ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗಾಗಿ ಬಿಟ್ಟಳು...!

By * ಪ್ರಕಾಶ್ ರಾವ್ ಪಯ್ಯಾರ್
|
Google Oneindia Kannada News

Prakash Rao Payyar, Dubai
ಮರ ತುಂಬಾ ಎಲೆ
ಪ್ರತಿ ಎಲೆಗೊಂದೊಂದು ರೂಪ ನೆರಳು
ಬುಡ ತುಂಬಾ ಬೇರು
ಮೇಲೆ ಹುಳುಕು ಮುಚ್ಚಲು ಕಟ್ಟೆ

ಅಶ್ವತ್ಥದ ಕಟ್ಟೆಗೆ
ಪ್ರದಕ್ಷಿಣೆ ಮಾಡಿ
ನಮಸ್ಕಾರ ಮಾಡುತಿದ್ದ
ಅವಳು ಬಸಿರಾಗಿದ್ದಳು

ಸೂರ್ಯನತ್ತಲೆ ಮುಖ ಮಾಡಿ
ದೃಷ್ಟಿ ಬದಲಾಯಿಸಿ ಇವಳತ್ತ ನೋಡಿ
ನದಿಯಲ್ಲಿ ಮುಳುಗೇಳುತಿದ್ದ
ಪಡ್ಡೆ ಹುಡುಗರು ದಂಗಾಗಿದ್ದರು

ಸುದ್ದಿ ತಿಳಿದಾಗೆಲ್ಲ ಒಬ್ಬರ ಮೇಲೊಬ್ಬ
ಯುವಕರ ನಡುವೆ ಸಂಶಯ
ಅಪರಿಚಿತ ಹಿರಿಯರೆಂದರು
ಒಳ್ಳೆ ಹುಡುಗಿ ಹೀಗಾಗಿಬಿಟ್ಟಳು

ದೇಗುಲದ ಅರ್ಚಕರು, ಬಾಣಸಿಗರು
ಬಾವಿಕಟ್ಟೆ ಮೇಲೆ ಶುದ್ಧಿಕರಣಕೆ
ಜಲ ಎತ್ತುವಾಗ ತಮ್ಮ ಹುಳುಕು ಮುಚ್ಚಲು
ಕಚ್ಚೆ ಎತ್ತಿ ಕಟ್ಟಿ ಮತ್ತೆ ಅವಳದೆ ಚರ್ಚೆ

ಸಹಿಸಲಾರದ ಮಲ್ಲಿಗೆ ಅಂಗಡಿ ಮುದುಕಿ
ರಥ ಬೀದಿಯಲಿ ಕೇಳಿಯೇಬಿಟ್ಟಳು
ಹುಡುಗಿ ಅಂದಳು "ದಂಡಿಗೆ ಹೋದ ಗಂಡ
ಕಾಶ್ಮೀರದಿಂದ ಬರುತ್ತಾನೆ ವಾರದ ಒಳಗೆ"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X