ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?
ಇಡೀ ಜೀವನಪೂರ್ತಿ ಒಂದಾಗಿ ಬಾಳೋಣ, ಏಳೇಳು ಜನುಮಕ್ಕೂ ಜೊತೆಯಾಗಿರೋಣ ಎಂಬುದು ಗಂಡ ಹೆಂಡತಿಯರು ಮದುವೆಯಾಗುವಾಗ ಕಾಣುವ ಕನಸು. ಆದರೆ, ಬದುಕಿನ ವಿಚಿತ್ರ ಹೇಗಿರುತ್ತೆ ನೋಡಿ. ಆ ಕನಸು ಛಿದ್ರಛಿದ್ರವಾಗುವ ಹಾಗೆ ಕಡಲ ಅಲೆಗಳು ಬಂದು ಅಪ್ಪಳಿಸಿಬಿಡುತ್ತವೆ. ನೀನೊಂದು ತೀರ, ನಾನೊಂದು ತೀರ, ಮನಸು ಮನಸು ದೂರ, ಪ್ರೀತಿ ಹೃದಯ ಭಾರ!
ಬದುಕಿನಲ್ಲಿ ಮುಂದೆ ಬರುವ ಕಷ್ಟ, ಸಂಕಟ, ನೋವು, ವಿರಹ, ವಿಪರ್ಯಾಸಗಳನ್ನು ಎದುರಿಸಲೇಬೇಕು. ಇನ್ನು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಬಂದಾಗ ಮುಂದೊದಗುವ ಪರಿಸ್ಥಿತಿಯನ್ನು ಹೇಗೋ ಎದುರಿಸುತ್ತಾರೆ. ಆದರೆ, ಜಗಳ, ಅಹಂಕಾರ ಪದಗಳ ಅರ್ಥವನ್ನು ಅರಿಯದ, ಪ್ರೀತಿಯೊಂದೇ ಸರ್ವಸ್ವ ಎಂದು ತಿಳಿದ ಆ ಪುಟ್ಟ ಮಗು ಇಂಥ ಅಪಸವ್ಯಗಳನ್ನು ಹೇಗೆ ಎದುರಿಸೀತು?

ಏನೇ ಆಗಲಿ, ಅಪ್ಪ ಅಮ್ಮನ ನಿಷ್ಕಲ್ಮಷ ಪ್ರೀತಿಯೊಂದನ್ನೇ ಬೇಡುವ ಮಗುವಿಗೆ ಅಷ್ಟೂ ಸಿಗದಿದ್ದರೆ ಹೇಗೆ? ಇಂಥದೇ ಸನ್ನಿವೇಶ ಇಟ್ಟುಕೊಂಡು, ಕೋರ್ಟಿನ ಅನುಮತಿಯಂತೆ ವರ್ಷಕ್ಕೆ ಒಂದು ಬಾರಿ ಮಾತ್ರ ಮಗಳನ್ನು ಭೇಟಿಯಾಗಲು ಓಡೋಡಿ ಬರುವ ಅಪ್ಪನ ಭೋರ್ಗರೆಯುವ ಪ್ರೀತಿಯನ್ನು ಬಿಂಬಿಸುವ 'ನಿನ್ನ ನೋಡಲೆಂದು' ಎಂಬ ವಿಡಿಯೋವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರೀಕರಿಸಲಾಗಿದೆ.
ಅಮೆರಿಕದ ಕನೆಕ್ಟಿಕಟ್ನ ನಾಗರಾಜ ಮಹೇಶ್ವರಪ್ಪ ಅವರು ಹಾಡು ರಚಿಸಿ, ಛಾಯಾಗ್ರಹಣ ಹೊಣೆ ಹೊತ್ತು, ಸಿಹಿ ಇಂಚರ ಪ್ರೊಡಕ್ಷನ್ ಮೂಲಕ ನಿರ್ಮಿಸಿರುವ ಈ ವಿಡಿಯೋ ಬಲು ಸೊಗಸಾಗಿದೆ ಮತ್ತು ಅದ್ಭುತವಾದ ಸಂದೇಶವನ್ನೂ ನೀಡಿದೆ. ಅಪ್ಪ ಮತ್ತು ಮಗಳ ಮಧುರ ಬಾಂಧವ್ಯದ ಬಗ್ಗೆ - ಸಿಹಿ ಇಂಚರ ಪ್ರೊಡಕ್ಷನ್ ಅವರ ತೃತೀಯ ಕೊಡುಗೆ... ನಿಮಗಾಗಿ! [ನೋಡುವಾ... ಹರೆಯದ ಜೋಡಿಯ ಪ್ರೇಮಲೋಕವಾ!]
ಅಪ್ಪನ ಪಾತ್ರವನ್ನು ಮಲ್ಲಿ ಸಣ್ಣಪ್ಪನವರ್ ಅವರು ನಿಭಾಯಿಸಿದ್ದರೆ, ಅಪ್ಪನ ಮುದ್ದು ಮಗಳಾಗಿ ಮಾನಸಿ ಸಣ್ಣಪ್ಪನವರ್ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ಮನಸು ಬೆಚ್ಚಗಾಗಿಸುವ, ನೋಡುತ್ತಿದ್ದಂತೆ ಕಣ್ಣಿನಂಚಿನಲ್ಲಿ ನೀರು ಜಿನುಗುವಂತೆ ಮಾಡುವ ವಿಡಿಯೋ ಕೆಳಗಿದೆ.
ಪಾತ್ರ ವರ್ಗ : ಮಲ್ಲಿ ಸಣ್ಣಪ್ಪನವರ್ ಹಾಗೂ ಮಾನಸಿ ಸಣ್ಣಪ್ಪನವರ್
ಮ್ಯೂಸಿಕ್ ಕಂಪೋಸರ್ : ಸೂರ್ಯ ಪ್ರಕಾಶ್
ಹಿನ್ನೆಲೆ ಗಾಯನ : ಚೇತನ್ ನಾಯಕ್ (Radiocity 91.1 super singer winner)
ಕೀಬೋರ್ಡ್ : ರೋಹಿತ್ ವಿಜಯನ್
ಗಿಟಾರ್ : ಬಾಲ ಮತ್ತು ರಾಕೇಶ್
Rhythm, Song Mixed & Mastered : ನಿತಿಶ್ ಓಕೆ
ರೆಕಾರ್ಡಿಂಗ್ ಸ್ಟುಡಿಯೋ : ಸ್ವರಾಗ್ ಸ್ಟುಡಿಯೋ, ಬೆಂಗಳೂರು
ವಿಡಿಯೋ ಶೂಟಿಂಗ್ : ಕನೆಕ್ಟಿಕಟ್, ಅಮೇರಿಕಾ
ನಿರ್ದೇಶನ : ದೀಪಾ.ಜಿ
ಹಾಡು ರಚನೆ, ಛಾಯಾಗ್ರಹಣ ಮತ್ತು ನಿರ್ಮಾಣ : ನಾಗರಾಜ ಎಂ.

"Special thanks to Deepa Pathak and Amit Pathak for always supporting upcoming talents in Connecticut "
ಯಾವುದೋ ಒಂದು ಕಾರಣಕ್ಕಾಗಿ ಕುಟುಂಬದಿಂದ ಬೇರೆಯಾಗಿ ಪರಿತಪಿಸುವ ಹೃದಯ... ಮಗುವಿಗಾದರೂ ಮತ್ತೆ ಒಂದಾಗಲು ಒಮ್ಮೆ ಯೋಚಿಸಲಿ....
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications