ಪ್ರತಿಭೆಗಳ ಸಂಗಮ, ಸಿಂಗಾರ ಉತ್ಸವದ ಸಂಭ್ರಮ
ಕಲ್ಪನೆಗಳ ಗರಿಗೆದರಿ ಹಾರಿ ದೂರ
ನನಸಾಗಿಸುವೆಡೆಗಿನ ಹಾದಿಯ ಕಾತುರ
ಹೊಸತನದ ಛಲವ ತೊಟ್ಟು ನಿಂತಿದೆ ಕಲೆಗಳ ಸಂಗಮ
ಬೆಳಕಿನಡಿಯಲಿ ರಂಗಿನಾಟದ ಸಿಂಗಾರ
ಸೇರಿ ನಲಿಯುವ ಹಬ್ಬದ ಸಡಗರ
ತಮ್ಮ ತನ್ಮೆಯ ಬಿಂಕ ಬೀರುವ ಸಂಭ್ರಮ
ಮಾರ್ಚ್ ತಿಂಗಳ ಮೊದಲಾರ್ಧದಲ್ಲಿ ಸಿಂಗನ್ನಡಿಗರು ಕನ್ನಡ ಸಂಘ (ಸಿಂಗಪುರ)ದಿಂದ ಪ್ರತಿ ವರ್ಷ ಸ್ಥಳೀಯ ಪ್ರತಿಭೆಗಳನ್ನು ಒಟ್ಟುಗೂಡಿಸಿ ಆಚರಿಸುವ 'ಸಿಂಗಾರ ಉತ್ಸವ'ವನ್ನು ಎದುರು ನೋಡುವುದು ವಾಡಿಕೆಯಾಗಿಬಿಟ್ಟಿದೆ. ವಯೋಭೇದವಿಲ್ಲದೆ ಸಿಂಗನ್ನಡಿಗರಿಂದ, ಸಿಂಗನ್ನಡಗರಿಗೋಸ್ಕರ ಸೇರಿ ಹಾಡಿ, ಕುಣಿದು ನಲಿಯುವ ಸಂಭ್ರಮದಾಚರಣೆಯನ್ನು ಈ ವರ್ಷ ಮೇ 17ರಂದು, ಸ್ಪ್ರಿಂಗ್ ಸಿಂಗಪುರದ ಸಭಾಂಗಣದಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

'ಸಂಗಮ-ಸಂಭ್ರಮ'ವೆಂಬ ಶೀರ್ಷಿಕೆಯಡಿಯಲ್ಲಿ ರೂಪುಗೊಂಡ ಈ ಕಾರ್ಯಕ್ರಮವನ್ನು ಸಿಂಗಪುರದ 50ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಂಗಪುರದಲ್ಲೆಡೆ ನಡೆಯುತ್ತಿರುವ 'SG50' ಆಚರಣೆಗಳಿಗೆ ಮುಡಿಪಾಗಿಡಲಾಗಿತ್ತು. ಇದೇ ನಿಟ್ಟಿನಲ್ಲಿ ಆಧುನಿಕ ಸಿಂಗಪುರದ ಕರ್ತೃ, ಶಿಲ್ಪಿ ಹಾಗೂ ಸಿಂಗಪುರದ ಅಭಿವೃದ್ಧಿಯ ಜನಕ ಎಂದೇ ಕರೆಯಲಾಗುವ ದಿ. Lee Kuan Yew ಅವರ ಶ್ರದ್ಧಾಂಜಲಿಯನ್ನು ಸಲ್ಲಿಸಿದ ನಂತರ ಕಾರ್ಯಕ್ರಮದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಾರಂಭಮಾಡಲಾಯಿತು. [ಸಿಂಗಪುರದ 'ಸಿಂಹ' ಲೀ ಕುಆನ್ ಯೂ, ನುಡಿನಮನ]
'ಕನ್ನಡ ಕಲಿ' ಮಕ್ಕಳಿಂದ ಗಣೇಶನ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮವು ಸತತವಾಗಿ ಆರು ಗಂಟೆಗಳ ಕಾಲ ನಿರಾಯಾಸವಾಗಿ ಸಭಿಕರನ್ನು ಭಕ್ತಿಗೀತೆ, ಭಾವಗೀತೆ, ಶಿಶುಗೀತೆ, ಚಿತ್ರಗೀತೆ, ಜಾನಪದ ಗೀತೆ, ಹರಿದಾಸರ ಕೀರ್ತನೆಗಳ ಗಾಯನ, ವಾದನ ಹಾಗೂ ಏಕ, ಯುಗಳ ಹಾಗೂ ಸಮೂಹ ಕಲಾವಿದರ ನೃತ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ವಿವಿಧ ಕಲೆಗಳ ಆಗರವಾಗಿದ್ದ ರಂಗಮಂದಿರ, ಅನೇಕ ನದಿಗಳು ಬಂದು ಸೇರಿದ ಕಲಾಸಾಗರದಂತೆ ತೋರುತಿತ್ತು. ಪೌರಾಣಿಕ ಕಿರು ನಾಟಕ 'ಭಕ್ತ ಪ್ರಹ್ಲಾದ', ಅರ್ಜುನ-ಬಬ್ರುವಾಹನರ ಸಂವಾದದ ಏಕಪಾತ್ರಾಭಿನಯ, ಮೂಕಾಭಿನಯದ ಮೂಲಕ ನೀಡಿದ 'ಮೌನ ಸಂದೇಶ', ಪ್ರಹಸನ, ಹಾಸ್ಯ ಬಾಷಣ, ಖ್ಯಾತ ನಟರ ರಾಜಕಾರಣಿಗಳ ಅಣಕ ಇನ್ನೂ ಅನೇಕ ವೈವಿಧ್ಯಮಯ 50 ಕಾರ್ಯಕ್ರಮಗಳ ಈ ಅಪೂರ್ವ ಸಂಗಮದಲ್ಲಿ 160 ಸ್ಥಳೀಯ ಕಲಾವಿದರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಸಂಘದ ಹೆಮ್ಮೆಯ ದ್ವೈವಾರ್ಷಿಕ ಪತ್ರಿಕೆ 'ಸಿಂಗಾರ ಪತ್ರಿಕೆ -2015'ಯು ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ, ಸಂಪಾದಕರಾದ ಗಿರೀಶ್ ಜಮದಗ್ನಿ, ಸಹಾಯ ಮಾಡಿದ ರೇಖಾ ಹೆಗಡೆ, ವೆಂಕಟ್ ಅವರೊಂದಿಗೆ ಸಂಘದ ಮಾಜಿ ಅಧ್ಯಕ್ಷರಾದ ಪ್ರಭುದೇವ ಮತ್ತು ಮೈತ್ರೇಯಿ ಜಗದೀಶ್ ಅವರ ಸಮ್ಮುಖದಲ್ಲಿ ಅನಾವರಣಗೊಂಡಿತು. [ನಮ್ಮೂರಿನ ಸುದ್ದಿ ಕೊಡಿ ಸ್ವಾಮೀ : ಗಿರೀಶ್ ಜಮದಗ್ನಿ]
ಅಂತಿಮವಾಗಿ, 'ಸಿಂಗಾರ ಉತ್ಸವ'ದಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಭೆಗಳು ಒಂದುಗೂಡಿ, ಭಾರತದ ವಿವಿಧ ರಾಜ್ಯಗಳನ್ನು ಬಿಂಬಿಸುವ ಸಂಗೀತಕ್ಕೆ ಆಯಾ ಪ್ರದೇಶದ ನೃತ್ಯ ಪ್ರಕಾರಗೊಳಿಂದ ಕುಣಿದು ನಲಿದು, ಸಿಂಗಪುರದಲ್ಲಿ ಒಗ್ಗೂಡಿದ ಭಾರತೀಯರ 'ಸಂಗಮ'ವೆನ್ನುವ ಸಂದೇಶವನ್ನು ಸಾರಿ, ಜೊತೆಯಾಗಿ ಕೂಡಿ SG50 ಅನ್ನು ಆಚರಿಸುವ 'ಸಂಭ್ರಮ'ವನ್ನು ಮೆರೆದರು.
ಕಾರ್ಯಕ್ರಮವನ್ನು ನಿಭಾಯಿಸಿ, ಯಶಸ್ವಿಯಾಗುವಲ್ಲಿ ಶ್ರಮಿಸಿದ ಎಲ್ಲಾ ಸ್ವಯಂ-ಸೇವಕರಿಗೆ ಕನ್ನಡ ಸಂಘ (ಸಿಂಗಪುರ) ಹಾಗೂ 'ಸಿಂಗಾರ ಉತ್ಸವ' ಉಪ ಸಮಿತಿಯ ಸದಸ್ಯರಾದ ಉಪಾಧಕ್ಷೆ ಕವಿತಾ ರಾಘವೇಂದ್ರ, ವೆಂಕಟ್, ವೆಂಕಟೇಶ್ ಗದ್ದೆಮನೆ, ಗಿರೀಶ್ ಜಮದಗ್ನಿ, ಶ್ರೀವಿದ್ಯಾ ವೆಂಕಟೇಶ್ ಹಾಗೂ ಭಾರ್ಗವಿ ಆನಂದ್ ಅವರ ಧನ್ಯವಾದಗಳು. ಈ ಕಾರ್ಯಕ್ರಮವನ್ನು ಆಯೋಜಿಸಲು ನೆರವಾದ ಮುಖ್ಯ ಪ್ರಾಯೋಜಕರು Cube 9 Capital Group, ಸಹ ಪ್ರಾಯೋಜಕರಾದ Organic Yogi ಹಾಗೂ Padaki Tours & Travels (Bangalore) ಅವರಿಗೆ ಕನ್ನಡ ಸಂಘ (ಸಿಂಗಪುರ)ದ ಶುಭ ಹಾರೈಕೆಗಳು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications