ಎತ್ತಣ ಜೆಡಿಎಸ್ - ಎತ್ತಣ ಕಾಂಗ್ರೆಸ್, ಎತ್ತಣಿಂದೆತ್ತ ಸಂಬಂಧವಯ್ಯ?
ಅಂತೂ ಅತ್ತೂ ಕರೆದೂ.. ನಂಗೆ ಹುಷಾರಿಲ್ಲ, ಸಾಯೋ ಹಾಗೆ ಇದೀನಿ... ಹುಷಾರಾಗಬೇಕು ಅಂದ್ರೆ ನನ್ನ ಸಿಎಂ ಮಾಡಿ ಅಂತ ಗೋಗರೆದ ಕುಮಾರಣ್ಣ... ಇದು ನಂದು ಕಡೆ ಚುನಾವಣೆ... ನನ್ನನ್ನೇ ಗೆಲ್ಲಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಅಂತ ದರ್ಪದಿಂದಲೇ ಕೇಳಿದ ಸಿದ್ರಾಮಣ್ಣ...
ಹಾವು - ಮುಂಗಸಿಯ ತರಹ ಹೋರಾಡಿ - ನಂತರ ಕೈ-ಕೈ ಮಿಲಾಯಿಸಿ ಅಂತೂ ಅಧಿಕಾರ ಹಿಡಿದಿದ್ದಾರೆ. ಇದ್ದರೂ ರಾಜ್ಯದ ಮುಕ್ಕಾಲು ಭಾಗ ಜನರ ವಿರೋಧ!
ಎತ್ತಣ ಜೆಡಿಎಸ್ - ಎತ್ತಣ ಕಾಂಗ್ರೆಸ್
ಎತ್ತಣಿಂದೆತ್ತ ಸಂಬಂಧವಯ್ಯ...? ಅಂತಾ ಕೇಳುವಿರಾ...
ಅದೇ ಅಧಿಕಾರದ ಮಹಿಮೆಯಯ್ಯ...!

ಒಂದು ರೀತಿಯಲ್ಲಿ ಬಿಜೆಪಿ ಈ ಬಾರಿ ವಿರೋಧ ಪಕ್ಷದಲ್ಲೇ ಕೂತಿರೋದು ಅವರ ಪಕ್ಷಕ್ಕೇ ಒಳಿತು. ಸುಮ್ಮನೆ ಜೆಡಿಎಸ್-ಕಾಂಗ್ರೆಸ್ ಎಂಎಲ್ಎಗಳನ್ನು ಕರೆದುತಂದು ಅವರಿಂದ ಇನ್ನೂ ಹೆಚ್ಚಿನ ಕಷ್ಟ ತಂದುಕೊಂಡು, ಸರಿಯಾಗಿ ಕೆಲಸ ಮಾಡಲಾಗದೆ ಜನರಿಂದ ತಿರಸ್ಕಾರ ಮಾಡಿಸಿಕೊಳ್ಳೋಬದ್ಲು... ಜನಗಳ ಸಮಸ್ಯೆಗಳಿಗೆ ಸ್ಪಂದಿಸಿ, ಮುಂದಿನ ಲೋಕಸಭಾ ಚುನಾವಣಾ ಕಡೆ ಗಮನ ಕೊಟ್ಟು... ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ದೇಶದ ಸುಭದ್ರತೆಗೆ ಮೋದಿಜಿಯವರ ಕೈ ಬಲಪಡಿಸಿದರೆ ಅದಕ್ಕಿಂತ ಮತ್ತೇನು ಬೇಕು?
ಏನೇ ಹೇಳಿ... ಈ ಚುನಾವಣೆಯಿಂದ ಮತ್ತೆ ರುಜುವಾತಾಗಿದ್ದು ರಾಜಕಾರಣಿಗಳಿಗೆ ಇರೋದು ಎರಡು ನಾಲಿಗೆ ಅಲ್ಲ... ಇನ್ನು ಹೆಚ್ಚಿಗೆ ಅಂತ. ಮತದಾರರು ಕಲಿತ ಪಾಠ ಏನೆಂದ್ರೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಹಾಕಿ.. ಯಾವುದಾದ್ರು ಒಂದು ಪಕ್ಷಕ್ಕೆ ಬಹುಮತ ಬರೋ ಹಂಗೆ ಮಾಡ್ಬೇಕು ಅಂತ.
ಇಲ್ಲಾ ಅಂದ್ರೆ, ಈ ಮಿಶ್ರ ಸರ್ಕಾರದ ಮಿತ್ರರು... ಹೀಗೆಯೇ ಮಿತ್ರರಾಗಿರ್ತಾರೆ ಅಂತ ಹೆಂಗೆ ನಂಬೋದು ಅವ್ರನ್ನ? ಯಾಕೆಂದ್ರೆ ಅವರು ನುಡಿಯೋದೇ ಒಂದು... ಮಾಡೋದೇ ಒಂದು.
ಕಳೆದ ಎರಡು ತಿಂಗಳಿಂದ ತಮ್ಮ ಬಗ್ಗೆನೇ ಹೆಚ್ಚು ಬಾರಿ ಮಾತಾಡ್ತಿದ್ದುದನ್ನು ಕೇಳಿದ ವಿಶ್ವಮಾನವರಾದ ಶ್ರೀ ಜಗಜ್ಯೋತಿ ಬಸವಣ್ಣನವರು... ಹೀಗೇನು ಅಂದುಕೊಳ್ತಿದ್ದಾರೋ ಏನೋ... ಅಲ್ವಾ?
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯಾ?
ಹೊಸ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ... ಬಸವಣ್ಣನವರ ಮೇಲಿನ ವಚನವನ್ನು ಈ ಬಾರಿಯಾದ್ರು ಪಾಲನೆ ಮಾಡಿ ಅಂತಾ ಹೇಳುತ್ತಾ.... ಮುಂದಿನ ದಿನಗಳತ್ತ ಆಶಾಭಾವನೆಯಿಂದ ನೋಡುತ್ತಿರುವ... ಇಂತಿ ನಾಗರಾಜ್ ಎಂ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications