ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಾಯುವಿಹಾರ
ಬರಹೇಳಿದ್ದ
ದುಷ್ಯಂತ.
ಮರದ
ಕೆಳಗೆ
ಕಾದಳು,
ಕಾದೇ
ಕಾದಳು
ಇವಳು.
ಬೆರಳಲ್ಲಿ
ಉಂಗುರ,
ಬಾನಲ್ಲಿ
ಚಂದಿರ.
ರಥವಿಲ್ಲದ
ಕುದುರೆಯಲ್ಲಿ
ಟಕಟಕಿಸುತ್ತ
ಬಂದ
ನಲ್ಲ
ಹತ್ತು-
ಎಂದ.
ಹಿಂದೆ-ಮುಂದೆ
ನೋಡದೆ,
ಕಣ್ವ-ಗೌತಮಿಯರ
ನೆನೆಯದೆ,
ಬೆನ್ನಿಗಂಟಿದಳು,
ಕಣ್ಣು
ಮುಚ್ಚಿದಳು.
ಗಾಳಿಯ
ಸುಗಂಧ
ಇವನದೇ.
ಕುದುರೆಯ
ವೇಗ
ಮನಸಿನದೇ.
ಎಚ್ಚರಾದಾಗ-
ಉಂಗುರ
ಮೀನಿನೊಳಗಿತ್ತು.
ಮುದಿಕುದುರೆ
ಕುಂಟುತ್ತಿತ್ತು.
ಮರದ
ಒಂಟಿ
ನೆರಳು
ಕಾದು
ಕಾದು...
ಕರಟಿತ್ತು.
ಭರತ
ನಗುತ್ತಿದ್ದ.
Comments
Story first published: Friday, January 4, 2008, 17:44 [IST]