ಅಮೆರಿಕದಲ್ಲಿ ಕನ್ನಡ ಕುಡಿ ಅಮಲಾಳ ಭರತನಾಟ್ಯ ರಂಗಪ್ರವೇಶ
ದಿನಾಂಕ 18 ಜೂನ್, 2016ರಂದು ಶನಿವಾರ ಸಂಜೆ, ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಹಾಯೊ ರಾಜ್ಯದ ಕ್ಲೀವ್ಲೆಂಡ್ ನಗರದಲ್ಲಿ ವೈದ್ಯರಾಗಿರುವ ಡಾ. ನವೀನ್ ಉಳಿ, ಮತ್ತು ಪುಷ್ಪಲತಾ ಉಳಿ ಅವರ ಮಗಳು ಅಮಲಾ ಮಾನಸಾ ಉಳಿಯ ಭರತನಾಟ್ಯ ರಂಗಪ್ರವೇಶದ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಪ್ರಾರಂಭ ನೃತ್ಯಾಂಜಲಿಯೊಂದಿಗೆ ಆಯಿತು. ನಂತರ ಮಹಾಗಣಪತಿಂ ಭಜೇ.., ಮತ್ತು ಭಾವಯಾಮಿ ರಘುರಾಮಮ್. ರಾಮಾಯಣದ ಈ ರಾಗಮಾಲಿಕೆಯನ್ನು ರಾಮಾಯಣದ ವಿವಿಧ ಪಾತ್ರಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ನೃತ್ಯಾಭಿನಯದಿಂದ ಬಣ್ಣಿಸಿದ ಅಮಲಾ ತನ್ನ ಪ್ರತಿಭೆಯ ಅದ್ಭುತ ಪ್ರದರ್ಶನ ನೀಡಿದಳು. [ರಂಗದ ರಂಗೇರಿಸಿದ ಸಂಜನಾ, ರಿನಿಜಾ ರಂಗಪ್ರವೇಶ]

ಮಧ್ಯವಿರಾಮದ ನಂತರ ಪುರಂದರದಾಸರ 'ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ', ಮತ್ತು 'ಆಡ ಹೋದಲ್ಲಿ ಮಕ್ಕಳು ಆಡಿಕೊಳ್ಳುವರೆ' ಈ ಎರಡು ಕೃತಿಗಳಲ್ಲಿ ಕ್ರಮವಾಗಿ ಪೌರಾಣಿಕ ಶಿವನ ಬಗೆಬಗೆಯ ರೂಪಗಳನ್ನು ಮತ್ತು ಕೃಷ್ಣನ ಬಾಲ ಲೀಲೆಗಳ ಸಂಕೀರ್ಣ ಭಾವಗಳನ್ನು ಬಹಳ ಲಾಲಿತ್ಯದಿಂದ ಪ್ರದರ್ಶಿಸಿದಳು. ಅಭಿನಯಿಸುತ್ತಿರುವ ಪಾತ್ರಗಳನ್ನು ಅರ್ಥೈಸಿಕೊಂಡು ಪ್ರದರ್ಶಿಸುವ ಸಾಮರ್ಥ್ಯವನ್ನು ತೋರಿದ ಅಮಲಾ ಬಹಳ ಪ್ರಬುದ್ಧ ನರ್ತಕಿಯಾಗುವ ಭರವಸೆಯನ್ನು ಮೂಡಿಸಿದಳು.
ಒಂದು ತಿಲ್ಲಾನದ ನಂತರ ಪುರಂದರದಾಸರ 'ಪಂಕಜ ಮುಖಿಯರು ವೆಂಕಟರಮಣಗೆ' ಮಂಗಳವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಮುಗಿಯಿತು.
ಭಾರತದಿಂದ ಬಂದಿದ್ದ ಕಲಾವಿದರಾದ ಪುಸ್ತಕಂ ರಮಾ (ಗಾಯಕಿ), ಜನಾರ್ದನರಾವ್ (ಮೃದಂಗ), ಜಯರಾಮ್ ಕಿಕ್ಕೇರಿ (ಕೊಳಲು), ಮತ್ತು ಭಾರ್ಗವ ಹಾಲಂಬಿ (ರಿದಮ್ ಪ್ಯಾಡ್) ತಮ್ಮ ಸಂಗೀತದಿಂದ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು. [ಮನರಂಜಿಸುವ ನರ್ತನದ ಮನಮೋಹಕ ಚಿತ್ರಗಳು]

ಅಮಲಾ ಅಮೆರಿಕದಲ್ಲೇ ಹುಟ್ಟಿ ಬೆಳೆದ ಕನ್ನಡದ ಕುಡಿ. ಆರನೆಯ ವರ್ಷದಿಂದಲೇ ಭರತನಾಟ್ಯ ಕಲಿಯುತ್ತಿದ್ದಾಳೆ. ಕೇವಲ ಭರತನಾಟ್ಯ ಮಾತ್ರವಲ್ಲ, ಕೊರಿಯನ್ ಸಮರಕಲೆಯಾದ ಟೇ ಕ್ವಾನ್ ಡೊದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಕ್ಲೀವ್ಲೆಂಡ್ ನ ಸೋಲನ್ ಹೈಸ್ಕೂಲ್ ನ ವಿದ್ಯಾರ್ಥಿನಿಯಾದ ಅಮಲಾ, ಶಾಲೆಯ ಸಿಂಫೊನಿಯಾ ಆರ್ಕೆಸ್ಟ್ರಾದಲ್ಲಿ ಕೂಡಾ ಭಾಗವಹಿಸುತ್ತಾಳೆ. ಮುಂದಿನ ವರ್ಷಕ್ಕೆ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಲಿದ್ದಾಳೆ.
ಅವಳ ಗುರು ಸುಜಾತಾ ಶ್ರೀನಿವಾಸನ್ ಒಹಾಯೊ ರಾಜ್ಯದಲ್ಲಿರುವ ಶ್ರೀ ಕಲಾಮಂದಿರದ ಸಂಸ್ಥಾಪಕಿ. ಭಾರತದಿಂದ ದೂರದಲ್ಲಿದ್ದರೂ ಭಾರತೀಯ ಶಾಸ್ತ್ರೀಯ ಕಲೆಗಳನ್ನು ಉಳಿಸಿ, ಬೆಳೆಸಲು ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications