ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?
ಇಡೀ ಜೀವನಪೂರ್ತಿ ಒಂದಾಗಿ ಬಾಳೋಣ, ಏಳೇಳು ಜನುಮಕ್ಕೂ ಜೊತೆಯಾಗಿರೋಣ ಎಂಬುದು ಗಂಡ ಹೆಂಡತಿಯರು ಮದುವೆಯಾಗುವಾಗ ಕಾಣುವ ಕನಸು. ಆದರೆ, ಬದುಕಿನ ವಿಚಿತ್ರ ಹೇಗಿರುತ್ತೆ ನೋಡಿ. ಆ ಕನಸು ಛಿದ್ರಛಿದ್ರವಾಗುವ ಹಾಗೆ ಕಡಲ ಅಲೆಗಳು ಬಂದು ಅಪ್ಪಳಿಸಿಬಿಡುತ್ತವೆ. ನೀನೊಂದು ತೀರ, ನಾನೊಂದು ತೀರ, ಮನಸು ಮನಸು ದೂರ, ಪ್ರೀತಿ ಹೃದಯ ಭಾರ!
ಬದುಕಿನಲ್ಲಿ ಮುಂದೆ ಬರುವ ಕಷ್ಟ, ಸಂಕಟ, ನೋವು, ವಿರಹ, ವಿಪರ್ಯಾಸಗಳನ್ನು ಎದುರಿಸಲೇಬೇಕು. ಇನ್ನು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಬಂದಾಗ ಮುಂದೊದಗುವ ಪರಿಸ್ಥಿತಿಯನ್ನು ಹೇಗೋ ಎದುರಿಸುತ್ತಾರೆ. ಆದರೆ, ಜಗಳ, ಅಹಂಕಾರ ಪದಗಳ ಅರ್ಥವನ್ನು ಅರಿಯದ, ಪ್ರೀತಿಯೊಂದೇ ಸರ್ವಸ್ವ ಎಂದು ತಿಳಿದ ಆ ಪುಟ್ಟ ಮಗು ಇಂಥ ಅಪಸವ್ಯಗಳನ್ನು ಹೇಗೆ ಎದುರಿಸೀತು?

ಏನೇ ಆಗಲಿ, ಅಪ್ಪ ಅಮ್ಮನ ನಿಷ್ಕಲ್ಮಷ ಪ್ರೀತಿಯೊಂದನ್ನೇ ಬೇಡುವ ಮಗುವಿಗೆ ಅಷ್ಟೂ ಸಿಗದಿದ್ದರೆ ಹೇಗೆ? ಇಂಥದೇ ಸನ್ನಿವೇಶ ಇಟ್ಟುಕೊಂಡು, ಕೋರ್ಟಿನ ಅನುಮತಿಯಂತೆ ವರ್ಷಕ್ಕೆ ಒಂದು ಬಾರಿ ಮಾತ್ರ ಮಗಳನ್ನು ಭೇಟಿಯಾಗಲು ಓಡೋಡಿ ಬರುವ ಅಪ್ಪನ ಭೋರ್ಗರೆಯುವ ಪ್ರೀತಿಯನ್ನು ಬಿಂಬಿಸುವ 'ನಿನ್ನ ನೋಡಲೆಂದು' ಎಂಬ ವಿಡಿಯೋವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರೀಕರಿಸಲಾಗಿದೆ.
ಅಮೆರಿಕದ ಕನೆಕ್ಟಿಕಟ್ನ ನಾಗರಾಜ ಮಹೇಶ್ವರಪ್ಪ ಅವರು ಹಾಡು ರಚಿಸಿ, ಛಾಯಾಗ್ರಹಣ ಹೊಣೆ ಹೊತ್ತು, ಸಿಹಿ ಇಂಚರ ಪ್ರೊಡಕ್ಷನ್ ಮೂಲಕ ನಿರ್ಮಿಸಿರುವ ಈ ವಿಡಿಯೋ ಬಲು ಸೊಗಸಾಗಿದೆ ಮತ್ತು ಅದ್ಭುತವಾದ ಸಂದೇಶವನ್ನೂ ನೀಡಿದೆ. ಅಪ್ಪ ಮತ್ತು ಮಗಳ ಮಧುರ ಬಾಂಧವ್ಯದ ಬಗ್ಗೆ - ಸಿಹಿ ಇಂಚರ ಪ್ರೊಡಕ್ಷನ್ ಅವರ ತೃತೀಯ ಕೊಡುಗೆ... ನಿಮಗಾಗಿ! [ನೋಡುವಾ... ಹರೆಯದ ಜೋಡಿಯ ಪ್ರೇಮಲೋಕವಾ!]
ಅಪ್ಪನ ಪಾತ್ರವನ್ನು ಮಲ್ಲಿ ಸಣ್ಣಪ್ಪನವರ್ ಅವರು ನಿಭಾಯಿಸಿದ್ದರೆ, ಅಪ್ಪನ ಮುದ್ದು ಮಗಳಾಗಿ ಮಾನಸಿ ಸಣ್ಣಪ್ಪನವರ್ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ಮನಸು ಬೆಚ್ಚಗಾಗಿಸುವ, ನೋಡುತ್ತಿದ್ದಂತೆ ಕಣ್ಣಿನಂಚಿನಲ್ಲಿ ನೀರು ಜಿನುಗುವಂತೆ ಮಾಡುವ ವಿಡಿಯೋ ಕೆಳಗಿದೆ.
ಪಾತ್ರ ವರ್ಗ : ಮಲ್ಲಿ ಸಣ್ಣಪ್ಪನವರ್ ಹಾಗೂ ಮಾನಸಿ ಸಣ್ಣಪ್ಪನವರ್
ಮ್ಯೂಸಿಕ್ ಕಂಪೋಸರ್ : ಸೂರ್ಯ ಪ್ರಕಾಶ್
ಹಿನ್ನೆಲೆ ಗಾಯನ : ಚೇತನ್ ನಾಯಕ್ (Radiocity 91.1 super singer winner)
ಕೀಬೋರ್ಡ್ : ರೋಹಿತ್ ವಿಜಯನ್
ಗಿಟಾರ್ : ಬಾಲ ಮತ್ತು ರಾಕೇಶ್
Rhythm, Song Mixed & Mastered : ನಿತಿಶ್ ಓಕೆ
ರೆಕಾರ್ಡಿಂಗ್ ಸ್ಟುಡಿಯೋ : ಸ್ವರಾಗ್ ಸ್ಟುಡಿಯೋ, ಬೆಂಗಳೂರು
ವಿಡಿಯೋ ಶೂಟಿಂಗ್ : ಕನೆಕ್ಟಿಕಟ್, ಅಮೇರಿಕಾ
ನಿರ್ದೇಶನ : ದೀಪಾ.ಜಿ
ಹಾಡು ರಚನೆ, ಛಾಯಾಗ್ರಹಣ ಮತ್ತು ನಿರ್ಮಾಣ : ನಾಗರಾಜ ಎಂ.

"Special thanks to Deepa Pathak and Amit Pathak for always supporting upcoming talents in Connecticut "
ಯಾವುದೋ ಒಂದು ಕಾರಣಕ್ಕಾಗಿ ಕುಟುಂಬದಿಂದ ಬೇರೆಯಾಗಿ ಪರಿತಪಿಸುವ ಹೃದಯ... ಮಗುವಿಗಾದರೂ ಮತ್ತೆ ಒಂದಾಗಲು ಒಮ್ಮೆ ಯೋಚಿಸಲಿ....
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications