೇಳೋದು ಆಯಿತೇನೋ? ಅಂತಾ ಅಮ್ಮನ ಧ್ವನಿ ಕೇಳಿ ಮತ್ತೆ ಒಳಗಡೆ ಹೋಗಿ ಕೂತಿದ್ದೆ.
ಸ್ಕೂಲ್ ನಲ್ಲಿ ಟೀಚರ್ ಲೆಟರ್ ರೈಟಿಂಗ್ ಹೇಳಿಕೊಟ್ಟಾಗ ಮನೆಗೆ ಬಂದು ಚೆನ್ನಾಗಿ ಬರೆಯುವುದ ಅಭ್ಯಾಸ ಮಾಡಿದ್ದು ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಬಂದಾಗ ಅನುಕೂಲವಾಗಿತ್ತು.
"ತೀರ್ಥರೂಪ ತಂದೆ - ತಾಯಿಯವರಿಗೆ, ನಿಮ್ಮ ಪ್ರೀತಿಯ ಮಗ ನಾಗೇಶಿ ಮಾಡುವ ಶಿರ ಸಾಷ್ಟಾಂಗ ನಮಸ್ಕಾರಗಳು"... ಮೊದಲ ಬಾರಿಗೆ ಬರೆದ ಈ ಪತ್ರವನ್ನು ಆ ಕೆಂಪು ಡಬ್ಬದಲ್ಲಿ ಹಾಕುವಾಗ ಅಮ್ಮ- ಅಪ್ಪನ ನೆನಪಾಗಿ ಹಾಗೇ ಪತ್ರಕ್ಕೆ ಹಣೆಯೊತ್ತಿದ್ದೆ. ನನ್ನ ಪತ್ರವನ್ನು ಓದಿ ಅವರಿಗಾದ ಆನಂದ ಅಷ್ಟಿಷ್ಟಲ್ಲ. ಮರು ವಾರವೇ ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದಿದ್ದರು ನನ್ನ ನೋಡಲು. ಅವರು ತಂದಿದ್ದ ಆ ಬುತ್ತಿ, ಚಪಾತಿ, ರವೆ ಉಂಡೆ ಹೂಂ :) ಭರ್ಜರಿಯಾಗಿ ತಿಂದು ರೂಂನಲ್ಲಿ ಜೊತೆಗಿದ್ದ ಹುಡುಗರಿಗೂ ಕೊಟ್ಟು ನಲಿದಿದ್ದೆ. ಒಂದೇ ಒಂದು ಪತ್ರದಿಂದ ಹೆತ್ತವರಿಗಾದ ಆ ಸಂತೋಷ, ಅವರ ಪ್ರೀತಿ ನೋಡಿ ನನ್ನ ಕಣ್ಣುಗಳು ತೇವವಾಗಿದ್ದವು. ಹಾಗೇ ಮುಂದುವರಿಸಿದ್ದೆ ನನ್ನ ಪತ್ರ ವ್ಯವಹಾರ ಹೆತ್ತವರೊಂದಿಗೆ.
ಹಾಗೂ ಹೀಗೂ ಹೈಸ್ಕೂಲ್, ಪಿಯುಸಿ ಮುಗಿಸಿ ಬೆಂಗಳೂರಿನಲ್ಲಿನ ಇಂಜಿನಿಯರಿಂಗ್ ಕಾಲೇಜ್ಗೆ ಸೇರಿದ್ದೆ. ಇದುವರೆಗೂ ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲೇ ಹುಟ್ಟಿ ಬೆಳೆದಿದ್ದ ನನಗೆ, ಈ ಕಾಲೇಜ್ನಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದಿದ್ದ ಹುಡುಗ ಹುಡುಗಿಯರು... ಬಣ್ಣ ಬಣ್ಣದ ಜೀನ್ಸ್ ಬಟ್ಟೆ ತೊಟ್ಟು ಹಂಸ ನಡಿಗೆಯಲ್ಲಿ ನಡೆದು ಬರುತ್ತಿದ್ದ ಆ ನಾರ್ತ್ ಇಂಡಿಯನ್ ಹುಡುಗಿಯರು, ಬುರ್ರ್ ಬುರ್ರ್ ಅಂತ ಧೂಳೆಬ್ಬೆಸಿ ಬೈಕಲ್ಲಿ ಹಿಂದುಗಡೆ ಹುಡುಗಿಯನ್ನು ಕೂರಿಸಿಕೊಂಡು ಹೀರೋಗಳ ತರಹ ಬರುತ್ತಿದ್ದ ಬೆಂಗಳೂರಿನ ಹುಡುಗರು... ಇವೆರನ್ನೆಲ್ಲ ನೋಡಿ ನನಗೂ ಜೀವನ ಕಲರ್ ಫುಲ್ ಆಗಿ ಕಾಣಿಸತೊಡಗಿತ್ತು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications