ಆಕೆ ಅನುಭವಿಸುತ್ತಿದ್ದ ತಾಯ್ತನದ ಆನಂದ ವರ್ಣಿಸಲು ಅಸಾಧ್ಯ
ನನ್ನ ಮಗಳೊಡನೆ ಆ ಮಗುವಿಗೂ ಮೊಲೆಯುಡಿಸುತ್ತಾ ಕುಳಿತ ಅವಳನ್ನು, ಅವಳು ಅನುಭವಿಸುತ್ತಿದ್ದ ಆ ತಾಯ್ತನದ ಆನಂದವನ್ನು ಕಂಡಾಗ, ಅವಳು ನನಗೆ ಒಮ್ಮೊಮ್ಮೆ ಜಗನ್ಮಾತೆಯಂತೆಯೇ ಕಾಣುತ್ತಿದ್ದಳು. ಆ ಎಳೆಯ ಮಗುವನ್ನು ಅದೆಲ್ಲಿ ತಿರಸ್ಕರಿಸುವಳೋ, ಆ ಮಗುವಿನ ಪಾಡೇನಾಗುವುದೋ ಎಂದು ನನ್ನ ಮನದ ಮೂಲೆಯಲ್ಲಿದ್ದ ಆತಂಕವನ್ನೆಲ್ಲಾ ತೊಡೆದು ಹಾಕಿದ್ದಳು.
ಹೀಗೆಯೇ ಮೂರು ದಿನಗಳು ಕಳೆದಿದ್ದವು, ಆ ಮೂರು ದಿನಗಳಲ್ಲಿ ಎರಡೆರಡು ಎಳೆಯ ಮಕ್ಕಳನ್ನು ತನ್ನ ಎರಡೂ ಮೂಲೆಗಳಲ್ಲಿ ಹಾಲೂಡಿಸುತ್ತಾ, ಆ ಮಾತೃತ್ವದ ಆನಂದವನ್ನು ಅನುಭವಿಸುತ್ತಿದ್ದ ನನ್ನವಳ ಆನಂದಕ್ಕೆ ಕೊನೆಗೂ ಬ್ರೇಕ್ ಬಿದ್ದಿತ್ತು!
ಆ ಮಗು ನಮ್ಮ ಮನೆಗೆ ಬಂದ ನಾಲ್ಕನೆಯ ದಿನ ಬೆಳ್ಳಂಬೆಳಿಗ್ಗೆ ಧಡಧಡನೆ ಬಾಗಿಲು ಬಡಿದ ಸದ್ದಿಗೆ ನಾನು ಧಡಾರನೆದ್ದು ಹೋಗಿ ಬಾಗಿಲು ತೆರೆದಿದ್ದೆ, ಅಲ್ಲಿ ಅದೇ ಕೃಶದೇಹದ ಕಪ್ಪು ಹೆಂಗಸು ಆರ್ತವಾಗಿ ನಿಂತಿದ್ದಳು. (ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು)

ಆಕೆಯನ್ನು ಒಳಗೆ ಬರಲು ಹೇಳಿ ನಾನು ಹಿಂದಿರುಗಿದೆ, ನನ್ನ ಹಿಂದೆಯೇ ಬಂದ ಆಕೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಥಟಾರನೆತ್ತಿಕೊಂಡು ಮುದ್ದಾಡಲಾರಂಭಿಸಿದ್ದಳು.
ಆಗಿನ್ನೂ ನಿದ್ದೆಯೆಂದಿದ್ದ ನನ್ನವಳು ಇದೇನೆಂದರಿಯದೆ ಮೂಕವಾಗಿ ಕುಳಿತು ಆಕೆಯ ನಡವಳಿಕೆಯನ್ನೇ ಗಮನಿಸುತ್ತಿದ್ದಳು. ತನ್ನ ಮಗುವನ್ನು ಕೈಗೆತ್ತಿಕೊಂಡ ಆಕೆ ತನ್ನ ಸೆರಗನ್ನು ಕಿತ್ತೆಸೆದು, ತನ್ನ ಮಗುವಿಗೆ ಮೊಲೆಯೂಡಿಸಿ ಆ ಮಗು ಚಪ್ಪರಿಸಿ ಹಾಲನ್ನು ಹೀರುವಾಗ ಕಣ್ಮುಚ್ಚಿ ತನ್ನ ತಾಯ್ತನದ ಆನಂದವನ್ನು ಅನುಭವಿಸುತ್ತಿದ್ದಳು.
ಕಿರ್ರೆಂದು ಅಳುತ್ತಾ ಎದ್ದ ನನ್ನ ಮಗಳಿಗೆ ನನ್ನ ಅರ್ಧಾಂಗಿ ತನ್ನ ಮೊಲೆಯೂಡಿಸಿ ಅವಳನ್ನು ಸಮಾಧಾನಿಸುತ್ತಾ ಆ ಹೆಣ್ಣು ಬೆಳ್ಳಂಬೆಳಗ್ಗೆ ನಮ್ಮ ಮನೆಗೆ ಬಂದಿದ್ದೇಕೆಂಬ ಪ್ರಶ್ನಾರ್ಥಕ ಚಿಹ್ನೆಯನ್ನು ಮುಖದ ತುಂಬಾ ತುಂಬಿಕೊಂಡು ಕುಳಿತಿದ್ದಳು.
ಕೊನೆಗೆ ಆ ಅಸಾಧ್ಯ ಮೌನವನ್ನು ಬೇಧಿಸಿ ನಾನೇ ಮಾತಿಗಾರಂಭಿಸಿದ್ದೆ, ಆಕೆ ಮೂರು ದಿನ ಎಲ್ಲಿಗೆ ಹೋಗಿದ್ದಳು, ಈಗ ಬಂದಿದ್ದು ಯಾಕೆ ಎಂದ ನನ್ನ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ,,, ಬಹುಶಃ ಜೀವನದಲ್ಲಿ ನಾನೆಂದಿಗೂ ಮರೆಯಲಾಗದಂಥದ್ದಾಗಿತ್ತು!
ಅಣ್ಣಾ...ನಾನು ನನ್ನ ತವರು ಮನೆಗೆ ಹೋದೆ, ಅವರು ಸೇರಿಸಲಿಲ್ಲ, ಗಂಡನ ಮನೆಯವರು ಸಹಾ ನನ್ನನ್ನು ಸೇರಿಸಲಿಲ್ಲ! ನನಗಾದ ಅವಮಾನ, ನೋವು ಎಲ್ಲವನ್ನೂ ಸಹಿಸಿಕೊಂಡೆ, ಆದರೆ ಮೂರು ದಿನಗಳಿಂದ ಒಂದೇ ಸಮನೆ ನನ್ನ ಎದೆಯಲ್ಲಿ ಸುರಿಯುತ್ತಿರುವ ಹಾಲನ್ನು ನಾನು ತಡೆಯಲಾಗಲೇ ಇಲ್ಲ!
ನನಗೆ ನನ್ನ ಮಗುವನ್ನು ಬಿಟ್ಟು ಇರಲು ಸಾಧ್ಯವೇ? ಇಲ್ಲಣ್ಣಾ.. ದಯವಿಟ್ಟು ನನ್ನ ಮಗುವನ್ನು ನನಗೆ ವಾಪಸ್ ಕೊಡಿ ಎಂದವಳ ಕಣ್ಣಲ್ಲಿ ಧಾರಾಕಾರವಾಗಿ ಕಂಬನಿ ಹರಿಯುತ್ತಿತ್ತು. ಮಗಳಿಗೆ ಹಾಲೂಡಿಸುತ್ತಾ ಅವಳ ಮಾತುಗಳನ್ನು ಕೇಳುತ್ತಾ ಕುಳಿತಿದ್ದ ನನ್ನವಳ ಕಣ್ಣಲ್ಲಿಯೂ ಕಂಬನಿ ತೊಟ್ಟಿಕ್ಕುತ್ತಿತ್ತು. (ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ರಕ್ಷಿಸಿದ ಮಹಾತಾಯಿ)

ಮೂರು ದಿನಗಳ ಕಾಲ ನಮ್ಮ ಮನೆ ಮನ ತುಂಬಿದ್ದ ಪುಟ್ಟ ಮಗು ಈಗ ಮರಳಿ ತನ್ನ ತಾಯ್ತೆಕ್ಕೆಗೆ ಸೇರಿತ್ತು. ನಾನು ಕೊಟ್ಟ ಹಣವನ್ನು ಹಿಂದಿರುಗಿಸಲು ಬಂದವಳ ಕೈಗೆ ಮತ್ತಷ್ಟು ಹಣ ನೀಡಿ, ಮುಂದೆ ಯಾವುದೇ ಸಮಯದಲ್ಲಿ ಯಾವುದಾದರೂ ಸಹಾಯ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸುವಂತೆ ತಿಳಿಸಿ ಬಸ್ ಹತ್ತಿಸಿ ಬಂದಿದ್ದೆ.
ಆ ನಂತರ ಆಕೆ ಅದೆಲ್ಲಿ ಹೋದಳೋ, ಏನಾದಳೋ, ಆ ಮಗು ಹೇಗಿದೆಯೋ ಒಂದೂ ತಿಳಿಯಲಿಲ್ಲ! ಕಾಲನ ಹೊಡೆತಕ್ಕೆ ಸಿಕ್ಕ ನಾನು ತಿಪಟೂರಿನಿಂದ ಬೆಂಗಳೂರಿಗೆ, ಅಲ್ಲಿಂದ ದುಬೈಗೆ ಬಂದೆ. ಆದರೂ ಅಮ್ಮನ ದಿನದಂದು ಆ ಅಸಹಾಯಕ ಹೆಣ್ಣು ಹಾಗೂ ಅವಳ ಮುದ್ದಾದ ಗಂಡು ಮಗುವಿನ ನೆನಪು ಮಾತ್ರ ನನ್ನ ಮನಸ್ಸಿನಲ್ಲಿ ಚಿರನೂತನ!
ಅಮ್ಮ ಎಂದರೆ ಆಕಾಶವಲ್ಲವೇ,,,,ಅವಳ ಪ್ರೀತಿಗೊಂದು ಕೊನೆಯುಂಟೆ? ಎಲ್ಲಾ ಅಮ್ಮಂದಿರಿಗೂ ವಿಶ್ವ ಅಮ್ಮನ ದಿನದ ಹಾರ್ಥಿಕ ಶುಭಾಶಯಗಳು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications