ಒಡೆದು ಆರು ಹೋಳಾಗಲಿದೆಯಾ ಕ್ಯಾಲಿಫೋರ್ನಿಯಾ?
ಗೂಗಲ್, ಫೇಸ್ ಬುಕ್, ಆಪಲ್ ಸೇರಿದಂತೆ ದಿಗ್ಗಜ ಐಟಿ ಕಂಪನಿಗಳ ತವರಾಗಿರುವ 'ಗೋಲ್ಡನ್ ಸ್ಟೇಟ್' ಕ್ಯಾಲಿಫೋರ್ನಿಯಾಗೆ ತೆಲಂಗಾಣ ಜ್ವರ ಬಡಿದಂತಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯ ಕೂಡ ವಿಭಜನೆಯ ಹಂತ ತಲುಪಿದ್ದು, ಆಡಳಿತ ಸುಗಮವಾಗಿಸಲು ಮತ್ತು ಜನರಿಗೆ ಉತ್ತಮ ಸೌಲಭ್ಯ ನೀಡುವ ಉದ್ದೇಶದಿಂದ ಒಡೆದು ಆರು ಹೋಳಾಗುವ ಸಾಧ್ಯತೆಯಿದೆ.
ಕ್ಯಾಲಿಫೋರ್ನಿಯಾವನ್ನು ವಿಭಾಗಿಸಿ ಆರು ಚಿಕ್ಕ ರಾಜ್ಯಗಳನ್ನಾಗಿ ಮಾಡಿ, ಆರು ಸರಕಾರಗಳನ್ನು ರಚಿಸಿದರೆ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಾಂತ್ಯಗಳ ಜನರಿಗೆ ಉತ್ತಮ ಸೌಕರ್ಯಗಳು ಲಭಿಸಲಿವೆ ಎಂದು ಸಿಲಿಕಾನ್ ವ್ಯಾಲಿಯ ವೆಂಚರ್ ಕ್ಯಾಪಿಟಲಿಸ್ಟ್ ಟಿಮ್ ಡ್ರೇಪರ್ ಎಂಬುವವರು ಯೋಜನೆ ರೂಪಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಕುರಿತು ಕ್ಯಾಲಿಫೋರ್ನಿಯಾ ರಾಜ್ಯಾಡಳಿತಕ್ಕೆ ಫೆ.24ರಂದು ಪ್ರಸ್ತಾವನೆ ಸಲ್ಲಿಕೆಯಾಗಲಿದೆ.
ವಿಸ್ತಾರದಲ್ಲಿ ಅಲಾಸ್ಕಾ ಮತ್ತು ಟೆಕ್ಸಾಸ್ ನಂತರ ಮೂರನೇ ಸ್ಥಾನದಲ್ಲಿರುವ ಬೃಹತ್ ರಾಜ್ಯ ಕ್ಯಾಲಿಫೋರ್ನಿಯಾದಲ್ಲಿ 38 ಮಿಲಿಯನ್ (3 ಕೋಟಿ 80 ಲಕ್ಷ) ಜನರಿಗೆ ಆಶ್ರಯ ನೀಡಿದ್ದು, ಸಾಕಷ್ಟು ತೊಂದರೆಗಳನ್ನೂ ಎದುರಿಸುತ್ತಿದೆ. 1850ರಲ್ಲಿ ಸ್ಥಾಪನೆಯಾದಂದಿನಿಂದ ಮಾದರಿ ರಾಜ್ಯ ಎಂದು ಹೆಸರಾಗಿದ್ದ ಕ್ಯಾಲಿಫೋರ್ನಿಯಾ ಇಂದು ಅವ್ಯವಸ್ಥೆಯ ಆಗರವಾಗಿದೆ.
ಅನೇಕ ಪಬ್ಲಿಕ್ ಶಾಲೆಗಳು ತೊಂದರೆಯಲ್ಲಿವೆ, ಸಂಚಾರ ವ್ಯವಸ್ಥೆ ದಿಕ್ಕುತಪ್ಪಿದೆ, ನೀರು ಪೂರೈಕೆ ಮತ್ತು ಮೂಲಸೌಕರ್ಯ ಸಾಲುತ್ತಿಲ್ಲ, ಜೈಲುಗಳಿಗೆಗಾಗಿಯೇ ಯದ್ವಾತದ್ವಾ ಖರ್ಚು ಮಾಡಲಾಗುತ್ತಿದೆ. ಈ ರಾಜ್ಯವನ್ನು ವಿಭಾಗಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಡ್ರೇಪರ್ ಅವರ ಅಂಬೋಣ. ಕ್ಯಾಲಿಫೋರ್ನಿಯಾ ಸ್ಥಾಪನೆಯಂದಿನಿಂದ ಅನೇಕ ಬಾರಿ ವಿಭಾಗಿಸುವ ಮಾತುಗಳು ಕೇಳಿಬರುತ್ತಲೇ ಇವೆ.
"ಕ್ಯಾಲಿಫೋರ್ನಿಯಾ ವಿಭಜನೆಗಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದಿಲ್ಲ" ಎಂದು ಲಾಸ್ ಏಂಜಲಿಸ್ ನಲ್ಲಿರುವ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯದ ಪ್ಯಾಟ್ ಬ್ರೌನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಆಗಿರುವ ರಾಫೆಲ್ ಸೊನೆನ್ಶೀನ್ ಅವರು ಅಪಹಾಸ್ಯ ಮಾಡಿದ್ದಾರೆ. ಇದರಿಂದ ಯಾವುದೇ ಲಾಭವೂ ಇಲ್ಲ ಎಂದು ಷರಾ ಬರೆದಿದ್ದಾರೆ.
ಕ್ಯಾಲಿಪೋರ್ನಿಯಾ ವಿಭಜನೆಗೆ ಮತದಾರರು ಅಂಕಿತ ಹಾಕಿದರೂ, ಅಮೆರಿಕದ ಸಂವಿಧಾನದ ಪ್ರಕಾರ ಕಾಂಗ್ರೆಸ್ ಒಪ್ಪಿಗೆ ನೀಡಬೇಕಾಗುತ್ತದೆ. ಡ್ರೇಪರ್ ಅವರ ಪ್ರಸ್ತಾವನೆಯ ಪ್ರಕಾರ, ಹಲವಾರು ಐಟಿ ಕಂಪನಿಗಳಿರುವ ಸ್ಯಾನ್ ಫ್ರಾನ್ಸಿಸ್ಕೋ ಮತ್ತಿತರ ಹತ್ತಿರದ ಪ್ರಾಂತ್ಯಗಳು ಸೇರಿ ಸಿಲಿಕಾನ್ ವ್ಯಾಲಿ ಎಂಬ ಹೊರ ರಾಜ್ಯವೇ ಸ್ಥಾಪನೆಯಾಗಲಿದೆ. ಪಶ್ಚಿಮ ಕರಾವಳಿಯಲ್ಲಿರುವ ಸಾಂತಾ ಬಾರ್ಬರಾ ಮತ್ತು ವೆಂಚುರಾ ಸೇರಿ ಲಾಸ್ ಏಂಜಲಿಸ್ ಹೊಸ ರಾಜ್ಯ ಅಸ್ತಿತ್ವಕ್ಕೆ ಬರಲಿದೆ.
ಭಾರತದಲ್ಲಿ ಆಂಧ್ರಪ್ರದೇಶ ರಾಜ್ಯ ಹೋಳಾಗಿ ತೆಲಂಗಾಣ ಮತ್ತು ಸೀಮಾಂಧ್ರವಾಗಿವೆ. ಇದಕ್ಕಾಗಿ ಎರಡೂ ಪ್ರಾಂತ್ಯಗಳ ಜನರು ಬಡಿದಾಡಿದ್ದಾರೆ, ರಾಜಕೀಯ ಪಲ್ಲಟಗಳು ಸಂಭವಿಸಿವೆ, ಇಡೀ ಆಂಧ್ರವೇ ಹೊತ್ತಿ ಉರಿದಿದೆ, ಹಲವಾರು ಜನರು ಪ್ರಾಣತ್ಯಾಗ ಮಾಡಿದ್ದಾರೆ. ಇದರ ಹಿಂದೆ ಸಾಕಷ್ಟು ರಾಜಕೀಯವೂ ಇದೆ. ಅಮೆರಿಕದಲ್ಲಿ ಹೇಗೋ ಏನೋ?
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ













Click it and Unblock the Notifications